Don't Miss!
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಂಪಾಪುರದಲ್ಲಿ 'ಹೃದಯದಲ್ಲಿ ಇದೇನಿದು'
ಹಿಂದಿನ ಚಿತ್ರಗಳ ಹಾಡಿನ ಪಲ್ಲವಿ ಇಂದಿನ ಚಿತ್ರದ ಶೀರ್ಷಿಕೆಗಳಾಗುತ್ತಿರುವ ಈ ಸಂದರ್ಭದಲ್ಲಿ ಆ ಸಾಲಿಗೆ ಸೇರುತ್ತಿರುವ ಮತ್ತೊಂದು ಚಿತ್ರ 'ಹೃದಯದಲ್ಲಿ ಇದೇನಿದು'. ವಿಶಿಷ್ಟ ಪ್ರೇಮಕತೆಯುಳ್ಳ ಈ ಚಿತ್ರದ ಚಿತ್ರೀಕರಣ ಸರಾಗವಾಗಿ ನಡೆಯುತ್ತಿದೆ ಎಂದು ಪತ್ರಕರ್ತ, ನಿರ್ದೇಶಕ ಶಿವನ್ ತಿಳಿಸಿದ್ದಾರೆ.
ಶ್ರೀಹುಲಿಯೂರು ದುರ್ಗಾಂಬ ಪ್ರೊಡಕ್ಷನ್ ಲಾಂಛನದಲ್ಲಿ ಕುಮಾರಿ ದರ್ಶನ್ಪ್ರಿಯಾ ಹಾಗೂ ಕುಮಾರಿ ರೋಹಿಣಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕೆಂಪಾಪುರದ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಣ ಸಾಗುತ್ತಿದೆ. ಮುಂಬೈನಿಂದ ಆಗಮಿಸಿದ ನಾಯಕಿ ರೂಪಾಲಿ ತಾತ ಲೋಕನಾಥ್ ನಿವಾಸದಲ್ಲಿ ಮತ್ತೊಬ್ಬ ನಾಯಕಿ ವಂದನಾಗುಪ್ತಾಳೊಂದಿಗೆ ಹರಟುವ ಸನ್ನಿವೇಶ ಈ ಭಾಗದಲ್ಲಿ ಚಿತ್ರೀಕೃತವಾಗಿದೆ.
ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ತ್ಯಾಗರಾಜನ್ ಅವರ ಛಾಯಾಗ್ರಹಣವಿದೆ. ಧರ್ಮಪ್ರಕಾಶ್ ಸಂಗೀತ, ನಾಗೇಂದ್ರಪ್ರಸಾದ್, ಕವಿರಾಜ್, ಜಯಂತಕಾಯ್ಕಿಣಿ ಗೀತರಚನೆ, ತವಸಿರಾಜ್ ಸಾಹಸ, ಹೊಸ್ಮನೆಮೂರ್ತಿ ಕಲೆ ಹಾಗೂ ವೇಣುಗೋಪಾಲ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಹುಲ್, ರೂಪಾಲಿ, ವಂದನಾಗುಪ್ತ, ಅವಿನಾಶ್, ರಂಗಾಯಣರಘು, ಸುಧಾಬೆಳವಾಡಿ, ಚಿತ್ರಾಶೆಣೈ ಮುಂತಾದವರಿದ್ದಾರೆ.
(ದಟ್ಸ್ಕನ್ನಡ ಸಿನಿವಾರ್ತೆ)