ತೂತು ಮಡಿಕೆ (2022)(U/A)
ತೂತು ಮಡಿಕೆ ಕಥೆ
ಚಂದ್ರಕೀರ್ತಿ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ತೂತುಮಡಿಕೆ ಚಿತ್ರದಲ್ಲಿ ಪಾವನಾ ಗೌಡ, ಶಂಕರ್ ಅಶ್ವಥ್, ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶಿವಕುಮಾರ್ ಕೆ.ಬಿ ಮತ್ತು ಮಧುಸೂದನ್ ರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಉಜ್ವಲ್ ಚಂದ್ರ ಸಂಕಲನ, ನವೀನ್ ಚಲ್ಲಾ ಛಾಯಾಗ್ರಹಣ ಮತ್ತು ಸ್ವಾಮಿನಾಥನ್ ಆರ್.ಕೆ ಸಂಗೀತವಿದೆ.
ಕಥೆ
ನಂದಿ ಬೆಟ್ಟದಲ್ಲಿ ಇತಿಹಾಸ ತಜ್ಡ ಕೆನಡಿ ಸಂಶೋಧನೆ ನೆಡೆಸುತ್ತಿದ್ದಾಗ ಒಂದು ಅಷ್ಟಧಾತು ವಿಗ್ರಹ ಸಿಗುತ್ತದೆ. ಇನ್ನೇನು ಅದನ್ನು ಪುರಾತತ್ವ ಇಲಾಖೆಗೆ ಒಪ್ಪಿಸಬೇಕು ಎನ್ನುವಷ್ಟರಲ್ಲಿ ಅದರ ಕಳ್ಳತನವಾಗುತ್ತದೆ. ಅವರನ್ನು ಬೆನ್ನತಿ ಕೆಲ ವ್ಯಕ್ತಿಗಳು ಹುಡುಕಾಟ ಆರಂಭಿಸುತ್ತಾರೆ. ದುಡ್ಡಿಗಾಗಿ ಏನು ಬೇಕಾದರೂ ಮಾಡುವ ಸ್ಲಮ್ ನಲ್ಲಿ ವಾಸಿಸುವ ಇಬ್ಬರು ಸ್ನೇಹಿತರು ಕಿಡ್ನಾಪ್ ಮಾಡಲು ಇಳಿಯುತ್ತಾರೆ.
ಬೆಳವಣಿಗೆ
ಜೂನ್ 16, 2019 ರಂದು ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡದ್ದರು. ನಂತರ ಜೂನ್ 30 ರಂದು ಚಿತ್ರದ ಮುಹೂರ್ತ ನೇರವೇರಿತು.
ರಿಲೀಸ್
ಈ ಚಿತ್ರ ಜುಲೈ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.