BBK 11 Grand Finale Live:ಬಿಗ್‌ ಬಾಸ್ ಕನ್ನಡ 11 ತ್ರಿವಿಕ್ರಮ್‌ಗೆ ಟಕ್ಕರ್ ಕೊಟ್ಟು ಗೆದ್ದು ಬೀಗಿದ ಹನುಮಂತ

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ಕ್ಕೆ ತೆರೆ ಎಳೆಯುವ ಸಮಯ. ಇನ್ನೇನು ಕೆಲವೇ ಗಂಟೆಗಳಲ್ಲಿ ಬಿಗ್‌ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆ ಆರಂಭ ಆಗುತ್ತಿದೆ. ಅದಕ್ಕಾಗಿ ವೇದಿಕೆ ಕೂಡ ಸಜ್ಜಾಗಿದೆ. 17ನೇ ವಾರಗಳ ಜರ್ನಿ ಇನ್ನೇನು ಮುಕ್ತಾಯ ಆಗುತ್ತಿದೆ. ಮೊದಲು 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆನಂತ್ರ 3 ಮಂದಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು.

17 ಮಂದಿ ಸ್ಪರ್ಧಿಗಳಲ್ಲಿ ನಾಲ್ಕು ಮಂದಿ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರಲ್ಲಿ ಇಬ್ಬರು ಮನೆಯೊಳಗೆ ಇದ್ದಾರೆ. ಒಟ್ಟು ಆರು ಮಂದಿ ಬಿಗ್ ಬಾಸ್ ಕನ್ನಡ 11 ಕಿರೀಟಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ, ಭವ್ಯಾ ಗೌಡ, ರಜತ್ ಕಿಶನ್, ತ್ರಿವಿಕ್ರಮ್ ಬಿಗ್ ಬಾಸ್‌ ಗ್ರ್ಯಾಂಡ್ ಫಿನಾಲೆ ತಲುಪಿದ್ದಾರೆ. ಇವರಲ್ಲಿ ಯಾರಿಗೆ ಪಟ್ಟಾಭಿಷೇಕ ಅನ್ನೋದು ಇನ್ನು ಕೆಲವೇ ಗಂಟೆಗಳಲ್ಲಿ ಹೊರ ಬೀಳಿದೆ.

Bigg Boss Kannada Season 11 Grand Finale Live Updates Winner Contestants Host kichcha Sudeep

ಬಿಗ್ ಬಾಸ್ ಕನ್ನಡ 11 ಕಿರೀಟ ಮುಡಿಗೇರಿಸಿಕೊಳ್ಳುವ ಫೇವರಿಟ್ ಲಿಸ್ಟ್‌ನಲ್ಲಿ ಹನುಮಂತ, ತ್ರಿವಿಕ್ರಮ್, ಉಗ್ರಂ ಮಂಜು ಇದ್ದಾರೆ. ಇನ್ನು ಈ ಬಾರಿ ಮಹಿಳೆಯರಿಗೆ ಕಿರೀಟ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಭವ್ಯಾ ಗೌಡ, ಮೋಕ್ಷಿತಾ ಪೈ ಇಬ್ಬರಲ್ಲಿ ಒಬ್ಬರಿಗೆ ಕಿರೀಟ ಎನ್ನಲಾಗುತ್ತಿದೆ. ಹಾಗೇ ಈ ಬಾರಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ರಜತ್ ಕಿಶನ್‌ ವಿನ್ನರ್ ಅಂತಿದ್ದಾರೆ ಅಭಿಮಾನಿಗಳು. ಹೀಗಾಗಿ ರಂಗೇರುತ್ತಿರುವ ಬಿಗ್‌ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಯ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗುತ್ತೆ.

  • Jan 26, 2025 11:52 PM
    ಬಿಗ್ ಬಾಸ್ ಗೆದ್ದ ಹನುಮಂತ

    ಕೊನೆಯ ವಾರದಿಂದಲೂ ಈ ಬಾರಿ ಬಿಗ್ ಬಾಸ್ ಗೆಲ್ಲೋದು ಹನುಮಂತು ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. ಬಿಗ್ ಬಾಸ್ ಗೆಲ್ಲುವ ವ್ಯಕ್ತಿಗೆ 5 ಕೋಟಿಗೂ ಅಧಿಕ ವೋಟ್‌ಗಳು ಬಿದ್ದಿವೆ ಎಂದು ಕಿಚ್ಚ ಸುದೀಪ್ ಹೇಳಿದಾಗಲೂ ಅದನ್ನು ಹನುಮಂತುಗೆ ಅಂತಲೇ ಚರ್ಚೆ ಆಗಿತ್ತು. ನಿರೀಕ್ಷೆಯಂತೆ ಬಿಗ್ ಬಾಸ್ ಕನ್ನಡ 11 ಗೆದ್ದು ಬೀಗಿದ್ದಾರೆ ಹಳ್ಳಿ ಹೈದ ಹನುಮಂತ.

  • Jan 26, 2025 11:40 PM
    ರಜತ್ 2ನೇ ರನ್ನರ್‌ ಅಪ್

    ಕಿಚ್ಚ ಸುದೀಪ್ ನಡೆಸಿಕೊಟ್ಟ ಬಿಗ್ ಬಾಸ್ ಕನ್ನಡ ಸೀಸನ್ 11 ಜರ್ನಿ ಇಂದಿಗೆ ಮುಗಿಯುತ್ತಿದೆ. ಕೊನೆಯಲ್ಲಿ ಮೂರು ಮಂದಿ ಉಳಿದುಕೊಂಡಿದ್ದರು. ರಜತ್ ಕಿಶನ್, ತ್ರಿವಿಕ್ರಮ್ ಹಾಗೂ ಹನುಮಂತ ಮೂವರು ಮಂದಿ ವೇದಿಕೆ ಮೇಲೆ ಇದ್ದರು. ಮೂವರು ಮಂದಿಗಳ ಪೈಕಿ ಯಾರು ಗೆಲ್ಲುತ್ತಾರೆ? ಯಾರು ಎರಡನೇ ರನ್ನರ್ ಅಪ್ ಆಗುತ್ತಾರೆ? ಅನ್ನೋ ಟೆನ್ಷನ್ ಶುರುವಾಗಿತ್ತು. ಕೊನೆಗೂ ನಿರೀಕ್ಷೆಯಂತೆ ರಜತ್ 2ನೇ ರನ್ನರ್ ಅಪ್ ಆದರು.

  • Jan 26, 2025 10:31 PM
    ದಾನ ಧರ್ಮ ಮತ್ತು ಮಾತು

    ಟಾಪ್ ಐದನೇ ಕಂಟೆಸ್ಟೆಂಟ್ ಆಗಿ ಕೊನೆಗೆ ಮನೆಯಿಂದ ಹೊರ ನಡೆದ ಮಂಜು ಅವರು ವೇದಿಕೆ ಮೇಲೆ ಸುದೀಪ್ ಜೊತೆಗೆ ಮಾತನಾಡಿದರು. ಈ ವೇಳೆ ಗಿಫ್ಟ್ ಹ್ಯಾಂಪರ್ ಗಳನ್ನು ಪಡೆದ ಮಂಜು ಅವರಿಗೆ ವಾಕ್ ಮೇಟ್ ವತಿಯಿಂದ ಎರಡು ಲಕ್ಷ ಕ್ಯಾಶ್ ಪ್ರೈಸ್, ಎಕೋ ಪ್ಲಾನೇಟ್ ಅವರ ಕಡೆಯಿಂದ ಒಂದು ಲಕ್ಷ ಕ್ಯಾಶ್ ಪ್ರೈಸ್ ಮತ್ತು ಸಂಗೀತಾ ಮೊಬೈಲ್ಸ್ ವತಿಯಿಂದ ಐವತ್ತು ಸಾವಿರ ಮೌಲ್ಯದವೋಚರ್ ನೀಡಲಾಯ್ತು. ಆದರೆ, ಮಂಜು ಅವರು ವಾಕ್ ಮೇಟ್ ನೀಡಿದ ಎರಡು ಲಕ್ಷ ಬಹುಮಾನದ ಮೊತ್ತವನ್ನು ವಯಸ್ಸಾದವರಿಗೆ ನೀಡಿ ಎಂದು ಹೇಳಿದರು. ಬಳಿಕ ಎಕೋ ಪ್ಲಾನೆಟ್ ನೀಡಿದ ಒಂದು ಲಕ್ಷ ಮೊತ್ತವನ್ನು ಕೂಡ ಊರಿನಲ್ಲಿರುವ ರೈತರಿಗೆ ನೀಡಿ ಎಂದು ಮಂಜು ತಮ್ಮ ತಂದೆಗೆ ವೇದಿಕೆ ಮೇಲೆ ಹೇಳಿದರು. ಆಗ ಸಣ್ಣದಾಗಿ ಕೋಪ ಮಾಡಿಕೊಂಡ ಸುದೀಪ್ ಮಂಜು ಸಾಕು ಮಂಜು, ಸರ್ ನೀವೇ ರೈತರು ನೀವೇ ಇಟ್ಟುಕೊಳ್ಳಿ ಎಂದು ಸುದೀಪ್ ಮಂಜು ತಂದೆಗೆ ಹೇಳಿದರು. ಮೊದಲು ಎರಡು ಲಕ್ಷವನ್ನು ವಯಸ್ಸಾದವರಿಗೆ ಅಂತ ಕೊಟ್ಟಿದ್ದಾಗಿದೆ. ದಾನ ಮಾಡಬೇಕು. ಹಾಗಂತ ಇರುವುದನ್ನೆಲ್ಲಾ ಕೊಡುವುದಲ್ಲ. ಇದು ನಿನಗಿರಲಿ ಎಂದು ಮಂಜು ಮಾತನ್ನು ಕಿಚ್ಚ ತಡೆದರು.

  • Jan 26, 2025 9:54 PM
    ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ಮೋಕ್ಷಿತಾ

    ಬಿಗ್ ಬಾಸ್‌ ಮನೆಗೆ ಹೋಗಬೇಕು ಬಿಗ್ ಬಾಸ್ ಕಪ್ ಗೆಲ್ಲಬೇಕು ಎನ್ನುವುದು ಕನ್ನಡ ಚಿತ್ರರಂಗದಲ್ಲಿ ಧಾರಾವಾಹಿ ಲೋಕದಲ್ಲಿ ಅನೇಕರ ಕನಸು. ಈ ಕನಸನ್ನು ಇವತ್ತು ನನಸು ಮಾಡಿಕೊಳ್ಳುವ ಅವಕಾಶ ಐದು ಜನರಿಗಿತ್ತು. ಆ ಪೈಕಿ ಮೋಕ್ಷಿತಾ ಪೈ ಕೂಡ ಒಬ್ಬರು. ಆದರೆ.. ದುರಾದೃಷ್ಟವಶಾತ್ ಮೋಕ್ಷಿತಾ ಅವಕಾಶವನ್ನು ಕಳೆದುಕೊಂಡಿದ್ದಾರೆ. ಮನೆಯಿಂದ ಹೊರ ಬಂದಿದ್ದಾರೆ.ಬಿಗ್ ಬಾಸ್ ಮನೆಯ ಕೊನೆಯ ಹಂತದವರೆಗೆ ಹೋಗಿ ಎಡವಿದ್ದಾರೆ. ಮನೆಯಲ್ಲಿ ಇಲ್ಲಿಯವರೆಗೆ ಇದ್ದು ಒಮ್ಮೆಯೂ ಕ್ಯಾಪ್ಟನ್ ಆಗದ ಮೋಕ್ಷಿತಾ ಕಪ್ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ. ಭವ್ಯಾ ಗೌಡ ಅವರ ನಂತರ ಮನೆಯಿಂದ ಹೊರ ಬಂದಿದ್ದಾರೆ.

  • Jan 26, 2025 8:44 PM
    2 ಲಕ್ಷ ರೂ. ಕೊಟ್ಟ ಕಿಚ್ಚ ಸುದೀಪ್

    ಬಿಗ್ ಬಾಸ್ ಕನ್ನಡ 11 ರ ನಾಲ್ಕನೇ ರನ್ನರ್ ಅಪ್ ಆಗಿ ಹೊರ ಬಂದಿದ್ದಾರೆ. ಈ ವೇಳೆ ವೇದಿಕೆ ಮೇಲೆ ಉಗ್ರಂ ಮಂಜುಗೆ 2 ಲಕ್ಷ ರೂಪಾಯಿ ಹಣ ನೀಡಲಾಗಿತ್ತು. ಅದನ್ನು ಉಗ್ರಂ ಮಂಜು ಸಮಾಜ ಸೇವೆಗೆ ಬಳಸಲು ಮುಂದಾಗಿದ್ದರು. ವೇದಿಕೆ ಮೇಲೆ ಅದನ್ನು ಘೋಷಿಸಿದ್ದರು. ಇನ್ನೊಬ್ಬರು ಆಯೋಜಕರಿಂದ ಬಂದಿದ್ದ 1 ಲಕ್ಷ ರೂಪಾಯಿಯನ್ನು ರೈತರಿಗೆ ನೀಡುವಂತೆ ಹೇಳಿದ್ದರು. ಆಗ ಕಿಚ್ಚ ಸುದೀಪ್ ಮಧ್ಯೆ ಪ್ರವೇಶ ಮಾಡಿ ಆ ಎರಡು ಲಕ್ಷವನ್ನು ನಾನೇ ನೀಡುತ್ತೇನೆ ಎಂದು ಹೇಳಿ ಗಿಫ್ಟ್ ಆಗಿ ಬಂದ ಹಣವನ್ನು ಉಗ್ರಂ ಮಂಜುಗೆ ಒಪ್ಪಿಸಿದ್ದಾರೆ.

  • Jan 26, 2025 8:35 PM
    ದೋಸ್ತನಿಗೆ ಗೇಟ್‌ ಪಾಸ್ ಕೊಟ್ಟು ಮೋಕ್ಷಿತಾ ಆಯ್ಕೆ ಮಾಡಿದ್ದೇಕೆ? ಹನುಮಂತ ಕೊಟ್ಟ ಕಾರಣವೇನು?

    ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆಯಲ್ಲಿರುವ ಟಾಪ್ 5 ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿಯೇ ಅವರು ತೆಗೆದುಕೊಂಡಿದ್ದ ಗಟ್ಟಿ ನಿರ್ಧಾರಗಳನ್ನು ಕೆದಕಿದ್ದರು. ಹಾಗೇ ಹನುಮಂತನಿಗೆ ಗೆಳೆಯ ಧನರಾಜ್ ಅನ್ನು ಯಾಕೆ ಆಯ್ಕೆ ಮಾಡಲಿಲ್ಲ? ಎಂದು ಪ್ರಶ್ನೆ ಹಾಕಿದ್ದಾಗ ಹನುಮಂತ ಕೊಟ್ಟ ಉತ್ತರ ಎಲ್ಲರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋಕ್ಷಿತಾ ಆಯ್ಕೆ ಮಾಡಿದ್ದೇಕೆ? ಅನ್ನೋ ಕಾರಣವನ್ನೂ ನೀಡಿದ್ದಾರೆ.

  • Jan 26, 2025 8:22 PM
    ಉಗ್ರಂ ಮಂಜು 4ನೇ ರನ್ನರ್ ಅಪ್

    ಬಿಗ್ ಬಾಸ್ ಕನ್ನಡ ಸೀಸನ್ 11ರ 4ನೇ ರನ್ನರ್ ಅಪ್ ಆಗಿ ಉಗ್ರಂ ಮಂಜು ಹೊರ ಬಂದಿದ್ದಾರೆ. ಉಗ್ರಂ ಮಂಜು ಬಿಗ್ ಬಾಸ್ ಟ್ರೋಫಿ ಗೆಲ್ಲುವ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಉಗ್ರಂ ಮಂಜು ಕೂಡ ಬಿಗ್ ಬಾಸ್ ಟ್ರೋಫಿ ಗೆಲ್ಲುವ ಆತ್ಮ ವಿಶ್ವಾಸದಲ್ಲಿ ಇದ್ದರು. ಆದರೆ, ಅವರಿಗೆ ನಿರಾಸೆಯಾಗಿದೆ. ಉಗ್ರಂ ಮಂಜು ಅಭಿಮಾನಿಗಳಿಗೂ ಬೇಸರ ಉಂಟು ಮಾಡಿದೆ. ಉಗ್ರಂ ಮಂಜು ಅವರನ್ನು ವಿಶೇಷವಾಗಿ ಮನೆಯಿಂದ ಹೊರಗೆ ಕರೆದುಕೊಂಡು ಬಂದಿದ್ದಾರೆ.

  • Jan 26, 2025 8:21 PM
    ಉಗ್ರಂ ಮಂಜು ಕೊನೆಗೂ ಔಟ್

    ಬಿಗ್‌ಬಾಸ್ ಮನೆಯಿಂದ ಉಗ್ರಂ ಮಂಜು ಸರ್‌ಪ್ರೈಸ್ ಆಗಿ ಹೊರ ಬಂದಿದ್ದಾರೆ. ಮನೆಯೊಳಗೆ ಎಂಟ್ರಿ ಕೊಟ್ಟ ಡ್ಯಾನ್ಸರ್ಸ್ ಜೊತೆ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಇದು ಮನೆಯೊಳಗೆ ಉಳಿದ ಇನ್ನುಳಿದ ನಾಲ್ವರಿಗೂ ಅಚ್ಚರಿ ತಂದಿದೆ. ಮಂಜು ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂದು ಸಾಕಷ್ಟು ಜನ ಅಂದುಕೊಂಡಿದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾಗಿದೆ.

  • Jan 26, 2025 8:02 PM
    ಹಣ ಬೇಡ ವ್ಯಕ್ತಿತ್ವ ಮುಖ್ಯ

    ಬಿಗ್ ಬಾಸ್ ಫಿನಾಲೆಯಲ್ಲಿ ಇದೀಗ ವ್ಯಕ್ತಿತ್ವದ ವಿಚಾರ ಮುಂದಿರೋ ಹಣಕ್ಕೂ ಸಂಕಷ್ಟ ತಂದಿದೆ. ಕಿಚ್ಚ ಸುದೀಪ್ ಮನೆಯಲ್ಲಿರಯವ ಐದು ಸ್ಪರ್ಧಿಗಳಿಗೆ 5 ಲಕ್ಷದಿಂದ 12 ಲಕ್ಷದವರೆಗೂ ಅವಕಾಸ ನೀಡಿದ್ದಾರೆ. ಈಗ ಯಾರು ಒಪ್ಪಿಕೊಳ್ಳುತ್ತಾರೋ ಅವರು ಆ 12 ಲಕ್ಷ‌ಹಣ ತೆಗೆದುಕೊಂಡು ಹೋಗ್ತಾ ಇರಬಹುದು. ಆದರೆ ಮನೆಯಲ್ಲಿರುವ ಐದು ಮಂದಿಯಲ್ಲಿ ಗೆಲ್ಲುವ ತವಕವಿದೆ. ನಾನೇ ಕಪ್ ಗೆಲ್ಲಬಹುದು ಎಂಬ ಭರವಸೆ ಇರುವ ಕಾರಣ ಕಿಚ್ಚ ಸುದೀಪ್ ಕೊಟ್ಟಂತ ಅವಕಾಶವನ್ನು ಒಪ್ಪುತ್ತಿಲ್ಲ.

  • Jan 26, 2025 7:39 PM
    ಹನುಮಂತನ ಹಾಡು

    ಫಿನಾಲೆಯಲ್ಲಿ ತಮ್ಮೊಟ್ಟಿಗೆ ಉಳಿದ ನಾಲ್ಕು ಜನ ಸ್ಪರ್ಧಿಗಳ ಬಗ್ಗೆ ಹಾಡು ಹಾಡಿ ಹನುಮಂತ ರಂಜಿಸಿದ್ದಾರೆ. ತಮ್ಮ ಹಾಡಿನಲ್ಲೇ ತ್ರಿವಿಕ್ರಮ್, ರತನ್, ಮೋಕ್ಷಿತಾ, ಮಂಜು ಅವರನ್ನು ತಮ್ಮದೇ ಶೈಲಿಯಲ್ಲಿ ಬಣ್ಣಿಸಿದ್ದಾರೆ. ತ್ರಿವಿಕ್ರಮ್ ರೀತಿಯ ಮಗ ಇರಬೇಕು ಆಟ ಆಡೋಕೆ, ರಜತ್ ರೀತಿಯ ಮಗ ಇರಬಾರದು ಜಗಳ ಆಡೋಕೆ, ಮೋಕ್ಷಿತಾ ರೀತಿಯ ಮಗಳು ಇರಬೇಕು ಹಾಡು ಹಾಡೋಕೆ ಮಂಜು ರೀತಿ ಮಗ ಇರಬಾರದು ಹಾಡು ಕೆಡಿಸೋಕೆ ಎಂದು ಹನುಮಂತ ಹಾಡಿ ತಿಳಿಸಿದ್ದಾರೆ.

  • Jan 26, 2025 7:11 PM
    ಒಂಟಿತನದ ಜೀವನ ಬದಲಾಯಿಸಿಕೊಳ್ಳಲು ಬಿಗ್‌ಬಾಸ್

    ಉಗ್ರಂ ಮಂಜು ಬಿಗ್‌ ಬಾಸ್ ಅನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣವಿತ್ತು. ತನ್ನ ಕೆಲವು ಹವ್ಯಾಸಗಳನ್ನು ಬದಲಾಯಿಸಿಕೊಳ್ಳಬೇಕು ಅಂತಾನೇ ಬಿಗ್ ಬಾಸ್ ಮನೆಗೆ ಬಂದೆ. ಬೆಂಗಳೂರಿನ ಫ್ಲ್ಯಾಟ್‌ನಲ್ಲಿ ಒಬ್ಬನೇ ಒಂಟಿಯಾಗಿದ್ದೆ. ಅಪ್ಪ ಅಮ್ಮ ಊರಿನಲ್ಲಿ ಇದ್ದರು. ಅಕ್ಕ ತಂಗಿಯಂದಿರದ್ದು ಮದುವೆ ಆಗಿತ್ತು. ಇಲ್ಲಿಗೆ ಬಂದು ನನ್ನ ವ್ಯಕ್ತಿತ್ವ ಬದಲಾಯಿಸಿಕೊಳ್ಳಬೇಕು ಅಂತ ಅನಿಸಲಿಲ್ಲ. ನನಗೆ ಹೇಗೆ ಬೇಕೋ ಹಾಗೆ ಆಟ ಆಡಿದ್ದೇನೆ ಎಂದಿದ್ದಾರೆ ಉಗ್ರಂ ಮಂಜು.

  • Jan 26, 2025 6:45 PM
    ಸುದೀಪ್ ಸರ್ ಮುಂದಿನ ವರ್ಷ ಡೌಟ್ ಎನ್ನುವ ಸುದ್ದಿ ಇತ್ತು-ರಜತ್

    ಬಿಗ್ ಬಾಸ್ ಮನೆಯೊಳಗೆ 50 ದಿನದ ನಂತರ ಬಂದವರು ರಜತ್ ಕಿಶನ್. ರಜತ್ ಅವರ ನಿರ್ಧಾರದ ಬಗ್ಗೆ ಅನೇಕರಿಗೆ ಈ ಕ್ಷಣಕ್ಕೂ ಅನೇಕರಲ್ಲಿ ಅಚ್ಚರಿ ಇದೆ. ಯಾಕೆಂದರೆ ಮಧ್ಯದಲ್ಲಿ ಬಿಗ್ ಬಾಸ್ ಮನೆಗೆ ಬರುವುದು ಆ ನಂತರ ಗೆಲ್ಲುವುದು ಬಹುತೇಕ ಅಸಾಧ್ಯವೆನ್ನುವುದೇ ಇಲ್ಲಿಯವರೆಗೆ ಇದ್ದ ನಂಬಿಕೆ. ಆದರೆ ರಜತ್ ಈ ನಂಬಿಕೆಯನ್ನು ಹುಸಿಯಾಗಿಸಿದ್ದಾರೆ. ಕೊನೆಯ ಹಂತ ಪ್ರವೇಶ ಮಾಡಿದ್ದಾರೆ. ಇದೆಲ್ಲ ಹೇಗೆ ಸಾಧ್ಯ ? ಎನ್ನುವ ಪ್ರಶ್ನೆ ಎಲ್ಲರಲ್ಲಿದೆ. ಇದಕ್ಕೆ ಉತ್ತರ ನೀಡಿದ ರಜತ್ ನಾನು ಆರಂಭದಲ್ಲಿ ಬರಬಾರದು ಎಂದುಕೊಂಡಿದ್ದೆ, ಮುಂದಿನ ವರ್ಷ ಬಿಗ್ ಬಾಸ್‌ ಮನೆಗೆ ಸ್ಫರ್ಧಿಯಾಗಿ ಬರುವುದಾಗಿ ಹೇಳಿದ್ದೇ ಆದರೆ ಆ ನಂತರ ಇದು ನಿಮ್ಮ ಕೊನೆಯ ಸೀಸನ್ ಎನ್ನುವ ಮಾತು ಕೇಳಿ ಬಂತು. ನನಗೆ ಮೊದಲಿಂದ ನಿಮ್ಮ ನಿರೂಪಣೆಯಲ್ಲಿಯೇ ಬಿಗ್ ಬಾಸ್ ಮನೆಗೆ ಬರಬೇಕು ಆಡಬೇಕು ಎನ್ನುವ ಆಸೆ ಇತ್ತು. ಇನ್ನು ನನ್ನ ಸ್ನೇಹಿತರು ಕೂಡ ವೈಲ್ಡ್ ಕಾರ್ಡ್ ಆದರೂ ಭಾಗವಹಿಸುವ ಸಲಹೆ ನೀಡಿದರು. ಹೀಗಾಗಿಯೇ ಮನೆಗೆ ಬಂದೆ ನನ್ನ ಆಟವನ್ನು ಆಡಿದೆ, ಎಲ್ಲರನ್ನು ಮನೆ ಹೊರಗಡೆ ಕಳುಹಿಸಿ ಇಲ್ಲಿಯವರೆಗೆ ಬಂದೆ ಎಂದು ಹೇಳಿದ್ದಾರೆ ರಜತ್.

  • Jan 26, 2025 6:06 PM
    ಭಾನುವಾರದ ಎಪಿಸೋಡ್ ಆರಂಭ

    ಗಣರಾಜ್ಯೋತ್ಸವ ಶುಭಾಶಯ ಕೋರಿ ಕಿಚ್ಚ ಸುದೀಪ್ ಭಾನುವಾರದ ಬಿಗ್‌ಬಾಸ್ ಎಪಿಸೋಡ ಆರಂಭಿಸಿದ್ದಾರೆ. ಜೊತೆಗೆ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವ ಬಗ್ಗೆಯೂ ಕಿಚ್ಚ ಪ್ರಸ್ತಾಪಿಸಿದ್ದಾರೆ. ಅವರ ಸಾಧನೆಗೆ ಮೆಚ್ಚುಗೆ ಚಪ್ಪಾಳೆ ತಟ್ಟಿ ಅಭಿನಂದನೆ ತಿಳಿಸಿದ್ದಾರೆ. ಲೇಟ್ ಆದರೂ ನಿಮಗೆ ಪ್ರಶಸ್ತಿ ಸಿಕ್ಕಿರುವುದು ನಮಗೆ ಹೆಮ್ಮೆ ಎಂದಿದ್ದಾರೆ.

  • Jan 26, 2025 6:00 PM
    ಮೋಕ್ಷಿತಾ ಕೂಡ ಹೊರ ಬಂದ್ರಾ?

    ಉಗ್ರಂ ಮಂಜ ಬಳಿಕ ಮೋಕ್ಷಿತಾ ಕೂಡ ಎಲಿಮಿನೇಟ್ ಆಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಅದೇ ನಿಜವಾಗಿದ್ದರೆ ತ್ರಿವಿಕ್ರಮ್, ಹನುಮಂತ ಹಾಗೂ ರಜತ್ ಟಾಪ್ 3 ಸ್ಥಾನಗಳಿಗೆ ಏರಿದಂತೆ ಆಗುತ್ತದೆ. ಆದರೆ ಈ ಬಗ್ಗೆ ಖಿತ ಮಾಹಿತಿ ಇಲ್ಲ. ರಜತ್ 50 ದಿನಗಳ ಬಳಿಕ ದೊಡ್ಮನೆ ಒಳಗೆ ಎಂಟ್ರಿ ಕೊಟ್ಟಿದ್ದರು. ಹಾಗಾಗಿ ತ್ರಿವಿಕ್ರಮ್ ಅಥವಾ ಹನುಮಂತ ಗೆಲ್ಲಬಹುದು ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.

  • Jan 26, 2025 4:40 PM
    ಉಗ್ರಂ ಮಂಜು ಔಟ್?

    ಭವ್ಯಾ ಗೌಡ ಬಳಿಕ ಉಗ್ರಂ ಮಂಜು ಎಲಿಮಿನೇಟ್ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಬೆಳಗ್ಗೆಯಿಂದಲೇ ಶೋ ಚಿತ್ರೀಕರಣ ನಡೀತಿದೆ. ಹಾಗಾಗಿ ಮಂಜು ಹೊರ ಬಂದಿರುವ ವಿಚಾರ ಲೀಕ್ ಆಗಿದೆ ಎನ್ನಲಾಗ್ತಿದೆ. ಈ ಬಾರಿ ಮಂಜು ಟ್ರೋಫಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದರು. ಆದರೂ ಇಷ್ಟು ಬೇಗ ಎಲಿಮಿನೇಟ್ ಆಗ್ತಾರಾ? 5ನೇ ಸ್ಥಾನಕ್ಕೆ ಇಳಿಯುತ್ತಾರಾ? ಎಂದು ಯಾರು ಅಂದುಕೊಂಡಿರಲಿಲ್ಲ.

  • Jan 26, 2025 2:13 PM
    ಮೋಕ್ಷಿತಾ-ತ್ರಿವಿಕ್ರಮ್ ಟ್ರೋಫಿ ಗೆದ್ದರೆ?

    ಬಿಗ್‌ ಬಾಸ್ ಕನ್ನಡ 11 ಫಿನಾಲೆಯಲ್ಲಿ ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಇಬ್ಬರೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಲಿಸ್ಟ್‌ನಲ್ಲಿ ಇದ್ದಾರೆ. ಮೋಕ್ಷಿತಾ ಬಿಗ್ ಬಾಸ್ ಗೆದ್ದರೆ, ಅವರ ಅಮ್ಮನ ಕನಸು ಸಹಕಾರ ಆಗುತ್ತೆ. ಇನ್ನೂ ಹೆಚ್ಚಿನ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ಮಿಂಚುವುದಕ್ಕೆ ಸಹಾಯ ಆಗುತ್ತೆ ಎಂದಿದ್ದಾರೆ. ಹಾಗೇ ತ್ರಿವಿಕ್ರಮ್ ಪಾಲಾದಾರೆ, ಲೈಫ್ ನಂದಾ ದೀಪ ಆಗುತ್ತೆ. ಟ್ರೋಫಿಯನ್ನು ತಬ್ಬಿಕೊಂಡೇ ಮಲಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇಬ್ಬರೂ ಬಿಗ್ ಬಾಸ್ ಗೆಲ್ಲುವ ಫೇವರಿಟ್ ಲಿಸ್ಟ್‌ನಲ್ಲಿ ಇದ್ದಾರೆ.

    ಮೋಕ್ಷಿತಾ-ತ್ರಿವಿಕ್ರಮ್ ಟ್ರೋಫಿ ಗೆದ್ದರೆ?
  • Jan 26, 2025 1:04 PM
    ಟಾಪ್‌ 5ನಲ್ಲಿ ಗೆಲ್ಲುವವರು ಯಾರು?

    ಬಿಗ್ ಬಾಸ್ ಕನ್ನಡ ಸೀಸನ್ 11ರ ಕೊನೆಯ ದಿನದ ಗ್ರ್ಯಾಂಡ್ ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಇಂದು (ಜನವರಿ 26) ಸಂಜೆ ಆರು ಗಂಟೆಯಿಂದ ಬಿಗ್ ಬಾಸ್ ಕನ್ನಡ 11ರ ಫಿನಾಲೆ ಮತ್ತೆ ಆರಂಭ ಆಗಲಿದೆ. ಕಿಚ್ಚ ಸುದೀಪ್ ಕೊನೆಯ ಬಾರಿ ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹಾಗೇ ಮನೆಯೊಳಗೆ ಐದು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದು ಟಾಪ್ 5 ಸ್ಪರ್ಧಿಗಳ ಪಟ್ಟಿ ಹೀಗಿದೆ. ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್ ಕಿಶನ್, ತ್ರಿವಿಕ್ರಮ್, ಹನುಮಂತು ಈ ಐವರಲ್ಲಿ ಯಾರ ಪಾಲಾಗುತ್ತೆ ಬಿಗ್ ಬಾಸ್ ಕಿರೀಟ ಅನ್ನೋದಕ್ಕೆ ಇನ್ನೇನು ಕೆಲವೇ ಕಂಟೆಗಳಲ್ಲಿ ತೆರೆ ಬೀಳಲಿದೆ.

    ಟಾಪ್‌ 5ನಲ್ಲಿ ಗೆಲ್ಲುವವರು ಯಾರು?
  • Jan 25, 2025 10:34 PM
    ಭವ್ಯಾ ಎಲಿಮಿನೇಟ್

    ಫಿನಾಲೆ ತಲುಪುವುದಕ್ಕೂ ಮುನ್ನವೇ ಭವ್ಯಾ ಹೊರಗೆ ಬಂದಿದ್ದಾರೆ. ಗ್ರಾಫ್ ಮೂಲಕ ಇನ್ನೊಬ್ಬ ಕಂಟೆಸ್ಟೆಂಟ್ ಬಿಗ್ ಬಾಸ್ ನಿಂದ ಹೊರಗೆ ಬಂದಿದ್ದಾರೆ. ಮನೆಯಲ್ಲಿ ಉಳಿದ ಇನ್ನು ಐದು ಜನರಲ್ಲಿ ಟೆನ್ಶನ್ ಎಲ್ಲರಲ್ಲೂ ಹೆಚ್ಚಾಗಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಇಷ್ಟು ದೂರ ಬಂದದ್ದೇ ನನ್ನ ಅದೃಷ್ಟ. ಮನೆಯಲ್ಲಿದ್ದವರಿಗೆ ಕೆಲವೊಂದು ಸಲ ಹರ್ಟ್ ಮಾಡಿದ್ದೀನಿ. ಮನೆಯಿಂದ ಹೊರಗಡೆ ಬಂದ ಮೇಲೆ ಎಲ್ಲರೂ ಮಜಾ ಮಾಡೋಣಾ ಎಂದು ಭವ್ಯ ಹೇಳಿದ್ರೆ, ಟಾಸ್ಕ್ ವಿಚಾರದಲ್ಲಿ ಸಖತ್ತಾಗಿ ಆಡಿದ್ದೀರಿ. ಇಷ್ಟು ದೂರ ಬರೋದು ಈಸಿ ಅಲ್ಲ ಅಂತ ಮಂಜು ಹೇಳಿದ್ರೆ, ಭವ್ಯಾ ನನ್ನಿಂದಾಗಿ ಇಷ್ಟು ದಿನ ಬಂದಿದ್ದೀಯಾ ಅಂತ ಎಲ್ಲರೂ ಹೇಳ್ತಾರೆ. ಆದ್ರೆ ನಿಂಗೆ ಆ ಸಾಮರ್ಥ್ಯ ಇದೆ. ಯಾರೂ ಏನೇ ಹೇಳಿದ್ರು ನಾನು ನೀನು ಚೆನ್ನಾಗಿರೋಣಾ ಎಂದು ತ್ರಿವಿಕ್ರಂ ಹೇಳಿದ್ದಾರೆ. ಮನೆಯವರೆಲ್ಲಾ ಭವ್ಯಾ ಅವರನ್ನು ಹೊಗಳಿದ್ದಾರೆ.

  • Jan 25, 2025 9:22 PM
    ಗೋಲ್ಡ್ ಸುರೇಶ್‌ಗೆ ಮೈ ಕೈ ಜಾಕ್ಸನ್ ಅವಾರ್ಡ್‌

    ಬಿಗ್ ಬಾಸ್ ಮನೆಯಲ್ಲಿರುವ ಆರು ಸ್ಫರ್ಧಿಗಳಲ್ಲಿ ಮೊದಲ ಸ್ಫರ್ಧಿಯನ್ನು ಹೊರ ಕಳುಹಿಸುವ ಮೊದಲು ಎಲ್ಲರನ್ನು ನಗಿಸಲು ಬಿಗ್ ಬಾಸ್‌ನಲ್ಲಿ ಫನ್ನಿ ಅವಾರ್ಡ್‌ ಗಳನ್ನು ಕೊಡಲಾಯ್ತು. ಆ ಪೈಕಿ ಮೈ ಕೈ ಜಾಕ್ಸನ್ ಅವಾರ್ಡ್‌ನಲ್ಲಿ ಚೈತ್ರಾ ಕುಂದಾಪುರ, ಗೋಲ್ಡ್ ಸುರೇಶ್ ಮತ್ತು ಜಗದೀಶ್ ನಾಮನಿರ್ದೇಶನಗೊಂಡಿದ್ದರು. ಗೋಲ್ಡ್ ಸುರೇಶ್ ಇಬ್ಬರನ್ನೂ ಹಿಂದಿಕ್ಕಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.ಸುದೀಪ್ ಅವರ ಆದೇಶದ ಮೇರೆಗೆ ವಿನ್ನಿಂಗ್ ಸ್ಪೀಚ್‌ ನೀಡಿ ನಾಲ್ಕು ಹೆಜ್ಜೆಯನ್ನು ಹಾಕಿದರು.

  • Jan 25, 2025 8:56 PM
    ದೋಸ್ತ ಹನುಮಂತನಿಗಾಗಿ ಕುಣಿದ ಧನರಾಜ್

    ಮನೆಯಲ್ಲಿರುವ ಸ್ಫರ್ಧಿಗಳ ಸ್ನೇಹಿತರು, ಸಂಬಂಧಿಕರು, ಕುಟುಂಬದವರು ಎಲ್ಲರು ಬಂದು ಹೆಜ್ಜೆ ಹಾಕಿದ್ದಾರೆ. ಆ ಪೈಕಿ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಖಾಸಾ ದೋಸ್ತ್ ಆಗಿದ್ದ ಧನರಾಜ್ ತಮ್ಮ ಗೆಳೆಯನ ಗೆಲುವಿಗಾಗಿ ಸಿಂಪಲ್ ಡ್ಯಾನ್ಸ್ ಮಾಡಿದರು. ಆರಂಭದಲ್ಲಿ ಹನುಮಂತ ಅವರ ಊರಿನ ಆಪ್ತ ಸ್ನೇಹಿತ ಅಣ್ಣಾವ್ರ ಹಾಡಿಗೆ ಬಂದು ಹೆಜ್ಜೆ ಹಾಕಿದರು. ಆ ನಂತರ ಧನರಾಜ್ ಜೊತೆಯಾದರು. ಲೈಫು ಇಷ್ಟೇನೆ ಹಾಡಿಗೆ ಕುಣಿದರು. ಇಬ್ಬರು ಗೆಳೆಯರ ಈ ಡ್ಯಾನ್ಸ್ ನೋಡಿ ಹನುಮಂತ ಸಖತ್ ಖುಷಿಯಾಗಿದ್ದರು.

  • Jan 25, 2025 8:23 PM
    ಮದುವೆ ಆಗಲು ಒಪ್ಪಿದ ಉಗ್ರಂ ಮಂಜು

    ಬಿಗ್ ಬಾಸ್ ಕನ್ನಡ 11 ಸೀಸನ್ ಗ್ರ್ಯಾಂಡ್ ಫಿನಾಲೆಯಲ್ಲಿ ಉಗ್ರಂ ಮಂಜು ತಂದೆ ವೇದಿಕೆ ಮೇಲೆ ಸ್ಟೆಪ್ಸ್ ಹಾಕಿದ್ದರು. ತಂದೆಯ ಪರ್ಫಾಮೆನ್ಸ್ ನೋಡಿ ಉಗ್ರಂ ಮಂಜು ಫುಲ್ ಖುಷಿಯಾಗಿದ್ದರು. ಹಾಗೇ ತಂದೆ ಮಾತಾಡುವ ವೇಳೆ ಉಗ್ರಂ ಮಂಜು ಎಮೋಷನಲ್ ಕೂಡ ಆಗಿದ್ದರು. ಇದೇ ವೇಳೆ ಕಿಚ್ಚ ಸುದೀಪ್ ತಂದೆ ಏನು ಗಿಫ್ಟ್ ಕೊಡುತ್ತೀರ ಎಂದು ಪ್ರಶ್ನೆ ಮಾಡಿದ್ದರು. ಆಗ ಉಗ್ರಂ ಮಂಜು ತಂದೆಗೆ ಹುಡುಗಿ ಹುಡುಕು ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ. ತಂದೆ ಕೂಡ ಯಾರನ್ನಾದರೂ ಲವ್ ಮಾಡಿದ್ದರೆ ಹೇಳು ಮದುವೆ ಮಾಡಿಸುತ್ತೇನೆ ಎಂದಿದ್ದಾರೆ.

  • Jan 25, 2025 7:49 PM
    ಗೋಲ್ಡ್ ಸುರೇಶ್ ಅಲ್ಲ ಲಕ್ಷಣ ಸುರೇಶ್

    ಸೋಶಿಯಲ್ ಮೀಡಿಯಾದಲ್ಲಿ ಬಂಗಾರದ ಮನುಷ್ಯ ಎಂದೇ ಖ್ಯಾತರಾಗಿರುವವರು ಗೋಲ್ಡ್ ಸುರೇಶ್. ಕುತ್ತಿಗೆಯಲ್ಲಿ ಚಿನ್ನದ ಸರಗಳು, ಕೈಯಲ್ಲಿ ಚಿನ್ನದ ಬ್ರೇಸ್‌ಲೈಟ್, ಬೆರಳಿನಲ್ಲಿ ಉಂಗುರ ಹೀಗೆ ಎಲ್ಲೆಂದರಲ್ಲಿ ಚಿನ್ನವನ್ನು ಧರಿಸುತ್ತಿದ್ದ ಸುರೇಶ್ ತಮ್ಮ ಸಾಕು ನಾಯಿಯನ್ನು ಬಿಡದೆ ಅದಕ್ಕೆ 45 ಗ್ರಾಂ ತೂಕದ ಚಿನ್ನದ ಸರವನ್ನು ಹಾಕಿದ್ದರು. ಬಿಗ್ ಬಾಸ್ ಮನೆಯೊಳಗೆ ಬಂದಾಗ ಕೂಡ ಮೈತುಂಬಾ ಚಿನ್ನ ಹಾಕಿಕೊಂಡು ಬಂದು ಬೇರೆ ಸ್ಫರ್ಧಿಗಳ ಕಣ್ಣರಳಿಸಿದ್ದರು. ಇಂಥಾ ಗೋಲ್ಡ್ ಸುರೇಶ್ ಬಿಗ್ ಬಾಸ್‌ನ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ತುಂಬಾ ಸರಳವಾಗಿ ಬಂದಿದ್ದರು. ಮೈ ಮೇಲೆ ಒಂದು ಚಿನ್ನ ಕೂಡ ಕಾಣಿಸಲಿಲ್ಲ. ಹೀಗಾಗಿಯೇ ಆಶ್ಚರ್ಯ ಗೊಂಡ ಸುದೀಪ್ ಈ ಬಗ್ಗೆ ಕೇಳಿದರು. ಇದಕ್ಕೆ ಗೋಲ್ಡ್ ಸುರೇಶ್ ನಿಮ್ಮ ಮಾತು ನನ್ನ ಮೇಲೆ ಪರಿಣಾಮ ಬೀರಿದವು ಎಂದು ಹೇಳಿದರು. ಜನಸಾಮಾನ್ಯರು ಕೂಡ ನೀನು ಚಿನ್ನ ಹಾಕದೆಯೇ ಲಕ್ಷಣವಾಗಿ ಕಾಣ್ತೀಯಾ ಎಂದು ಹೇಳಿದರು. ಹೀಗಾಗಿಯೇ ಈಗ ನಾನು ಗೋಲ್ಡ್ ಸುರೇಶ್ ಅಲ್ಲ ಲಕ್ಷಣ ಸುರೇಶ್ ಎಂದು ಹೇಳಿ ಎಲ್ಲರ ಮನ ಗೆದ್ದರು ಗೋಲ್ಡ್ ಸುರೇಶ್.

  • Jan 25, 2025 7:19 PM
    ಉಗ್ರಂ ಮಂಜು ಹೇಳಿದ ಕಲರ್ ವಾಟರ್ ಬಾಟಲ್ ಕಥೆ

    ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಇದ್ದಾಗ ಅವರ ವ್ಯೆಯಕ್ತಿಕ ಅಭ್ಯಾಸ-ಹವ್ಯಾಸದ ಕುರಿತು ಹೊರಗಡೆ ಚರ್ಚೆಯಾಗಿತ್ತು. ಟ್ರೋಲ್ ಕೂಡ ಮಾಡಲಾಗಿತ್ತು. ಈ ವಿಚಾರ ಸುದೀಪ್ ಅವರಿಗೆ ಕೂಡ ಗೊತ್ತು. ಹೀಗಾಗಿಯೇ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಉಗ್ರಂ ಮಂಜು ಅವರ ಕಾಲೆಳೆದರು ಸುದೀಪ್. ಇದಕ್ಕೆ ಇಲ್ಲಿ ಬಂದ ಆರಂಭದ ಮೂರು ನಾಲ್ಕು ದಿನ ಕಷ್ಟ ಆಯ್ತು ಆದರೆ ಆ ನಂತರ ಎಲ್ಲವೂ ಬದಲಾಯ್ತು ಎಂದಿರುವ ಮಂಜು ಆಗ ರಾತ್ರಿಯಾದರೆ ಕಲರ್ ನೀರು ಇರ್ತಿತ್ತು ಈಗ ಅದೆಲ್ಲ ಕಡಿಮೆಯಾಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಆ ನಂತರವೂ ಸುಮ್ಮನಾಗದ ಸುದೀಪ್ ಕೆಣಕುವ ಪ್ರಯತ್ನವನ್ನು ಮಾಡಿದರು. ಆದರೆ ತಮ್ಮ ತಂದೆ ತಾಯಿ ಇರುವ ವಿಚಾರವನ್ನು ಅರಿತಿದ್ದ ಮಂಜು ಮೊದ ಮೊದಲು ಉತ್ತರ ಕೊಡಲು ಹಿಂದೇಟು ಹಾಕಿದರು. ನಾನು ಈಗಲೇ ಯಾವುದನ್ನು ಹೇಳಲಾರೆ ಸರ್ ಮುಂದೆ ಕಡಿಮೆಯಾದರೂ ಆಗಬಹುದು ಎಂದು ಹೇಳಬಹುದಷ್ಟೇ ಎಂದು ಹೇಳಿದರು. ಉಗ್ರಂ ಮಂಜು ಮತ್ತು ಸುದೀಪ್ ನಡುವೆ ನಡೆದ ಈ ಸಂಭಾಷಣೆ ಅಲ್ಲಿದ್ದವರನ್ನು ನಕ್ಕು ನಗಿಸಿದ್ದು ಸುಳ್ಳಲ್ಲ.

  • Jan 25, 2025 6:42 PM
    ಹೊಸ ಶೋನಲ್ಲಿ ರಜತ್

    ಬಿಗ್ ಬಾಸ್ ನಲ್ಲಿ ಸ್ಪರ್ಧೆ ಮಾಡಿದ್ದ ಕಂಟೆಸ್ಟೆಂಟ್ ಗಳು ಇದೀಗ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಅದರ ಪ್ರೋಮೋ ರಿಲೀಸ್ ಆಗಿದೆ. ಆದರೆ ಈಗ ಬಿಗ್ ಬಾಸ್ ಫಿನಾಲೆಯಲ್ಲಿರುವ ಮೂವರು ಕೂಡ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಭವ್ಯಾ, ಹನುಮಂತು ಹಾಗೂ ರಜತ್ ಆಯ್ಕೆಯಾಗಿದ್ದಾರೆ. ಮನೆಗೆ ಬಂದಿರುವ ಮಾಜಿ ಸ್ಪರ್ಧಿಗಳು ಈ ಮೂವರಿಗೂ ಹಾರ ಹಾಕಿ ಸ್ವಾಗತಿಸಿದ್ದಾರೆ. ಬಿಗ್ ಬಾಸ್ ಕೂಡ ಮೂವರಿಗೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.

  • Jan 25, 2025 6:30 PM
    ಲಾಯರ್ ಜಗದೀಶ್ ಎಂಟ್ರಿ

    ಅರೆಸ್ಟ್ ಆಗಿರುವ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಂಡಿದ್ದಾರೆ. ನೀವೆಲ್ಲಾ ಈಗ ಮಿನುಗು ತಾರೆಯರು ಎಂದು ಲಾಯರ್ ಜಗದೀಶ್ ಹೇಳಿದ್ದಾರೆ. ಬಿಗ್ ಬಾಸ್ ಮನೆಯ ಫಿನಾಲೆ ಖುಷಿಯಲ್ಲಿ ಹಳೆ ಸ್ಪರ್ಧಿಗಳೆಲ್ಲಾ ಮನೆಯ ಒಳಗೆ ಬಂದಿದ್ದಾರೆ. ಅದರಲ್ಲೂ ಧನು, ಸ್ಪರ್ಧಿಗಳ ಮುಂದೆ ಫಿನಾಲೆಯಲ್ಲಿ ಯಾರು ಗೆಲ್ತಾರೆ ಎಂದು ಊಹೆ ಮಾಡುವುದಕ್ಕೆ ಸಾಧ್ಯವೆ ಇಲ್ಲ ಎಂದಿದ್ದಾರೆ. ಕಡೆಗೂ ದೋಸ್ತನ ಬಳಿ ಧನು ಮಾತಾಡಿದ್ದಾರೆ. ಆದರೆ ಹನುಮಂತುಗೆ ತನ್ನುಡುಗಿ ಫಿನಾಲೆಗೆ ಬರ್ತಾರಾ ಇಲ್ವಾ ಅನ್ನೋದೆ ಟೆನ್ಶನ್ ಇದೆ.

  • Jan 25, 2025 6:30 PM
    ಬಿಗ್‌ ಬಾಸ್‌ ಮನೆಯಲ್ಲಿ ಲಾಯರ್ ಜಗದೀಶ್

    ಬಿಗ್‌ಬಾಸ್ ಮನೆಯಿಂದ ಹೊರಗೆ ಲಾಯರ್‌ ಜಗದೀಶ್ ಹಂಗಾಮ ಸೃಷ್ಟಿಸಿದ್ದಾರೆ. ಗಲಾಟೆಯನ್ನು ಮಾಡಿಕೊಂಡಿದ್ದಾರೆ. ಕೊಡಿಗೆಹಳ್ಳಿಯಲ್ಲಿ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಅವರಿಗೆ ಸಾರ್ವಜನಿಕರು ಮೂಗು ತುಟಿಯಿಂದ ರಕ್ತ ಬರುವಂತೆ ಥಳಿಸಿದ್ದರು. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಘಟನೆ ನಡೆಯುವುದಕ್ಕಿಂತಲೂ ಮುನ್ನ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಲಾಯರ್ ಜಗದೀಶ್ ಭಾಗವಹಿಸಿ, ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಕೊಟ್ಟಿದ್ದಾರೆ.

  • Jan 25, 2025 6:21 PM
    ಮಂಜು ಕಪ್ ಗೆಲ್ತಾರಾ?

    ಬಿಗ್ ಬಾಸ್‌ ಮನೆಗೆ ಮಂಜು ಆರಂಭದಲ್ಲೇ ಬಂದಂತ ಸ್ಪರ್ಧಿ. ಬಹಳ ನಿರೀಕ್ಷೆ ಹುಟ್ಟು ಹಾಕಿದ್ದ ಸ್ಪರ್ಧಿ. ಟಾಸ್ಕ್ ಅಂತ ಬಂದ್ರೆ ಮುಂದೆ ಇರ್ತಾರೆ, ಆಟದಲ್ಲಿ ಗೆಲ್ಲಲುಬೇಕಾದ ಸ್ಟಾಟರ್ಜಿ ಸಖತ್ತಾಗಿ ಮಾತಾಡ್ತಾರೆ, ಧ್ವನಿಗೆ ಧ್ವನಿ ಸೇರಿಸಿ ಟಾಂಟ್ ಕೊಡೋದ್ರಲ್ಲೂ ಮುಂದು. ಒಂದು ಬಿಗ್ ಬಾಸ್ ಮನೆಗೆ ಬೇಕಾದ ಎಲ್ಲಾ ಕ್ವಾಲಿಟಿ ಮಂಜುಗೆ ಇದೆ. ಸಾಕಷ್ಟು ಜನರ ಮನಸ್ಸಲ್ಲಿ ಮಂಜು ಗೆಲ್ಲಲಿ ಎಂಬ ಆಶಯವಿದೆ. ಇದೇ ಮಂಜು ಅವರಲ್ಲಿ ನೆಗೆಟಿವ್ ಕೂಡ ಇದೆ. ಗೌತಮಿ ಸ್ನೇಹ ಮಾಡಿದ ಮೇಲೆ ತುಂಬಾ ವೀಕ್ ಆಗಿಬಿಟ್ಟರು. ಸ್ವತಃ ಕಿಚ್ಚ ಸುದೀಪ್ ಅವರೇ ಸಾಕಷ್ಟು ಸಲ ಎಚ್ಚರಿಸಿದರೂ ಎಚ್ಚರಗೊಳ್ಳದ ಮಂಜು ಫಿನಾಲೆ ತಲುಪಿದ್ದಾರೆ ಕಪ್ ಗೆಲ್ಲುತ್ತಾರಾ ನೋಡಬೇಕಿದೆ.

  • Jan 25, 2025 6:16 PM
    ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ ಆರಂಭ

    ಬಿಗ್‌ಬಾಸ್ ಕನ್ನಡ 11 ಗ್ರ್ಯಾಂಡ್ ಫಿನಾಲಿ ಅದ್ಧೂರಿಯಾಗಿ ಆರಂಭ ಆಗಿದೆ. ಕಿಚ್ಚ ಸುದೀಪ್ 11ರ ಸ್ಪರ್ಧಿಗಳನ್ನು ಮಾತಾಡಿಸಿದ್ದಾರೆ. ಧರ್ಮ ಕೀರ್ತಿರಾಜ್, ಗೌತಮಿ ಜಾದವ್, ಗೋಲ್ಡ್ ಸುರೇಶ್, ಶಿಶಿರ್ ಶಾಸ್ತ್ರಿ, ಯಮುನಾ, ಹಂಸ, ಐಶ್ವರ್ಯಾ ಸಿಂಧೋಗಿ, ಧನರಾಜ್, ಚೈತ್ರಾ ಕುಂದಾಪುರ, ರಜತ್, ಮಾನಸಾ, ಅನುಷಾ ರೈ ಎಲ್ಲರೂ ಗ್ರ್ಯಾಂಡ್ ಫಿನಾಲೆಗೆ ಆಗಮಿಸಿದ್ದಾರೆ. ಅವರೆಲ್ಲರನ್ನೂ ಕಿಚ್ಚ ಸುದೀಪ್ ಕಾಲೆಳೆಯುತ್ತಿದ್ದಾರೆ.

    ಬಿಗ್ ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ ಆರಂಭ
  • Jan 25, 2025 5:52 PM
    ರಜತ್ ಆರ್ಭಟ

    ರಜತ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದವರು, ಆರಂಭದಲ್ಲಿ ಬಂದ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಿದ್ದಾರೆ. ಅವರ ವಾಯ್ಸ್ ಅವರಿಗೆ ಬಂಡವಾಳ. ಸ್ಟ್ರಾಂಗ್ ಎಂದು ಗುರುತಿಸಿಕೊಂಡ ಸ್ಪರ್ಧಿಯನ್ನ ಹೊಡೆಯುವ ಯೋಚನೆ ಮಾಡುವುದರಲ್ಲಿ ನಿಸ್ಸೀನರು. ಅದಕ್ಕೆ ಸದಾ ಮಂಜಣ್ಣನನ್ನೇ ಟಾರ್ಗೆಟ್ ಮಾಡಿದ್ದರು. ಮನರಂಜನೆಯಲ್ಲೂ ಮುಂದಿದ್ದಾರೆ. ಆದರೆ ನೇರಾನೇರಾ ಮಾತಾಡುವ ಇವರಲ್ಲೂ ಮೈನಸ್ ಪಾಯಿಂಟ್ಸ್ ಇದೆ. ತಾಳ್ಮೆ ಅನ್ನೋದು ಬಹಳ ಕಡಿಮೆ. ಆಟದಲ್ಲಿ ಗೆಲ್ಲಲು ಆ ಕ್ಷಣಕ್ಕೆ ಸಮಯ ಸಾಧಕರು ಆಗ್ತಾರೆ.

  • Jan 25, 2025 5:27 PM
    ಮೋಕ್ಷಿತಾ ಪ್ರಾಮಾಣಿಕತೆಗೆ ಸಿಗುತ್ತಾ ಬೆಲೆ ?

    ಮೋಕ್ಷಿತಾ ಮೊದಲಿನಿಂದಲೂ ಮೃದು ಸ್ವಭಾವದಿಂದಾನೇ ನಡೆದುಕೊಂಡವರು. ಯಾರಿಗೂ ಧ್ವನಿ ಏರಿಸಿ ಮಾತಾಡುತ್ತಿರಲಿಲ್ಲ. ಆದರೆ ಒಮ್ಮೆ ಕುತ್ತಿಗೆಗೆ ಬಂದ ಮೇಲೆ ತನ್ನನ್ನು ತಾನೂ ಗೆಲ್ಲಿಸಿಕೊಳ್ಳಬೇಕೆಂಬ ಹಠ ತೊಟ್ಟರು. ಅಂದಿನಿಂದ ಮಾತಾಡುವ ಜಾಗದಲ್ಲಿ ಮಾತಾಡುತ್ತಾರೆ. ಹಾಗಂತ ಸ್ವಾಭಿಮಾನ ಬಿಟ್ಟಿಲ್ಲ. ಅದಕ್ಕೆ ಉದಾಹರಣೆ ಕ್ಯಾಪ್ಟೆನ್ಸಿ ಟಾಸ್ಕ್. ಹೀಗಾಗಿ ಜನರ ಮೋಕ್ಷಿತಾ ಅವರನ್ನ ತುಂಬಾ ಇಷ್ಟ ಪಡುತ್ತಾ ಇರೋದೆ ಸರಳತೆ, ಸ್ವಾಭಿಮಾನ, ಪ್ರಾಮಾಣಿಕತೆಗೆ. ಈ ಬಾರಿಯ ಮಹಿಳಾ ವಿನ್ನರ್ ಆಗಬಹುದು ಎಂಬ ನಿರೀಕ್ಷೆಯೂ ಇದೆ

  • Jan 25, 2025 5:08 PM
    ಪಾಸಿಟಿವ್ ಹನುಮಂತ ಬಿಗ್ ಬಾಸ್ ಗೆಲ್ತಾರಾ ?

    ಹನುಮಂತು ಕೂಡ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಬಂದವರು. ಪಕ್ಕ ಹಳ್ಳಿ ಪ್ರತಿಭೆ. ಹಾಡುಗಾರ. ಹಾಗಂತ ಬರೀ ಹಾಡುಗಾರ ಅಲ್ಲ. ಸಮಯಕ್ಕೆ ತಕ್ಕ ಪದ ಜೋಡಿಸಿ ಮನೆಯನ್ನ ಒಂದೊಳ್ಳೆ ವಾತಾವರಣದಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ. ಬಿಗ್ ಬಾಸ್ ನಲ್ಲಿ ಮನರಂಜನೆಯೇ ಇಲ್ಲ ಎಂಬ ಕೊರತೆ ಕಾಡುತ್ತಿದ್ದಾಗ ಅದನ್ನ ನಿಭಾಯಿಸಿದ್ದು ಇದೇ ಹನುಮಂತು. ಟಾಸ್ಕ್ ಹಾಡುವುದರಲ್ಲೂ ಬುದ್ದಿವಂತಿಕೆ ಇದೆ. ಒಬ್ಬರ ಬಳಿ ಮಾತಾಡುವಾಗಲೂ ಯೋಚಿಸುತ್ತಾರೆ. ಯಾರೋ ನೆಗೆಟಿವ್ ಎಂದರೆ ಕಿವಿಗೆ ಹಾಕಿಕೊಳ್ಳದೆ ತನ್ನ ಪಾಡಿಗೆ ತಾನು ಇರುತ್ತಾರೆ. ನೆಗೆಟಿವ್ ಪಾಯಿಂಟ್ ಹನುಮಂತು ಬಳಿ ಹುಡುಕುವುದು ಕಷ್ಟ.

  • Jan 25, 2025 4:13 PM
    ತ್ರಿವಿಕ್ರಮ್ ಬಿಗ್‌ಬಾಸ್ ಆಫರ್ ಕೈ ಬಿಟ್ಟಿದ್ದಿದ್ದು ಏಕೆ?

    ಬಿಗ್‌ ಬಾಸ್ ಕನ್ನಡ ಸೀಸನ್ 11 ಗೆಲ್ಲುವ ಆರು ಮಂದಿ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್‌ ಕೂಡ ಒಬ್ಬರು. ಮೊದಲ ದಿನದಿಂದ ಇಲ್ಲಿವರೆಗೂ ತ್ರಿವಿಕ್ರಮ್ ಬಗ್ಗೆ ವೀಕ್ಷಕರಲ್ಲಿ ಒಳ್ಳೆಯ ಓಪಿನಿಯನ್ ಇದೆ. ಈ ಕಾರಣಕ್ಕೆ ಬಿಗ್ ಬಾಸ್ ಗೆಲ್ಲಬಹುದಾದ ಸ್ಪರ್ಧಿಗಳಲ್ಲಿ ತ್ರಿವಿಕ್ರಮ್‌ಗೂ ಆಗ್ರಸ್ಥಾನವಿದೆ. ಆದರೆ, ಕನ್ನಡದ ಅತೀ ದೊಡ್ಡ ಈ ರಿಯಾಲಿಟಿ ಶೋ ಅನ್ನು ಈ ಹಿಂದೆ ತ್ರಿವಿಕ್ರಮ್ ರಿಜೆಕ್ಟ್ ಮಾಡಿದ್ದರು ಅನ್ನೋ ವಿಷಯ ಗೊತ್ತಾ? ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಆಫರ್ ಬರುವುದಕ್ಕೂ ಮುನ್ನವೇ ಎರಡು ಬಾರಿ ಆಫರ್ ಬಂದಿತ್ತು. ಆದರೆ, ಆ ಎರಡೂ ಬಾರಿ ಕೂಡ ಕೂಡ ಬಿಗ್‌ ಬಾಸ್ ಮನೆಗೆ ಬರುವುದಕ್ಕೆ ಇಷ್ಟ ಪಟ್ಟಿರಲಿಲ್ಲ. ಬಿಗ್ ಬಾಸ್ ನೀಡಿದ ಆಫರ್‌ಗಳನ್ನು ರಿಜೆಕ್ಟ್ ಮಾಡುತ್ತಲೇ ಬರುತ್ತಿದ್ದರು. ಇಲ್ಲದೇ ಹೋಗಿದ್ದರೆ, ಈ ಹಿಂದಿನ ಎರಡು ಸೀಸನ್‌ಗಳ ಪೈಕಿ ಒಂದರಲ್ಲಿ ಬಿಗ್‌ ಬಾಸ್ ಸ್ಪರ್ಧಿಯಾಗಬೇಕಿತ್ತು.

    ತ್ರಿವಿಕ್ರಮ್ ಬಿಗ್‌ಬಾಸ್ ಆಫರ್ ಕೈ ಬಿಟ್ಟಿದ್ದಿದ್ದು ಏಕೆ?
  • Jan 25, 2025 2:57 PM
    ಭವ್ಯಾ ಗೌಡ-ಮೋಕ್ಷಿತಾ ಪರ ಸ್ಟಾರ್ ಕ್ಯಾಂಪೇನ್

    ಬಿಗ್ ಬಾಸ್ ಕನ್ನಡ 11ನೇ ಸೀಸನ್‌ನ ಫಿನಾಲೆಗೆ ತಲುಪಿರುವ ಭವ್ಯಾ ಗೌಡ ಮತ್ತು ಮೋಕ್ಷಿತಾ ಅವರ ಪರ ಅನೇಕ ಕಿರುತೆರೆಯ ಕಲಾವಿದರು ಸೋಶಿಯಲ್ ಮೀಡಿಯಾ ಮೂಲಕ ಕ್ಯಾಂಪೇನ್ ಮಾಡುತ್ತಿದ್ದಾರೆ. ಸಾಗರ ಗೌಡ, ಗೀತಾ ಭಾರತಿ ಭಟ್, ಕಳೆದ ಬಾರಿಯ ಬಿಗ್ ಬಾಸ್ ಸ್ಫರ್ಧಿ ನೀತು, ಮೋಕ್ಷಿತಾ ಪೈಗೆ ಜೈ ಅಂದರೆ ಸಂಜನಾ ಆನಂದ್, ಅಮೂಲ್ಯ ದಂಪತಿ, ಅಮೂಲ್ಯ ಗೌಡ, ಅಕ್ಷಿತಾ ಹೀಗೆ ಅನೇಕರು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಭವ್ಯ ಗೌಡ ಅವರ ಮೇಲಿರಲಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಭವ್ಯ ಗೌಡ ಅವರಿಗೆ ಶುಭಾಶಯ ಕೋರಿದ್ದಾರೆ.

  • Jan 25, 2025 2:20 PM
    BBK 11 Grand Finale ; ಮೋಕ್ಷಿತಾ ಪೈ VS ಭವ್ಯಾ ಗೌಡ, ಯಾರಾಗುತ್ತಾರೆ ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ..?

    ಬಿಗ್ ಬಾಸ್ ಮನೆ ಬಾಗಿಲು ಹಾಕಲು ಇನ್ನೇನು ಕೆಲವೇ ಗಂಟೆ ಬಾಕಿ ಉಳಿದಿದೆ. ಮನೆಯಲ್ಲಿರುವ ಆರು ಜನರ ಪೈಕಿ ಈ ಬಾರಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯುವುದು ಯಾರು ಎನ್ನುವ ಕೂತುಹಲ ಅನೇಕರನ್ನು ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ. ಇನ್ನು, ಈ ಸೀಸನ್ ಹೊರತು ಪಡಿಸಿದರೆ ಬಿಗ್ ಬಾಸ್‌ ಇಲ್ಲಿಯವರೆಗೆ ಕನ್ನಡದಲ್ಲಿ ಹತ್ತು ಬಾರಿ ಪ್ರದರ್ಶನಗೊಂಡಿದೆ. ಇಲ್ಲಿಯವರೆಗೆ ಹಲವಾರು ಸ್ಫರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದಿದ್ದಾರೆ. ಆ ಪೈಕಿ ಶ್ರುತಿ ಅವರನ್ನು ಹೊರತು ಪಡಿಸಿದರೆ ಇಲ್ಲಿಯವರೆಗೆ ಬೇರೆ ಯಾವ ಮಹಿಳೆಗೆ ಕೂಡ ಬಿಗ್ ಬಾಸ್ ಒಲಿದಿಲ್ಲ. ಈ ವಿಚಾರದಲ್ಲಿ ಪ್ರೇಕ್ಷಕರಲ್ಲಿ ಅಸಮಾಧಾನ ಅಂತೂ ಇದೆ. ಈ ಅಸಮಾಧಾನವನ್ನು ಬಿಗ್ ಬಾಸ್ ಈ ಬಾರಿ ದೂರ ಮಾಡುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಮೋಕ್ಷಿತಾ ಮತ್ತು ಭವ್ಯ ಇಬ್ಬರಲ್ಲಿ ಯಾರು ಬೆಸ್ಟ್ ಎನ್ನುವ ಚರ್ಚೆ ನಡೆಯುತ್ತಿದೆ.

    BBK 11 Grand Finale ; ಮೋಕ್ಷಿತಾ ಪೈ VS ಭವ್ಯಾ ಗೌಡ, ಯಾರಾಗುತ್ತಾರೆ ಬಿಗ್​ ಬಾಸ್​ ಗೆದ್ದ 2ನೇ ಮಹಿಳೆ ..?
  • Jan 25, 2025 1:31 PM
    BBK 11: ಬಿಗ್‌ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ; ಕಿಚ್ಚನ ಮ್ಯಾಕ್ಸಿಮಮ್ ಸ್ಟೆಪ್ಸ್ ಹೇಗಿದೆ?

    ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಇಂದು (ಜನವರಿ 25) ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಲುಕ್ ರಂಗು ರಂಗಾಗಿದೆ. ಇದು ಕಿಚ್ಚ ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್‌. ಹೀಗಾಗಿ ಸುದೀಪ್ ವೇದಿಕೆ ಮೇಲೆ ಸಖತ್ ಆಗಿ ಮಿಂಚುತ್ತಿದ್ದಾರೆ. ಕೂಲ್ ಆಗಿದ್ದರೂ ಕೆಂಪು ಬಣ್ಣದ ಕೂಲಿಂಗ್ ಗ್ಲಾಸ್, ರಂಗು ರಂಗಾಗಿರುವ ಶರ್ಟ್, ಜೀನ್ಸ್ ತೊಟ್ಟು ವೇದಿಕೆ ಭರ್ಜರಿ ಹೆಜ್ಜೆ ಹಾಕಿದ್ದಾರೆ.

    BBK 11: ಬಿಗ್‌ಬಾಸ್ ಕನ್ನಡ ಗ್ರ್ಯಾಂಡ್ ಫಿನಾಲೆ; ಕಿಚ್ಚನ ಮ್ಯಾಕ್ಸಿಮಮ್ ಸ್ಟೆಪ್ಸ್ ಹೇಗಿದೆ?
  • Jan 25, 2025 12:21 PM
    ರಜತ್‌ಗೆ ಜಾಕೆಟ್ ಕಳುಹಿಸಿದ ಸುದೀಪ್

    ಕೇವಲ ಬಿಗ್ ಬಾಸ್ ಮನೆಯನ್ನು ಮಾತ್ರವಲ್ಲ ಆ ಮನೆಯ ಸದಸ್ಯರನ್ನು ಕೂಡ ತಮ್ಮ ಮನೆಯ ಸದಸ್ಯರಂತೆಯೇ ನೋಡುತ್ತಾರೆ ಕಿಚ್ಚ ಸುದೀಪ್.ಇದಕ್ಕೆ ಈ ಹನ್ನೊಂದು ವರ್ಷದಲ್ಲಿ ಹಲವಾರು ನಿದರ್ಶನಗಳಿವೆ. ಈಗ ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ರಜತ್‌ ಅವರ ಆಸೆಯನ್ನು ಸುದೀಪ್ ಈಡೇರಿಸಿದ್ದಾರೆ. ಬಿಗ್ ಬಾಸ್‌ 11ನೇ ಸೀಸನ್ ಆರಂಭವಾಗುವ ದಿನ ತಾವು ಹಾಕಿಕೊಂಡಿದ್ದ ಜಾಕೆಟ್‌ನ್ನು ರಜತ್‌ಗೆ ಉಡುಗೊರೆಯಾಗಿ ಮಾಜಿ ಸ್ಫರ್ಧಿ ರಾಜೀವ್ ಅವರ ಕಡೆಯಿಂದ ಕಳಿಸಿದ್ದಾರೆ.

  • Jan 25, 2025 11:58 AM
    ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಮ್ಯಾಕ್ಸಿಮಮ್ ಸ್ಟೆಪ್ಸ್

    ಬಿಗ್ ಬಾಸ್ ಕನ್ನಡ 11ರ ಗ್ರ್ಯಾಂಡ್ ಫಿನಾಲೆಗೆ ಕ್ಷಣ ಗಣನೆ ಶುರುವಾಗಿದೆ. ಇಂದು ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಲುಕ್ ರಂಗು ರಂಗಾಗಿದೆ. ನಿರೂಪಣೆ ಮಾಡುತ್ತಿರುವ ಕೊನೆಯ ಸೀಸನ್‌ನಲ್ಲಿ ಸುದೀಪ್ ಸಖತ್ ಆಗಿ ಮಿಂಚುತ್ತಿದ್ದಾರೆ. ಕೂಲ್ ಆಗಿರೋ ಕೂಲಿಂಗ್ ಗ್ಲಾಸ್, ರಂಗು ರಂಗಾಗಿರುವ ಶರ್ಟ್, ಜೀನ್ಸ್ ತೊಟ್ಟು ವೇದಿಕೆ ಹೆಜ್ಜೆ ಹಾಕಿದ್ದಾರೆ. ಬಿಗ್ ಬಾಸ್ ವೇದಿಕೆ ಮೇಲೆ 'ಮ್ಯಾಕ್ಸ್' ಮ್ಯಾಕ್ಸಿಮಸ್ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸುದೀಪ್ ಮ್ಯಾನರಿಸಂ, ಸ್ಟೈಲ್, ನೋಡಿ ಥ್ರಿಲ್ ಆಗಿದ್ದಾರೆ. ಇನ್ನು ಇಂದು (ಜನವರಿ 25) ಸಂಜೆ 6 ಗಂಟೆ ಗ್ರ್ಯಾಂಡ್ ಫಿನಾಲೆ ಶುರುವಾಗಲಿದೆ.

    ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ಮ್ಯಾಕ್ಸಿಮಮ್ ಸ್ಟೆಪ್ಸ್
  • Jan 25, 2025 11:53 AM
    BBK 11: ಒಂದು ವಾರಕ್ಕೆ ಉಗ್ರಂ ಮಂಜು ಪಡೆಯುವ ಸಂಭಾವನೆ ಎಷ್ಟು? ಲಕ್ಷನಾ ? ಸಾವಿರನಾ?

    ಬಿಗ್‌ ಬಾಸ್ ಕನ್ನಡ 11 ರಿಯಾಲಿಟಿ ಶೋ ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಇದೇ ವೀಕೆಂಡ್‌ನಲ್ಲಿ ಬಿಗ್ ಬಾಸ್ ಕನ್ನಡ 11 ವಿನ್ನರ್ ಯಾರು? ಅನ್ನೋದು ರಿವೀಲ್ ಆಗುತ್ತೆ. ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಭವ್ಯಾ ಗೌಡ, ಹನುಮಂತ ಹಾಗೂ ಮೋಕ್ಷಿತಾ ಪೈ ಪ್ರಶಸ್ತಿ ಗೆಲ್ಲಲು ಭರ್ಜರಿ ಪೈಪೋಟಿ ನಡೆಸುತ್ತಿದ್ದಾರೆ. ಆರು ಮಂದಿಯಲ್ಲಿ ಯಾರು ಟ್ರೋಫಿ ಗೆಲ್ಲುತ್ತಾರೋ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ರಿವೀಲ್ ಆಗಲಿದೆ.

    BBK 11: ಒಂದು ವಾರಕ್ಕೆ ಉಗ್ರಂ ಮಂಜು ಪಡೆಯುವ ಸಂಭಾವನೆ ಎಷ್ಟು? ಲಕ್ಷನಾ ? ಸಾವಿರನಾ?
  • Jan 25, 2025 10:35 AM
    ಗ್ರ್ಯಾಂಡ್ ಫಿನಾಲೆಗೆ ಸುದೀಪ್ ಲುಕ್ ಹೇಗಿದೆ ?

    ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಸಮಯದಲ್ಲಿ ವಾರಾಂತ್ಯ ಬಂದರೆ ಸಾಕು ಅನೇಕರು, ಕಿಚ್ಚನ ಪಂಚಾಯ್ತಿ ನೋಡಲು ಕಾತುರದಿಂದ ಟಿವಿ ಎದುರು ಕೂರುತ್ತಿದ್ದರು.ಇದಕ್ಕೆ ಸುದೀಪ್ ಅವರ ಆಯಸ್ಕಾಂತದಂತಹ ವ್ಯಕ್ತಿತ್ವ ಒಂದು ಕಾರಣವಾದರೆ, ಅವರು ಹಾಕಿಕೊಳ್ಳುತ್ತಿದ್ದ ಕಾಸ್ಟೂಮ್ ಇನ್ನೊಂದು ಕಾರಣ. ಹೀಗಾಗಿಯೇ ಇಂದು ನಡೆಯಲಿರುವ ಗ್ರ್ಯಾಂಡ್ ಫಿನಾಲೆಗೆ ಸುದೀಪ್ ಅವರ ಡ್ರೆಸ್ ಹೇಗಿರಲಿದೆ ಎನ್ನುವ ಕುತೂಹಲ ಅನೇಕರಲ್ಲಿತ್ತು. ಈ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ.ಗ್ರ್ಯಾಂಡ್ ಫಿನಾಲೆಗೆ ಸುದೀಪ್ ಅವರ ಗ್ರ್ಯಾಂಡ್ ಎಂಟ್ರಿ ಹೇಗಿರುತ್ತೆ ಎನ್ನುವ ಪ್ರೋಮೋವನ್ನು ಕಲರ್ಸ್ ಕನ್ನಡ ಸದ್ಯ ರಿಲೀಸ್ ಮಾಡಿದೆ. ಈ ಪ್ರೋಮೋದಲ್ಲಿ ಸುದೀಪ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು ಮ್ಯಾಕ್ಸ್ ಚಿತ್ರದ ಹಾಡಿಗೆ ವೇದಿಕೆ ಮೇಲೆ ಹೆಜ್ಜೆಯನ್ನು ಸುದೀಪ್ ಹಾಕಿದ್ದಾರೆ

    ಗ್ರ್ಯಾಂಡ್ ಫಿನಾಲೆಗೆ ಸುದೀಪ್ ಲುಕ್ ಹೇಗಿದೆ ?
  • Jan 25, 2025 9:15 AM
    ಇಂದು ಮನೆಯಿಂದ ಹೊರ ಹೋಗೋದು ಯಾರು ?

    ಬಿಗ್ ಬಾಸ್‌ ಕನ್ನಡ ಹನ್ನೊಂದನೇ ಆವೃತ್ತಿಗೆ ತೆರೆ ಬೀಳಲು ಕ್ಷಣಗಣನೆ ಆರಂಭವಾಗಿದೆ.ಇಂದು ಸಂಜೆ ಸುದೀಪ್ ಸಾರಥ್ಯದಲ್ಲಿ ಗ್ರ್ಯಾಂಡ್ ಫಿನಾಲೆ ಶುರುವಾಗಲಿದೆ. ಇಂದು ಸಂಜೆ ಮೂರು ಜನ ಕಾರ್ಯಕ್ರಮದಿಂದ ಹೊರ ಹೋಗಲಿದ್ದು, ಟಾಫ್ 3 ಸ್ಫರ್ಧಿಗಳು ಯಾರು ಎಂದು ಇಂದು ರಾತ್ರಿಯೇ ಗೊತ್ತಾಗಲಿದೆ.ಕಲರ್ಸ್ ಕನ್ನಡ ಇಂದಿನ ಕಾರ್ಯಕ್ರಮದ ಪ್ರೋಮೋವನ್ನು ಹಂಚಿಕೊಂಡಿದ್ದು ಪ್ರೋಮೋ ಕುತೂಹಲ ಕೆರಳಿಸಿದೆ.

  • Jan 24, 2025 9:07 PM
    ಯಾರು ಗೆದ್ದರೂ ನನಗೆ ಒಂದು ರೂಪಾಯಿ ಬರಲ್ಲ

    "ಬಿಗ್‌ ಬಾಸ್ ಫಿನಾಲೆಯಲ್ಲಿ ನಾನಿಲ್ಲ ಅಂತ ಬೇಸರ ಆಗುತ್ತಿದೆ. ಯಾರು ವಿನ್ ಆದರೂ ನನಗಂತೂ ಒಂದು ರೂಪಾಯಿ ಬರಲ್ಲ. ಯಾರು ಗೆದ್ದರೂ ನನಗೆ ಖುಷಿನೇ. ನಾನು ಇರಬೇಕಿತ್ತು. ನಾನು ಗೆಲ್ಲಬೇಕಿತ್ತು. ಯಾರು ವಿನ್ ಆದರೂ ಖುಷಿನೇ." ಎಂದು ಬಿಗ್ ಬಾಸ್ ಕನ್ನಡ 11ರ ಸ್ಪರ್ಧಿ ಹಂಸ ಹೇಳಿದ್ದಾರೆ.

    ಯಾರು ಗೆದ್ದರೂ ನನಗೆ ಒಂದು ರೂಪಾಯಿ ಬರಲ್ಲ
  • Jan 24, 2025 6:44 PM
    ಬಿಗ್ ಬಾಸ್ ಮನೆ ಕಳೆ ಹೆಚ್ಚಿಸಿದ ಹನುಮಂತ

    ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ಅಚ್ಚರಿಗೆ ದೂಡಿದವರು ಹನುಮಂತ. ಸೀಸನ್ ಆರಂಭದಲ್ಲಿ ಕಾಣಿಸದ ಹನುಮಂತ ಮನೆಯೊಳಗೆ ಬಂದಿದ್ದು ನಾಲ್ಕನೇ ವಾರದಲ್ಲಿ. ಕೇವಲ ಒಂದೇ ವಾರದಲ್ಲಿ ಕ್ಯಾಪ್ಟನ್ ಪಟ್ಟವನ್ನು ಕೂಡ ಅಲಂಕರಿಸಿದ ಹನುಮಂತ ಮನೆಯಲ್ಲಿದ್ದವರ ಆಕ್ರೋಶಕ್ಕೆ ಗುರಿಯಾಗಿದ್ದು ಸುಳ್ಳಲ್ಲ. ಗೋಲ್ಡ್ ಸುರೇಶ್, ಭವ್ಯಾ ಗೌಡ, ಮತ್ತು ಮಾನಸಾ ಅವರನ್ನು ನಾಮಿನೇಟ್ ಮಾಡಿದ ಹನುಮಂತ ಎರಡನೇ ಬಾರಿ ಕೂಡ ಕ್ಯಾಪ್ಟನ್ ಆದರು. ಮನೆಯಲ್ಲಿದ್ದವರ ಪ್ರಕಾರ ಹನುಮಂತ ಅಂಥ ಪ್ಲಾನರ್ ಯಾರು ಇಲ್ಲ.

More from Filmibeat

English summary
Follow Bigg Boss Kannada Season 11 Grand Finale live updates on Filmibeat Kannada. Find out the winner, performances, highlights and finalists with Kiccha Sudeep hosting the event
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X