ದ್ರೋಣ (2020)
ದ್ರೋಣ ಕಥೆ
`ಸುಗ್ರೀವ' ಚಿತ್ರದ ನಂತರ ಮತ್ತೇ ಕರುನಾಡ ಚಕ್ರವರ್ತಿ ಶಿವಣ್ಣ ಮತ್ತು ನಿರ್ದೇಶಕ ಪ್ರಮೋದ್ ಚಕ್ರವರ್ತಿ ಒಟ್ಟಿಗೆ ಬರುತ್ತಿರುವ ಚಿತ್ರ `ದ್ರೋಣ'. ಡಾಲ್ಫಿನ್ ಮೀಡಿಯಾ ಹೌಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಶಿವರಾಜಕುಮಾರ್ ಮಧ್ಯಮ ವರ್ಗದ ಶಾಲಾ ಶಿಕ್ಷಕನ ಪಾತ್ರ ಮಾಡಿದ್ದಾರೆ. 2018 ಜೂನ್ 22 ರಂದು ಹನುಮಂತನಗರದ ರಾಮಾಂಜನೇಯ ದೇವಸ್ಥಾನದಲ್ಲಿ ಚಿತ್ರದ ಮೂಹೂರ್ತ ನೇರವೇರಿತು. ಖಳನಟನಾಗಿ ಈ ಮೊದಲು ಹೆಬ್ಬುಲಿಯಲ್ಲಿ ನಟಿಸಿದ್ದ ಬಹುಭಾಷಾ ನಟ ರವಿಕಿಶನ್ ನಟಿಸಲಿದ್ದಾರೆ.ಈ ಚಿತ್ರದ ಮೊದಲ ಟೀಸರ್ 2019 ರ ಸ್ವಾತಂತ್ರೋತ್ಸವದಂದು ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಶಿವಣ್ಣನಿಗೆ ಜೊತೆ ನಾಯಕಿಯಾಗಿ ಮಲಯಾಳಂ ನಟಿ ಇನಿಯಾ ನಟಿಸಿದ್ದರೆ, ಉಳಿದಂತೆ ಸ್ವಾತಿ ಶರ್ಮಾ, ಸಾಧು ಕೋಕಿಲ, ರಂಗಾಯಣ ರಘು, ವಿ ಮನೋಹರ್, ಬಾಬು ಹಿರಣ್ಣಯ್ಯ, ಪ್ರಕಾಶ್ ಹೆಗ್ಗೋಡು.ರೇಖಾ ದಾಸ್ ಮುಂತಾದ ಕಲಾವಿದರು ನಟಿಸಿದ್ದಾರೆ. ಚಿತ್ರದ ಮೊದಲ ಲುಕ್ ನಲ್ಲಿ ಶಿವಣ್ಣ ಕೇಸರಿ ಬಾವುಟ ಹಿಡಿದಿದ್ದು ಗಮನ ಸೆಳೆದಿತ್ತು. ಚಿತ್ರಕ್ಕೆ ಮಹದೇವ್ ಬಿ,ಸಂಗಮೇಶ್ ಬಿ ಮತ್ತು ಶೇಷು ಚಕ್ರವರ್ತಿ ಎಂಬುವವರು ಬಂಡವಾಳ ಹೂಡಿದ್ದಾರೆ.