ವೀರಂ (2023)(A)
ವೀರಂ ಕಥೆ
ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ವೀರಂ' ಚಿತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಕೆ.ಎಂ.ಶಶಿಧರ್ ಬಂಡವಾಳ ಹೂಡಿದ್ದು, ಚಿತ್ರದಲ್ಲಿ ಪ್ರಜ್ವಲ್ ಗೆ ನಾಯಕಿಗೆ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್ ಅಡಿಯಲ್ಲಿ ವೀರಂ ಸಿನಿಮಾ ನಿರ್ಮಾಣವಾಗಿದೆ. ಶೃತಿ, ಅಚ್ಯುತ್ ಕುಮಾರ್, ಶಿಚ್ಯ ದೀಪಕ್, ಚಿರಾಗ್ ಜಾನಿ ಸೇರಿದಂತೆ ಹಲವರು ಫೋಷಕ ಪಾತ್ರದಲ್ಲಿ ನಟಿಸಿದ್ದಾರೆ. `ವೀರಂ' ಸಿನಿಮಾದಲ್ಲಿ ನಟ ಶ್ರೀನಗರ ಕಿಟ್ಟಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದಾರೆ.
ಬಿಡುಗಡೆ: ವೀರಂ ಸಿನಿಮಾ ಏಪ್ರಿಲ್ 7ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಕಥೆ: ವೀರು(ಪ್ರಜ್ವಲ್)- ನರಸಿಂಹ (ಶ್ರೀನಗರ ಕಿಟ್ಟಿ) ಸಹೋದರರು. ತಂದೆ ತಾಯಿಯಿಲ್ಲದ ಇಬ್ಬರಿಗೂ ಅಕ್ಕ-ಭಾವನೇ ತಂದೆ- ತಾಯಿ. ಅಕ್ಕ ಸೀತಾ ಸಾಹಸಸಿಂಹ ವಿಷ್ಣುವರ್ಧನ್ ದೊಡ್ಡ ಅಭಿಮಾನಿ. ಅಕ್ಕನಂತೆ ದಾದಾ ಅಭಿಮಾನಿಯಾಗಿ ಕೈ ಮೇಲೆ ನೆಚ್ಚಿನ ನಟನ ಭಾವಚಿತ್ರವನ್ನು ವೀರು ಹಚ್ಚೆ ಹಾಕಿಸಿಕೊಂಡಿರುತ್ತಾನೆ. ತಮ್ಮಂದಿರು ಓದಿ ಒಳ್ಳೆ ಕೆಲಸಕ್ಕೆ ಸೇರಿ ಚೆನ್ನಾಗಿರಬೇಕು ಅನ್ನೋದು ಸೀತಾ ಆಸೆ. ಇತ್ತ ಕಲಾಸಿಪಾಳ್ಯದ ಮಾರ್ಕೆಟ್ ಹಾಗೂ ಆರ್ಎಂಸಿ ಯಾರ್ಡ್ ಮೇಲೆ ಅಧಿಪತ್ಯ ಸಾಧಿಸಲು ದೇವಿ ಹಾಗೂ ಕೂಲಿಂಗ್ ಗ್ಲಾಸ್ ಗೋವಿಂದ ಗ್ಯಾಂಗ್ ಕಟ್ಟಿಕೊಂಡು ಓಡಾಡುತ್ತಿರುತ್ತಾರೆ.
ಕೆಟ್ಟವರ ಸಹವಾಸವೇ ಬೇಡಕೊಂಡಿದ್ದ ಕುಟುಂಬದ ಹುಡುಗ ನರಸಿಂಹ ಹುಡುಗಾಟದ ವಯಸ್ಸಿನಲ್ಲಿಗೋವಿಂದನ ಗ್ಯಾಂಗ್ ಸೇರಿ ಬಿಡ್ತಾನೆ. ಇನ್ನು ವೀರು ಕೆಲಸಕ್ಕೆ ಸೇರಬೇಕಾದ ಸಮಯದಲ್ಲೇ ದೇವಿ ಕೊಲೆಯಾಗುತ್ತದೆ. ತನ್ನದಲ್ಲ ತಪ್ಪಿಗೆ ಜೈಲಿಗೆ ಹೋಗುವ ವೀರು ಅಕ್ಕನಿಂದ ದೂರಾಗುತ್ತಾನೆ. ಇನ್ನು ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ವೀರು, ಸೀರು ಭಾಯ್ ದ್ವೇಷ ಕಟ್ಟಿಕೊಳ್ಳಬೇಕಾಗುತ್ತದೆ. ತಂದೆ ಹತ್ಯೆಯ ಪ್ರತಿಕಾರಕ್ಕೆ ದೇವಿ ಮಗ ಜೇಡ ನಿಲ್ತಾನೆ? ದೇವಿ ಹತ್ಯೆಗೆ ಕಾರಣ ಯಾರು? ವೀರು ಮತ್ತೆ ಅಕ್ಕನ ಮನೆಗೆ ವಾಪಸ್ ಹೋಗ್ತಾನಾ? ಸೀರು ಭಾಯ್ ಯಾರು? ಎಂಬುದು ಸಿನಿಮಾ ಕಥೆ.