ವರದರಾಜ್ ವೆಂಕಟಸ್ವಾಮಿ ನಿರ್ದೇಶನದಲ್ಲಿ ಮೂಡಿಬಂದಿರುವ ಜ್ಞಾನಂ ಚಿತ್ರದಲ್ಲಿ ಮಾಸ್ಟರ್ ಧ್ಯಾನ್, ಪ್ರಣಯ ಮೂರ್ತಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ನಾಲ್ಕು ಸಿನಿ ಮಹೋತ್ಸವಗಳಲ್ಲಿ ಆರು ಪ್ರಶಸ್ತಿ ಗಳಿಸಿದೆ.ತಮ್ಮ ಮನೆಯ ನೆರೆಹೊರೆಯವರ ಕುಟಂಬವೊಂದರಲ್ಲಿ ಜನಿಸಿದ ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ಅವರ ಪೋಷಕರು ಪಡುವ ನೋವು-ಅವಮಾನಗಳನ್ನು ಕಣ್ಣಾರೆ ಕಂಡ ವರದರಾಜ್, ಇದೇ ಎಳೆಯನ್ನು ಆಧಾರವಾಗಿಟ್ಟುಕೊಂಡು ಸಮಾಜಕ್ಕೆ ಸಂದೇಶ ಕೊಡುವಂತಹ ಸಿನಿಮಾವೊಂದನ್ನು ಸಿದ್ಧಪಡಿಸಿದ್ದಾರೆ.
ಎರಡು ಬೇರೆ ಬೇರೆ ಪ್ರದೇಶಗಳಲ್ಲಿ ಒಂದೇ ದಿನ ಹುಟ್ಟಿದ ಇಬ್ಬರು ಮಕ್ಕಳಲ್ಲಿ ಒಬ್ಬ ಅಸಮಾನ್ಯ ಬುದ್ಧಿವಂತನಾಗಿದ್ದರೆ ಮತ್ತೊಬ್ಬ ಹೊರ ಜಗತ್ತಿನ ಅರಿವೆ ಇಲ್ಲದಂತೆ ವರ್ತಿಸುವ ಬುದ್ಧಿಮಾಂದ್ಯ ಮಗುವಾಗಿರುತ್ತದೆ.