ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಗಾಳಿಪಟ 2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ.ಈ ಚಿತ್ರಕ್ಕೆ ನಾಯಕಿಯರಾಗಿ ನಾಯಕಿಯರಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ಮತ್ತು ಸಂಯುಕ್ತಾ ಮೆನನ್ ನಟಿಸಿದ್ದರೆ, ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಶ್ರೀಮತಿ ಉಮಾ ಮತ್ತು ಎಂ ರಮೇಶ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅನಂತನಾಗ್ ,ಮತ್ತು ರಂಗಾಯಣ ರಘು ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ
ಚಿತ್ರದ ಕಥೆ ಮೂವರು ಸ್ನೇಹಿತರ ಫೋನ್ ಕಾಲ್ ಮೂಲಕ ಆರಂಭವಾಗುತ್ತದೆ. ಶಿಕ್ಷಣ ಮುಗಿಸಿ ತಮ್ಮದೇ ಬೇರೆ ಜಗತ್ತು ಕಟ್ಟಿಕೊಂಡು ಬದುಕುತ್ತಿರುವ ಯುವಕರು, ತಮ್ಮ ಗುರುವಿಗಾಗಿ ಮತ್ತೆ ಒಂದಾಗುತ್ತಾರೆ. ಕಾಲೇಜು ಸಮಯದಲ್ಲಿ ಮೂವರು ಪ್ರೀತಿಯಲ್ಲಿ ತೇಲಾಡುತ್ತಿರುತ್ತಾರೆ. ಇದೇ ಕಾಲೇಜಿನಲ್ಲಿ ಕನ್ನಡದ ಕಂಪನ್ನು ಸಾರುವ ಕನ್ನಡ ಮೇಷ್ಟ್ರು ಅನಂತ ನಾಗ್. ಗಣೇಶ್ ಮತ್ತು ದಿಗಂತ್ ಗೆ ಕ್ಲಾಸ್ ಮೇಟ್ ಹುಡಗಿಯರ ಮೇಲೆ ಲವ್ ಆದರೆ, ಪವನ್ ಗೆ ಟೀಚರ್ ಮೇಲೆ ಲವ್ ಆಗುತ್ತದೆ. ಒಟ್ಟೊಟ್ಟಿಗೆ ಸಾಗುವ ಈ ಮೂರು ಪ್ರೇಮಕಥೆಗಳ ಸ್ವಲ್ಪ ಪ್ರೀತಿ ಮತ್ತು ಮುನಿಸು ನಂತರ ಮೊದಲಾರ್ಧದ ಅಂತ್ಯಕ್ಕೆ ದೂರವಾಗುತ್ತಾರೆ. ಇಲ್ಲಿಂದ ಈ ಮೂವರ ಪ್ರೀತಿ ಕಥೆಯೇನು , ಇವರ ಜೊತೆಜೊತೆಗೆ ಸಾಗುವ ಮೇಷ್ಟ್ರು ಕಥೆಯೇನು ಎಂಬುದು ಚಿತ್ರದ ಮುಂದಿನ ಸ್ಟೋರಿ.
ಹಿನ್ನಲೆ
ಯೋಗರಾಜ್ ಭಟ್ ನಿರ್ದೇಶನದಲ್ಲಿ 2008 ರಲ್ಲಿ ತೆರೆಕಂಡ `ಗಾಳಿಪಟ' ಚಿತ್ರ ಕನ್ನಡ ಚಿತ್ರರಂಗದಲ್ಲಿ ತನ್ನ ಮಧುರ ಕಥೆಯಿಂದ ಮತ್ತು ಸುಮಧುರ ಗೀತೆಗಳಿಂದ ತಂಗಾಳಿ ಬೀಸಿತ್ತು. ಈಗ ಮತ್ತೆ ಯೋಗರಾಜ್ ಭಟ್ `ಗಾಳಿಪಟ 2' ಚಿತ್ರವನ್ನು ಘೋಷಿಸಿದ್ದಾರೆ. ಮೊದಲ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್,ದಿಗಂತ್,ರಾಜೇಶ್ ಕೃಷ್ಣನ್ ಗಾಳಿಪಟ ಹಾರಿಸಿದ್ದರೆ, ಈ ಚಿತ್ರದಲ್ಲಿ ಮೊದಲು ಶರಣ್,ರಿಷಿ, ಪವನ ಕುಮಾರ್ ಗಾಳಿಪಟ ಹಾರಿಸಲಿದ್ದಾರೆ ಎಂಬುದಾಗಿ ನಿರ್ಧಾರವಾಗಿತ್ತು. ಆದರೆ ಸ್ಕ್ರಿಪ್ಟ್ ಬರೆದ ನಂತರ ಮತ್ತೇ ಗಣೇಶ್ ಮತ್ತು ದಿಗಂತ್ ಕತೆಗೆ ಹೆಚ್ಚು ಸೂಕ್ತ ಎಂದು ಚಿತ್ರ ತಂಡ ನಿರ್ಧರಿಸಿತು.
ಮೊತ್ತ ಮೊದಲ ಬಾರಿಗೆ ಯೋಗರಾಜ್ ಭಟ್ ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು ಒಂಭತ್ತು ಹಾಡುಗಳಿವೆ ಎಂದು ಭಟ್ಟರು ಹೇಳಿದ್ದಾರೆ. ಭಟ್ಟರ ಮುಂದಿನ ಚಿತ್ರದಲ್ಲಿ ಇದೇ ನಿರ್ಮಾಪಕರ ನಿರ್ಮಾಣದಲ್ಲಿ ಶರಣ್ ನಾಯಕನಾಗಿ ನಟಿಸಲಿದ್ದಾರೆ. ಚಿತ್ರದಲ್ಲಿ ಒಬ್ಬ ಕೊರಿಯನ್ ಅಥವಾ ಚೈನೀಸ್ ನಟಿ ನಟಿಸುವ ಕುರಿತು ಮಾಹಿತಿಯಿತ್ತು. ಬೆಂಗಳೂರು ,ಮಂಡ್ಯ ಮತ್ತು ಧಾರವಾಡ ಮೂಲದ ಮೂರು ಯುವಕರ ಪಯಣದ ಕಥೆಯಿದೆ. ಚಿತ್ರವನ್ನು ಕರ್ನಾಟಕ ಮತ್ತು ಲಂಡನ್ ನಲ್ಲಿ ಚಿತ್ರೀಕರಿಸುವ ಯೋಜನೆಯಿತ್ತು.