ಉದಯ ಪ್ರಸನ್ನ ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಷಾಸುರ ಚಿತ್ರದಲ್ಲಿ ರಾಜ್ ಮಂಜು, ಅರ್ಜುನ್ ರಾವ್ ಮತ್ತು ಬಿಂದುಶ್ರೀ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಮತಿ ಪಾರ್ವತಿ ಚಂದ್ರಶೇಖರ್, ಶ್ರೀಮತಿ ಲೀಲಾವತಿ ಸುರೇಶಕುಮಾರ್ ಮತ್ತು ಶ್ರೀಮತಿ ಪ್ರೇಮಾ ಚಂದ್ರಯ್ಯ ಬಂಡವಾಳ ಹೂಡಿದ್ದಾರೆ. ಸಾಯಿ ಕಿರಣ್ ಮತ್ತು ಸುನಿಲ್ ಕೋಷಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಮಹೇಶ್ ಮತ್ತು ಸುಧಾಕರ್ ಇಬ್ಬರು ಒಂದು ಚಿಕ್ಕ ಹಳ್ಳಿಯಲ್ಲಿ ಕೂಡಿ ಬೆಳೆದ ಪ್ರಾಣ ಸ್ನೇಹಿತರು. ಸುಧಾಕರ್ ಕಾವೇರಿಯನ್ನು ಪ್ರೀತಿಸಿತೊಡಗಿದಾಗ ಇಬ್ಬರ ಮಧ್ಯೆ ಬಿರುಕು ಮೂಡುತ್ತದೆ. ಸುಧಾಕರ್-ಕಾವೇರಿ ಪ್ರೀತಿಗೆ ಮಹೇಶ್ ವಿರೋಧಿಸುತ್ತಾನೆ. ನಂತರ ಇವರಿಬ್ಬರ ಜಗಳ ಗ್ಯಾಂಗ್ ವಾರ್ ಗೆ ಕಾರಣವಾಗುತ್ತದೆ.