Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ಚಿತ್ರಾನ್ನ!
ಮದನ ಬಂದಷ್ಟೇ ವೇಗವಾಗಿ ಮನೆಗೆ ಮರಳಿದ! ಜೈಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿಗಳ ಜೇಬು ಖಾಲಿ ಮಾಡಿದ. ಈ ಜೋಡಿಯ ಮುಂದಿನ ನಿರೀಕ್ಷೆ ಈ ಬಂಧನ.
ವಿಷ್ಣುವರ್ಧನ್, ಜಯಪ್ರದಾ ಜೋಡಿಯ ಈ ಬಂಧನದ ಚಿತ್ರಕತೆ ಮತ್ತು ನಿರ್ದೇಶನದ ಹೊಣೆಯನ್ನು ವಿಜಯಲಕ್ಷ್ಮಿ ಸಿಂಗ್ ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಮದನ ಚಿತ್ರವನ್ನು ನಿರ್ದೇಶಿಸಿ ಪತಿದೇವರು(ಜೈ ಜಗದೀಶ್ ) ಸೋತರು. ನಾನಾದರೂ ಗೆಲ್ಲೋಣ ಅನ್ನೋ ಬಯಕೆ ಅವರದು. ಮನೋಮೂರ್ತಿ ಸಂಗೀತ ಚಿತ್ರಕ್ಕಿದೆ.
***
ಸದ್ಯದ ವೇಗ ನೋಡಿದರೆ ಮಾತಾಡ್ ಮಾತಾಡು ಮಲ್ಲಿಗೆ, ಇತ್ತೀಚಿನ ಮುಂಗಾರು ಮಳೆ ದಾಖಲೆಗಳನ್ನು ಮುರಿಯುವಂತೆ ಕಾಣುತ್ತಿದೆ. ಚಿತ್ರದ ಹಾಡು, ಕತೆ, ಪಾತ್ರಗಳು ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿವೆ. ಈಗಾಗಲೇ ನಿರ್ದೇಶಕ ನಾಗತಿ ಹಳ್ಳಿ ಮುಖ ಹುಣ್ಣಿಮೆ ಚಂದ್ರನಂತೆ ಹೊಳೆಯುತ್ತಿದೆ!
***
ಸಿಕ್ಸರ್ ನಂತರ ನಿರ್ದೇಶಕ ಶಶಾಂಕ್ ಅವರ ಮೊಗ್ಗಿನ ಜಡೆ ಚಿತ್ರೀಕರಣ ಭರದಿಂದ ಸಾಗಿದೆ. ಮುಂಗಾರು ಮಳೆ ನಿರ್ಮಾಪಕ ಇ.ಕೃಷ್ಣಪ್ಪ ಹಣ ಸುರಿದಿದ್ದಾರೆ. ಚಿತ್ರದ ತುಂಬ ಹೊಸ ಮುಖಗಳೇ..
***
ಇದು ಕತೆಯಲ್ಲ ಕೆತ್ತನೆ ಎಂಬ ಉಪಶೀರ್ಷಿಕೆಯಡಿ ನೀನೊಲಿದ ಕ್ಷಣಚಿತ್ರ ತಯಾರಾಗುತ್ತಿದೆ.
***
ತೊಟ್ಟಿಲು ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆಯಂತೆ. ಕತೆ, ಚಿತ್ರಕತೆ, ನಿರ್ದೇಶನ ಕೆ.ಪ್ರಸನ್ನ ಕುಮಾರ್ ಅವರದು. ಜೋಗಿ ಖ್ಯಾತಿಯ ಮಳವಳ್ಳಿ ಸಾಯಿಕೃಷ್ಣ ಚಿತ್ರಕ್ಕೆ ಸಂಭಾಷಣೆ ನೀಡಲಿದ್ದಾರೆ. ತೊಟ್ಟಿಲಲ್ಲಿ ಮಲಗಿದ ಮಗು ಪಕ್ಕ ಮಚ್ಚು ಇಟ್ಟಿರುವ ಚಿತ್ರ ಜಾಹೀರಾತಿನಲ್ಲಿ ಕಾಣಿಸಿದೆ.
***
ಜನ್ಮ ಅನ್ನೋ ಚಿತ್ರದ ಹಾಡುಗಳ ಧ್ವನಿ ಮುದ್ರಣ ಆರಂಭಗೊಂಡಿದೆ. ಆದಿಯೂ ಅಂತ್ಯವೂ ಇಲ್ಲದವನು ಈಶ್ವರ.. ಪ್ರೀತಿ ಮಾಡದವನು ಇಲ್ಲಿ ನಶ್ವರ ಎಂದು ಜಾಹೀರಾತು ಹೇಳುತ್ತಿದೆ.
***
ನಾನು ನೀನು ಜೋಡಿ ಕ್ಯಾಸೆಟ್ ಬಿಡುಗಡೆ ಸದ್ಯದಲ್ಲೇ ಆಗಲಿದೆ. ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿದ್ದಾರೆ. ಹಂಸಲೇಖ ಹಾಡು, ನಂಜುಂಡೇ ಗೌಡರ ದುಡ್ಡು ಜೋಡಿಯಾಗಿದೆ. ಫಲಿತಾಂಶ ನೋಡೋಣ.
***
ಉಪೇಂದ್ರ ಮತ್ತು ದರ್ಶನ್ ಅಭಿನಯದ ಅನಾಥರು ಸೆಪ್ಟೆಂಬರ್ 18 ರಂದು ತೆರೆಕಾಣಲಿದೆ.
***
ಸತ್ಯ ಇನ್ ಲವ್ಸಂಕ್ರಾಂತಿಗೆ ಬರಲಿದೆ. ದಸರಾ ಹಬ್ಬಕ್ಕೆ ಧ್ವನಿ ಸುರಳಿ ಬರುತ್ತದೆ ಎನ್ನುತ್ತಾರೆ ನಿರ್ದೇಶಕ ರಾಘವ್ ಲೋಕಿ.
***
ಗಂಗೆ ಬಾರೇ ತುಂಗೆ ಬಾರೆಚಿತ್ರೀಕರಣ ಭರದಿಂದ ಸಾಗಿದೆ. ಕೋಕಿಲಾ ಸಾಧು ನಿರ್ದೇಶನ ಮಾಡಿದ್ದು, ದೇವರಾಜ್ ಪುತ್ರ ಪ್ರಜ್ವಲ್ ಚಿತ್ರದ ನಾಯಕ.
***
ಇದು ಬದುಕಿನ ಕತೆ ಮಚ್ಚು ಬಂದೂಕಿನ ಜೊತೆ. ಬಲ್ಲಿಯೋ ಬಲಿಯೋ ಗೊತ್ತಿಲ್ಲ. ಈ ಭೂಗತ ಲೋಕದ ಖದರೇ ಹೀಗೆ.. ಇಲ್ಲಿ ಬಲರಾಮ ಬಲ್ಲಿಯಾಗ್ತಾನೆ... ಎನ್ನುತ್ತಿದೆ ಬಲ್ಲಿಚಿತ್ರದ ಜಾಹೀರಾತು
. ***
ಜೊತೆಜೊತೆಯಲಿಚಿತ್ರದ ಜನಪ್ರಿಯ ಹಾಡು ; ಓ ಗುಣವಂತ. ಈ ಹಾಡೇ ಪ್ರೇಮ್ ಅವರ ಹೊಸ ಚಿತ್ರದ ಶೀರ್ಷಿಕೆ. ಸದ್ದು ಗದ್ದಲವಿಲ್ಲದೇ ಚಿತ್ರೀಕರಣ ಮುಗಿಸಿರುವುದಾಗಿ ಚಿತ್ರತಂಡ ಹೇಳಿದೆ.
ಕತೆ, ಚಿತ್ರಕತೆ, ನಿರ್ದೇಶನದ ಹೊಣೆ ಹೊತ್ತಿರುವವರು ರಘುವರ್ಧನ್. ಹಂಸಲೇಖ ಸಂಗೀತ ನೀಡಿದ್ದಾರೆ. ಪ್ರೇಮ್, ರೇಖಾ, ಅವಿನಾಶ್, ರಂಗಾಯಣ ರಘು, ಚಿತ್ರಾ ಶೆಣೈ ಪ್ರಮುಖ ಪಾತ್ರದಲ್ಲಿದ್ದಾರೆ.