Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸರ್ಕಸ್ 'ಗಾಗಿ ಗಣೇಶ್ ರ ಮೈನವಿರೇಳಿಸುವ ಸಾಹಸ
ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ 'ಸರ್ಕಸ್' ಚಿತ್ರಕ್ಕಾಗಿ ವೇಗವಾಗಿ ಚಲಿಸುತ್ತಿರುವ ರೈಲಿನ ಅಪಾಯಕಾರಿ ಸಾಹಸ ದೃಶ್ಯದವೊಂದರಲ್ಲಿ ನಟಿಸಿ ಧೈರ್ಯ ಸಾಹಸಗಳನ್ನೇ ಮೆರೆದಿದ್ದಾರೆ. ಸಾಹಸ ದೃಶ್ಯಕ್ಕಾಗಿ 10 ಬೋಗಿಗಳ ರೈಲು ಇಂಜಿನನ್ನು ಬಳಸಿಕೊಳ್ಳಲಾಗಿದ್ದು, ಈ ದೃಶ್ಯಗಳನ್ನು ರವಿ ವರ್ಮಾ ನಿರ್ದೇಶಿಸಿದ್ದಾರೆ. ಸುರಂಗವೊಂದರಲ್ಲಿ 50 ಕಿ.ಮೀ ವೇಗದಲ್ಲಿ 150 ಮೀಟರ್ ಗಳಷ್ಟು ದೂರ ರೈಲು ಇಂಜಿನ್ ಸಾಗುವ ದೃಶ್ಯವಿದೆ. ಸುರಂಗದ ಕತ್ತಲ ಪ್ರದೇಶದಲ್ಲಿ ರೈಲ್ ಇಂಜಿನ್ ನಿಲ್ಲಿಸುವ ಪ್ರಯತ್ನ ಮಾಡುವ ಅಪಯಕಾರಿ ದೃಶ್ಯವೊಂದರಲ್ಲಿ ಗಣೇಶ್ ನಟಿಸಿದ್ದಾರೆ.
ನನ್ನ ವೃತ್ತಿ ಜೀವನದಲ್ಲೇ ತೀರಾ ಅಪಯಕಾರಿ ಸಾಹಸ ದೃಶ್ಯ ಇದಾಗಿತ್ತು ಎನ್ನುತ್ತಾರೆ 100ಕ್ಕೂ ಅಧಿಕ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ರವಿ ವರ್ಮಾ. ಹಾಗೆಯೇ ಗಣೇಶ್ ವೇಗವಾಗಿ ಚಲಿಸುತ್ತಿರುವ ರೈಲಿನ ಮೇಲೆ ಒಂದು ಬೋಗಿಯಿಂದ ಮತ್ತೊಂದಕ್ಕೆ ಜಿಗಿಯುವ ದೃಶ್ಯಗಳು ಇವೆ. ಈ ಸಾಹಸ ದೃಶ್ಯಗಳಲ್ಲೂ ಅವರು ಯಶಸ್ವಿಯಾಗಿ ನಟಿಸಿದ್ದಾರೆ. ಇವಿಷ್ಟು ಸಾಹಸಗಳನ್ನು ಮಾಡಿ ಗಣೇಶ್ ಯಾವುದೆ ಅಪಾಯಗಳನ್ನು ತಂದುಕೊಂಡಿಲ್ಲ.ಈ ಎಲ್ಲ ಸಾಹಸ ದೃಶ್ಯಗಳನ್ನು ಬಂಧಿಸಲು ಮೂರು ದುಬಾರಿ ಕ್ಯಾಮೆರಾಗಳನ್ನು ಸಹ ಬಳಸಲಾಗಿದೆ.
20 ದಿನಗಳ ಚಿತ್ರೀಕರಣಕ್ಕಾಗಿ ರೈಲ್ವೆ ಇಲಾಖೆಯ ಒಪ್ಪಿಗೆ ಪಡೆಯಲಾಗಿದ್ದು ಇದಕ್ಕಾಗಿ ರು.60 ಲಕ್ಷಗಳ ಶುಲ್ಕ ತೆರಲಾಗಿದೆ. ಹಾಗೆಯೇ ರೈಲ್ವೆ ಆಸ್ತಿಪಾಸ್ತಿ ಹಾಗೂ ಚಿತ್ರೀಕರಣದಲ್ಲಿ ಭಾಗವಹಿಸಿರುವ ಮಂದಿಗೆ ವಿಮೆಯನ್ನು ಮಾಡಿಸಲಾಗಿದೆ. ಭಾರಿ ಬಜೆಟ್ ನೊಂದಿಗೆ 'ಸರ್ಕಸ್' ಚಿತ್ರವನ್ನು ನಿರ್ಮಿಸುತ್ತಿದ್ದು 19.5 ಕೋಟಿ ರು.ಗಳನ್ನು ವೆಚ್ಚ ಮಾಡಲಾಗುತ್ತಿದೆ. ಸರ್ಕಸ್ ಚಿತ್ರದಲ್ಲಿ ರೈಲಿನ ಸನ್ನಿವೇಶಗಳು ಶೇ.50ರಷ್ಟಿದ್ದು ಅದಕ್ಕೆ ಸಂಬಂಧಿಸಿದ 20 ದಿನಗಳ ಚಿತ್ರೀಕರಣ ಈಗಾಗಲೆ ಮುಗಿದಿದೆ. ಹಾಡುಗಳ ಚಿತ್ರೀಕರಣಕ್ಕಾಗಿ ಆಸ್ಟ್ರಿಯಾ ಹಾಗೂ ಜರ್ಮನಿ ದೇಶಗಳಿಗೆ ಅ.9ರಂದು ಸರ್ಕಸ್ ಚಿತ್ರತಂಡ ಹೊರಟಿತು. ಗಣೇಶ್ ಗೆ ಜೋಡಿಯಾಗಿ ಅರ್ಚನಾ ಗುಪ್ತಾ ನಟಿಸಿದ್ದಾರೆ. ದಯಾಳ್ ಪಿಕ್ಚರ್ಸ್ ಬ್ಯಾನರ್ ನಡಿ ದಯಾಳ್ ಪದ್ಮನಾಭ ನಿರ್ಮಿಸುತ್ತಿರುವ ಈ ಪ್ರೇಕ್ಷಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮಸಾಲ ಚಿತ್ರಗಳ ನಿರ್ದೇಶಕ ಮತ್ತೆ ಬಂದ