ಸಂದೀಪ್ ಶೆಟ್ಟಿ ವಿಠ್ಠಲ್ ನಿರ್ದೇಶಿಸಿರುವ `ನಂದನವನದೊಳ್' ಚಿತ್ರವನ್ನು ಶರಣ್ ಪೂಣಚ್ಚ ಮತ್ತು ಉಮೇಶ್ ಗಿರಿಯ ಹೆಬ್ರಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಭರತ್ ರೈ, ಸಂತೋಷ್ ಶೆಟ್ಟಿ, ಆನಂದ್ ಯಾದವಾಡ್, ವಂಚಿರಾ ವಿಠ್ಠಲ್ ನಾಣಯ್ಯ ಮುಂತಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶಿವ ಸತ್ಯ ಸಂಗೀತ ನೀಡಿದ್ದಾರೆ.
ವೃತ್ತಿಪರ ಕೊಲೆಗಾರನೊಬ್ಬನನ್ನು ಹುಡುಕುವ ಕತೆಯನ್ನು ಚಿತ್ರ ಹೊಂದಿದೆ. ಚಿತ್ರದಲ್ಲಿ ನಂದನವನದೊಳ್ ಎನ್ನುವ ಕಾದಂಬರಿ ಹೇಗೆ ಈ ಕೊಲೆಗಾರನನ್ನು ಹಿಡಿಯಲು ಸಹಾಯ ಮಾಡುತ್ತದೆ ಎಂಬುದು ಚಿತ್ರದ ಕಥಾವಸ್ತು. ಬಹುತೇಕ ಚಿತ್ರವನ್ನು ಕೊಡಗಿನಲ್ಲಿ ಚಿತ್ರೀಕರಿಸಿದ್ದರಿಂದ ನೋಡುಗರಿಗೆ ಕೊಡಗಿನ ಸಂಸ್ಕೃತಿಯ ದರ್ಶನ ಕೂಡ ಆಗುತ್ತದೆ.