ಕನ್ನಡ್ ಗೊತ್ತಿಲ್ಲ (2019)(U/A)
ಕನ್ನಡ್ ಗೊತ್ತಿಲ್ಲ ಕಥೆ
ಮಯೂರ ರಾಘವೇಂದ್ರ ನಿರ್ದೇಶನದಲ್ಲಿ ಮೂಡಿಬಂದಿರುವ ಕನ್ನಡ ಗೊತ್ತಿಲ್ಲ ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ಮಿಂಚಿದ್ದಾರೆ. ಡಾಟರ್ ಪಾರ್ವತಮ್ಮ ಚಿತ್ರದ ನಂತರ ಮತ್ತೊಮ್ಮೆ ಹರಿಪ್ರಿಯಾ ಕೊಲೆಗಾರನ ಬೇಟೆಯಾಡಲಿದ್ದಾರೆ. ಚಿತ್ರದಲ್ಲಿ ಪವನ್, ಧರ್ಮಣ್ಣ ಕಡೂರು, ಸಿಹಿ ಕಹಿ ಚಂದ್ರು ,ಸುಧಾ ಬೆಳವಾಡಿ ಮುಂತಾದ ಕಲಾವಿದರ ದಂಡೇ ಇದೆ.ಚಿತ್ರಕ್ಕೆ ಕುಮಾರ ಕಂಠೀರವ ಬಂಡವಾಳ ಹೂಡಿದ್ದರೆ, ನಕುಲ್ ಅಭಯಂಕರ ಸಂಗೀತ ನೀಡಿದ್ದಾರೆ.ಚಿತ್ರದ ಟೀಸರ್ ಆಗಸ್ಟ್ 6, 2019 ರಂದು ಬಿಡುಗಡೆಯಾಯಿತು.ಚಿತ್ರದ ಟ್ರೇಲರ್ ಆಕ್ಟೋಬರ್ 26 ರಂದು ಪಿ.ಆರ್.ಕೆ ಯ್ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಯಿತು.
ಕಥೆ: ಕ್ಯಾಬ್ ಡ್ರೈವರ್ ಮೂಲಕ ಚಿತ್ರದ ಕಥೆ ಶುರು ಆಗುತ್ತದೆ. 'ಕನ್ನಡ್ ಗೊತ್ತಿಲ್ಲ' ಅಂತ ಹೇಳಿದವರೆಲ್ಲ ಕಿಡ್ನಾಪ್ ಆಗುತ್ತಿರುತ್ತಾರೆ. ಕಿಡ್ನಾಪ್ ಅದವರೆಲ್ಲ ಆ ಕ್ಯಾಬ್ ನಲ್ಲಿಯೇ ಪ್ರಯಾಣ ಮಾಡಿರುತ್ತಾರೆ. ಅವರೆಲ್ಲ ಪರಭಾಷಿಗರು. ಕ್ಯಾಬ್ ಡ್ರೈವರ್ ಮಂಜುನಾಥ (ಧರ್ಮಣ್ಣ) ಅಪ್ಪಟ್ಟ ಕನ್ನಡ ಅಭಿಮಾನಿ. ಇದನ್ನು ತನಿಖೆ ಮಾಡುವ ಜಾವಾಬ್ದಾರಿ ಪೋಲಿಸ್ ಅಧಿಕಾರಿ ಶೃತಿಗೆ ಬರುತ್ತದೆ. ಆ ಅಪಹರಣಗಳಿಗೂ, ಕ್ಯಾಬ್ ಡ್ರೈವರ್ ಗೂ ಏನು ಸಂಬಂಧ ಎಂಬುದು ಚಿತ್ರದ ಮುಂದಿನ ಕಥೆ.