Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೋತಿಗಳು ಖ್ಯಾತಿಯ ಸಿಂಗ್ ಬಾಬು ವೊಕ್ಹಾರ್ಟ್ನಲ್ಲಿ
ಮೊನ್ನೆ, ಮಂಗಳವಾರ (ಮಾರ್ಚ್ 19) ಸೇಲಂನಲ್ಲಿ ಮಾರುತಿ ಕಾರೊಂದಕ್ಕೆ ಒಪೆಲ್ ಕಾರು ಗುದ್ದಿ, ಕಾರೊಳಗಿದ್ದವರಿಗೆ ಭಾರೀ ಏಟು. ಆ ಮಾರುತಿ ಕಾರಿನಲ್ಲಿ ಇದ್ದದ್ದು ಅಯ್ಯಪ್ಪನ ದರುಶನ ಮಾಡಿಕೊಂಡು ಬರಲು ಹೋಗಿದ್ದ ರಾಜೇಂದ್ರ ಸಿಂಗ್ ಬಾಬು. ಇದೀಗ ಬೆಂಗಳೂರಿನ ವೊಕ್ಹಾರ್ಟ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
‘ಮುತ್ತಿನಹಾರ’ದಂಥ ಅಪರೂಪದ ಚಿತ್ರ ಕೊಟ್ಟ ಸಿಂಗ್ ಅವರದ್ದೀಗ ನಗಿಸುವ ಉಮೇದಿ. ಲೈಟ್ ಕಾಮಿಡಿಯಿಂದ ಕಚಗುಳಿ ಕೊಡುವ ಅವರ ಹೊಸ ತಂತ್ರಕ್ಕೂ ಜಯ ಸಂದಿದೆ. ಕುರಿಗಳ ನಂತರ ಕೋತಿಗಳೂ ಸಕ್ಸಸ್ ಆಗಿರುವುದೇ ಇದಕ್ಕೆ ಪುಷ್ಟಿ.
ಈ ಹುಮ್ಮಸ್ಸಿನಲ್ಲಿ ಶುಕ್ರದೆಶೆಯಿರುವಾಗಲೇ ತಮ್ಮ ಮಗ ದುಶ್ಯಂತನನ್ನು ನಾಯಕನನ್ನಾಗಿ ಪರಿಚಯಿಸುವ ಪ್ರಯತ್ನದಲ್ಲಿ ತೊಡಗಿರುವ ಸಿಂಗ್ ಬಾಬು ಅಯ್ಯಪ್ಪನ ನೋಡಲು ಗೆಳೆಯ ವೆಂಕಟೇಶ್ ಎಂಬುವರ ಜೊತೆ ಶಬರಿ ಮಲೈಗೆ ಹೋಗಿ, ವಾಪಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಕಾಲಿಗೆ ಹೆಚ್ಚು ಪೆಟ್ಟಾಗಿದೆ ಅಂತ ಮೊಬೈಲ್ ಮೂಲಕ ಖುದ್ದು ತಾವೇ ಹೇಳುವ ಮಟ್ಟಿಗೆ ಬಾಬು ಹುಷಾರಾಗಿದ್ದಾರೆ. ಯಾವುದೇ ಗಂಭೀರ ಸ್ವರೂಪದ ಅಪಾಯಗಳಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅವರು ಬೇಗ ಮಾಮೂಲಿನಂತಾಗಿ, ಜನರನ್ನು ನಗಿಸಲಿ.
ಸಿಂಗ್ ಬಾಬು ಬೇಗ ಗುಣಮುಖರಾಗಲೆಂದು ನೀವು ಹಾರೈಸಿ?
ಮುಖಪುಟ / ಸ್ಯಾಂಡಲ್ವುಡ್