X
ಹೋಮ್ ಚಲನಚಿತ್ರಗಳ ಒಳನೋಟ

ಕಥಾಸಂಗಮ To ಘರ್ಜನೆ: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

Author Sowmya Bairappa | Updated: Tuesday, December 12, 2023, 09:49 AM [IST]

ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮಿಳಿಗೆ ಮಾತ್ರ ಸೀಮಿತವಾಗಿಲ್ಲ. ಕನ್ನಡ, ತೆಲುಗು ಹಾಗೂ ಮಲಯಾಳಂ ಸೇರಿದಂತೆ ತಲೈವಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ತೆಲುಗು, ಹಿಂದಿ ಭಾಷೆಯಲ್ಲಿ ಟಾಪ್ ನಟರ ಜೊತೆ ಮಲ್ಟಿಸ್ಟಾರರ್ ಸಿನಿಮಾ ಮಾಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಜನಿಸಿದ್ದು ಮತ್ತು ಶಿಕ್ಷಣ ಪಡೆದಿದ್ದು ಎಲ್ಲಾ ಬೆಂಗಳೂರಿನಲ್ಲಿಯೇ. ಬಾಲ್ಯದ ಹೆಸರು ಶಿವಾಜಿರಾವ್ ಗಾಯಕವಾಡ್. ತಮಿಳಿನ ಖ್ಯಾತ ನಿರ್ದೇಶಕ ಕೆ.ಬಿ.ಬಾಲಚಂದರ್ ನಿರ್ದೇಶನದ ಚಿತ್ರದ ಮೂಲಕ ಖಳನಟನಾಗಿ ಸಿನಿರಂಗ ಪ್ರವೇಶಿಸಿದರು. ನಂತರ ಕೆಲ ಚಿತ್ರಗಳಲ್ಲಿ ಖಳನಾಗಿ ನಟಿಸಿ, ಮುಂದೆ ನಾಯಕನಾಗಿ ಬಡ್ತಿ ಪಡೆದರು. ರಜನಿಕಾಂತ್ ಕನ್ನಡದಲ್ಲಿ ನಟಿಸಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.


cover image
ಕಥಾಸಂಗಮ 1976
1

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾಸಂಗಮ ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಮೊದಲ ಚಿತ್ರ ಮತ್ತು ಅವರ ಸಿನಿ ಬದುಕಿನ ಎರಡನೇ ಚಿತ್ರ. ಈ ಚಿತ್ರದಲ್ಲಿ ಪುಟ್ಟಣ್ಣನವರು ಒಂದು ಚಿತ್ರದಲ್ಲಿ ಮೂರು ಭಿನ್ನ ಉಪಕಥೆಗಳನ್ನು ಸೇರಿಸಿ ಚಿತ್ರ ಮಾಡಿದ್ದರು. ಭಾರತೀಯ ಚಿತ್ರರಂಗದಲ್ಲೇ ಇದೊಂದು ಅಭೂತಪೂರ್ವ ಪ್ರಯೋಗವಾಗಿತ್ತು. ಚಿತ್ರದಲ್ಲಿ ರಜನಿಕಾಂತ್ ಮುನಿತಾಯಿ ಕಥಾಭಾಗದಲ್ಲಿ ನಟಿಸಿದ್ದರು.

ಬಾಳು ಜೇನು
2

80ರ ದಶಕದಲ್ಲಿಯೇ ಈ ಚಿತ್ರ ಕ್ರಾಂತಿಕಾರಿ ಸಾಮಾಜಿಕ ಕಥೆಯನ್ನು ಹೊಂದಿತ್ತು. ಅಚಾತುರ್ಯದಿಂದ ತನ್ನ ಸಂಗಾತಿಯೊಡನೆ ಒಂದು ರಾತ್ರಿ ಕಳೆಯುವ ನಾಯಕಿ ತನ್ನ ಸಂಗಾತಿ ಕಣ್ಮರೆಯಾದಾಗ ಬೇರೆಯವನನ್ನು ಮದುವೆಯಾಗಿ ಸಂಸಾರ ಮಾಡುತ್ತಿರುತ್ತಾಳೆ. ಹಲವು ವರ್ಷಗಳ ನಂತರ ಮತ್ತೆ ಅವಳ ಬಾಳಲ್ಲಿ ಬರುವ ಪ್ರಿಯಕರ ಅವಳ ಬಾಳಲ್ಲಿ ಹೇಗೆ ಬಿರುಗಾಳೆ ತರುತ್ತಾನೆ ಎಂಬುದನ್ನ ಚಿತ್ರ ತೋರಿಸಿತು. ಕುಣಿಗಲ್ ನಾಗಭೂಷಣ್ ಮತ್ತು ಬಾಲನ್ ನಿರ್ದೇಶನದಲ್ಲಿ ಮೂಡಿಬಂದ ಬಾಳು ಜೇನು ಚಿತ್ರದಲ್ಲಿ  ಆರತಿ, ಗಂಗಾಧರ್, ರಜನಿಕಾಂತ್, ಪಂಡಿರಿಬಾಯಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನವಿದ್ಧ ಈ ಚಿತ್ರಕ್ಕೆ ಕೆ.ಆರ್.ರವಿಚಂದ್ರನ್ ಬಂಡವಾಳ ಹೂಡಿದ್ದರು.

ಒಂದು ಪ್ರೇಮದ ಕಥೆ
3

ಜೋಸೈಮನ್ ನಿರ್ದೇಶನದಲ್ಲಿ ಮೂಡಿಬಂದ ಒಂದು ಪ್ರೇಮದ ಕಥೆ ಚಿತ್ರದಲ್ಲಿ ರಜನಿಕಾಂತ್, ಅಶೋಕ್, ಶಾರದಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ಟಿ.ಜಿ.ಲಿಂಗಪ್ಪನವರ ಛಾಯಾಗ್ರಹಣವಿತ್ತು. ಈ ಸಿನಿಮಾದಲ್ಲಿ ರಜನಿಕಾಂತ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ರಜನಿಕಾಂತ್ ಅವ್ರಿಗೆ ಜೋಡಿಯಾಗಿ ಶಾರದಾ ಅವರು ನಟಿಸಿದ್ದರು. ಇದು ಬ್ಲ್ಯಾಕ್ ಆಂಡ್ ವೈಟ್ ಸಿನಿಮಾಸ್ಕೋಪ್‌ನಲ್ಲಿ ದಕ್ಷಿಣ ಭಾರತದ ಮೊದಲ ಚಲನಚಿತ್ರವಾಗಿದೆ.

 

ಸಹೋದರರ ಸವಾಲ್
4

ಕೆ.ಎಸ್.ಆರ್.ದಾಸ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಜನಿಕಾಂತ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ನಾಯಕಿಯರಾಗಿ ಪದ್ಮಪ್ರಿಯಾ, ಕವಿತಾ, ಜಯಮಾಲಿನಿ ನಟಿಸಿದ್ದರು. ಚಿತ್ರಕ್ಕೆ ಚೆಲ್ಲಪಿಲ್ಲ ಸತ್ಯಂ ಸಂಗೀತ ನೀಡಿದ್ದರು. ಬಾಲ್ಯದಲ್ಲಿ ಬೇರೆಯಾದ ಇಬ್ಬರು ಸಹೋದರರು, ಬೇರೆ ವಾತಾವರಣದಲ್ಲಿ ಬೆಳೆದು ಪರಸ್ಪರ ವಿರುದ್ಧವಾಗಿ ಹೋರಾಡಲು ನಿಲ್ಲುತ್ತಾರೆ. ನಂತರ ತಾವು ಪರಸ್ಪರ ಸಹೋದರರೆಂದು ಅರಿತು ಬಾಲ್ಯದಲ್ಲಿ ತಮ್ಮ ಕುಟುಂಬಕ್ಕೆ ಅನ್ಯಾಯ ಮಾಡಿದ್ದವರ ವಿರುದ್ದ ಸಿಡಿದೇಳುತ್ತಾರೆ. ಇದು ಈ ಸಿನಿಮಾದ ಕಥೆ. 

ಕುಂಕುಮ ರಕ್ಷೆ
5

ಎಸ್.ಕೆ.ಎ ಚಾರಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಜನಿಕಾಂತ್, ಅಶೋಕ್ ಮತ್ತು ಮಂಜುಳಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ವಿಜಯ ಭಾಸ್ಕರ್ ಸಂಗೀತದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಮ್ ಕಂಠದಲ್ಲಿ ಚಿತ್ರದ ಗೀತೆಗಳು ಮೂಡಿ ಬಂದವು. ಈ ಚಿತ್ರದಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ತಾನು ಪ್ರೀತಿಸಿದ ಹುಡುಗಿ ಬೇರೆವರನ್ನು ವಿವಾಹವಾಗಿದ್ದನನ್ನು ತಿಳಿದು ನೋವನ್ನು ಅನುಭವಿಸಿದ ವೈದ್ಯ, ಮುಂದೆ ತಾನು ಪ್ರೀತಿಸಿದ ಹುಡುಗಿಯ ಗಂಡನಿಗೆ ಪದೇ ಪದೇ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಬರುತ್ತದೆ.

ಗಲಾಟೆ ಸಂಸಾರ
6

ಸಿ.ವಿ.ರಾಜೇಂದ್ರನ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಜನಿಕಾಂತ್, ಮಂಜುಳಾ ಮತ್ತು ಶುಭಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜಾನಕಮ್ಮ ಮತ್ತು ವಾಣಿ ಜಯರಾಮ್ ಕಂಠದಲ್ಲಿ ಚಿತ್ರದ ಗೀತೆಗಳು ಮೂಡಿಬಂದವು. ಈ ಚಿತ್ರದಲ್ಲಿ ರಜನಿಕಾಂತ್ ತನ್ನ ಹೆಂಡತಿಯೊಂದಿಗಿನ ವಿರಸದಿಮದ ಡೈವೋರ್ಸ್ ನೀಡಿ ಬೇರೊಂದು ಯುವತಿಯ ಹಿಂದೆ ಹೋಗುವ ಪಾತ್ರದಲ್ಲಿ ನಟಿಸಿದ್ದರು. ವಿಷ್ಣುವರ್ಧನ್ ಶ್ರೀಮಂತ ತಂದೆಯ ಪುತ್ರನಾಗಿ, ನಂತರ ತಾನು ಪ್ರೀತಿಸಿದ ಹುಡುಗಿಗಾಗಿ ಮನೆ ಬಿಟ್ಟು ಹೋಗುವ ಯುವಕನಾಗಿ ನಟಿಸಿದ್ದರು.

ಕಿಲಾಡಿ ಕಿಟ್ಟು
7

ಕೆ.ಎಸ್.ಆರ್.ದಾಸ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಜನಿಕಾಂತ್, ಕವಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನಟಿ ಸುಧಾರಾಣಿ ಬೇಬಿ ಜಯಶ್ರೀ ಹೆಸರಿನಲ್ಲಿ ಬಾಲನಟಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ರಾಬಿನ ಹುಡ್ ಮಾದರಿಯ ಕಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರೆ, ಕಳ್ಳನನ್ನು ಹಿಡಯುವ ಪಾತ್ರದಲ್ಲಿ ರಜನಿಕಾಂತ್ ಪೋಲಿಸ್ ಅವತಾರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಮೂರನೇ ಬಾರಿಗೆ ವಿಷ್ಣು-ರಜನಿ ಜೊತೆಗೂಡಿದರು. 

ಮಾತು ತಪ್ಪದ ಮಗ
8

ಪಟೇಕಿ ಶಿವರಾಮ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಾತು ತಪ್ಪಿದ ಮಗ ಚಿತ್ರದಲ್ಲಿ ಅನಂತನಾಗ್. ಆರತಿ, ರಜಿನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಆರ್.ಎನ್.ಜಯಗೋಪಾಲ್ ಸಾಹಿತ್ಯದಲ್ಲಿ ಮೂಡಿಬಂದ ಗೀತೆಗಳಿಗೆ ಇಳಯರಾಜ ಸಂಗೀತ ನೀಡಿದ್ದರು. ಈ ಚಿತ್ರದಲ್ಲಿ ರಜನಿ ನೇಗಿಟಿವ್ ಶೇಡ್ ನಲ್ಲಿ ಮಿಂಚಿದ್ದರು.

 

ತಪ್ಪಿದ ತಾಳ
9

ಕೆ.ಬಾಲಚಂದರ್ ನಿರ್ದೇಶನದಲ್ಲಿ ಮೂಡಿಬಂದ ತಪ್ಪಿದ ತಾಳ ಚಿತ್ರದಲ್ಲಿ ರಜಿನಿಕಾಂತ್ ಮತ್ತು ಸರಿತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಒಬ್ಬ ರೌಡಿ ಮತ್ತು ವೇಶ್ಯೆ ಮನ ಪರಿವರ್ತನೆಯಾಗಿ ಸಮಾಜದಲ್ಲಿ ಮತ್ತೆ ಒಂದಾಗಿ ಬಾಳಲು ಬಂದಾಗ ಸಮಾಜ ಅವರನ್ನು ಕಾಣುವ ಪರಿಯನ್ನು ಚಿತ್ರ ಮನೋಘ್ನವಾಗಿ ತೋರಿಸಿತು. ಬದುಕಿನ ತಾಳ ಒಮ್ಮೆ ತಪ್ಪಿದರೆ, ಮತ್ತೆ ಸರಿಮಾಡಲು ಬಾರದೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿತು. ಈ ಚಿತ್ರದಲ್ಲಿ ಕಮಲ್ ಹಾಸನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

ಪ್ರಿಯಾ
10

ಎಸ್.ಪಿ.ಮುತ್ತುರಾಮನ್ ನಿರ್ದೇಶನದಲ್ಲಿ ಮೂಡಿಬಂದ ಪ್ರಿಯಾ ಚಿತ್ರದಲ್ಲಿ ರಜಿನಿಕಾಂತ್, ಅಂಬರೀಶ್ ಮತ್ತು ಶ್ರೀದೇವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಖ್ಯಾತ ಚಿತ್ರನಟಿ ಪ್ರಿಯಾ (ಶ್ರೀದೇವಿ) ಮತ್ತು ಅವಳ ಬಾಯ್ ಫ್ರೆಂಡ್ ಭರತ್ (ಅಂಬರೀಶ್) ಮದುವೆಯಾಗಲು ಅವಳ ಮ್ಯಾನೇಜರ್ ಅಡ್ಡಿಪಡಿಸುತ್ತಿರುತ್ತಾನೆ. ಹಣಕಾಸಿನ ವಿಚಾರದಲ್ಲಿ ತನ್ನ ಮೇಲೆ ಆಧಿಕಾರ ನೆಡಸುತ್ತಿರುವ ಮತ್ತು ಅವಳ ಮದುವೆಗೆ ಅಡ್ಡಿಪಡಿಸುತ್ತಿರುವ ಮ್ಯಾನೇಜರ್ ನನ್ನು ಮಟ್ಟಹಾಕಲು ಲಾಯರ್ ಗಣೇಶ್ (ರಜಿನಿಕಾಂತ್) ಮೊರೆ ಹೋಗುತ್ತಾಳೆ. ಈ ಸಮಸ್ಯೆಯನ್ನು ಭರತ್ ಹೇಗೆ ಬಗೆ ಹರಿಸುತ್ತಾನೆ ಎಂಬುದು ಚಿತ್ರದ ಕಥೆ.ಈ ಚಿತ್ರ ಅದ್ಭುತ ಯಶಸ್ಸು ಕಂಡು 175 ದಿನ ಪ್ರದರ್ಶನ ಕಂಡಿತು.

ಘರ್ಜನೆ
11

ಸಿ.ವಿ.ರಾಜೇಂದ್ರನ್ ನಿರ್ದೇಶನದಲ್ಲಿ ಮೂಡಿಬಂದ ಘರ್ಜನೆ ಚಿತ್ರದಲ್ಲಿ ರಜಿನಿಕಾಂತ್ ಮತ್ತು  ಮಾಧವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಕನ್ನಡ ,ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಯಿತು. ಈ ಚಿತ್ರದಲ್ಲಿ ರಜಿನಿ ವೈದ್ಯನ ಪಾತ್ರದಲ್ಲಿ ನಟಿಸಿದ್ದರು. ಹಲವಾರು ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಒಂದು ಗುಂಪನ್ನು ಬಯಲಿಗೆ ತರುವಲ್ಲಿ ವೈದ್ಯ ಹೇಗೆ ಯಶಸ್ವಿಯಾಗುತ್ತಾನೆ ಎಂಬುದು ಸಿನಿಮಾದ ಕಥೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+