X
ಹೋಮ್ ಚಲನಚಿತ್ರಗಳ ಒಳನೋಟ

ಭೀಕರ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಕನ್ನಡ ನಟ-ನಟಿಯರ ಪಟ್ಟಿ

Author Sowmya Bairappa | Published: Friday, July 12, 2024, 02:52 PM [IST]

ಸಿನಿಮಾ ನಟ-ನಟಿಯರ ಪ್ರತಿಯೊಂದು ವಿಷಯಗಳು ಮಾಧ್ಯಮಗಳು ಹಾಗೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು ಮಾಡುತ್ತವೆ. ಅದರಲ್ಲಿ ಸೆಲೆಬ್ರಿಟಿಗಳಿಗೆ ಆಗಿರುವಂತಹ ಅಪಘಾತ ಕೂಡ ಒಂದು. ಕನ್ನಡದ ಹಲವು ನಟರು ತಮ್ಮ ಅಥವಾ ಚಾಲಕರ ನಿರ್ಲಕ್ಷ್ಯ ಅಥವಾ ಬೇರೆ ಯಾವುದೋ ಕಾರಣದಿಂದ ಆಕ್ಸಿಡೆಂಟ್‌ಗೆ ಒಳಗಾಗಿದ್ದು, ಕೆಲವರು ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಸಾವನ್ನು ಗೆದ್ದು ಬಂದಿದ್ದಾರೆ. ಇಲ್ಲಿ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಕನ್ನಡ ನಟ-ನಟಿಯರ ಪಟ್ಟಿಯನ್ನು ನೀಡಲಾಗಿದೆ.


cover image
ಪ್ರಣಿತಾ ಸುಭಾಷ್

2017ರ ಜನವರಿಯಲ್ಲಿ ಸೌತ್ ಬ್ಯೂಟಿ ಪ್ರಣೀತಾ ಸುಭಾಷ್ ಹಾಗೂ ಅವರ ತಾಯಿ ತೆಲಂಗಾಣದ ಖಮ್ಮಂನಲ್ಲಿ ಶೋ ರೂಮ್‌ವೊಂದರ ಉದ್ಘಾಟನೆಗೆಂದು ತೆರಳಿದ್ದರು. ಅಲ್ಲಿಂದ ಹೈದರಾಬಾದ್‌ಗೆ ಇನ್ನೋವಾದಲ್ಲಿ ಹಿಂದಿರುವಾಗ, ನಲ್ಗೊಂಡ ಜಿಲ್ಲೆಯ ಗ್ರಾಮವೊಂದರ ಬಳಿ ಎದುರಿಗೆ ಬರುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪ್ರಣೀತಾ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯಗಳಿಂದ ಪಾರಾಗಿದ್ದರು. ಇದಕ್ಕೂ ಮುನ್ನ ಇದೇ ಪ್ರದೇಶದಲ್ಲಿ ಜ್ಯೂ ಎನ್‌ಟಿಆರ್ ಕಾರು ಕೂಡ ಅಪಘಾತವಾಗಿತ್ತು.

ಧ್ರುವ ಸರ್ಜಾ

ಸ್ಯಾಂಡಲ್‌ವುಡ್‌ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 2019ರಲ್ಲಿ ಬಳ್ಳಾರಿಯಲ್ಲಿ ಪೊಗರು ಸಿನಿಮಾ ಚಿತ್ರೀಕರಣ ಮುಗಿಸಿ, ಬೆಂಗಳೂರಿಗೆ ವಾಪಾಸ್ ಆಗುತ್ತಿದ್ದ ಅವರು ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಯಾರೋ ಒಬ್ಬ ಧ್ರುವಾ ಸರ್ಜಾ ಕಾರನ್ನು ಓವರ್‌ಟೇಕ್ ಮಾಡಲು ಹೋಗಿ ಆಕ್ಸಿಡೆಂಟ್ ಸಂಭವಿಸಿತ್ತು. ಕಾರಿನಲ್ಲಿ ಚಾಲಕ ಸೇರಿದಂತೆ ಧ್ರುವ ಸರ್ಜಾ ಮತ್ತು ಸ್ನೇಹಿತರಿದ್ದು, ಅದೃಷ್ಟವಶಾತ್ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದರು. 

ರಿಷಿಕ ಸಿಂಗ್

ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ, ನಟ ಆದಿತ್ಯ ಅವರ ಸಹೋದರಿ ರಿಷಿಕಾ ಸಿಂಗ್, 2020ರ ಜುಲೈ 30ರ ಬೆಳ್ಳಬೆಳ್ಳಗೆ ಕಾರು ಅಪಘಾತಕ್ಕೆ ಸಿಲುಕಿದ್ದರು. ರಿಷಿಕಾ ಸಿಂಗ್ ಹಾಗೂ ಗೆಳತಿ ಅರ್ಪಿತಾ ಇಬ್ಬರು ಗೆಳಯರೊಂದಿಗೆ ಸಣ್ಣ ಪಾರ್ಟಿ ಮಾಡಿ ಹಿಂತಿರುಗುತ್ತಿದ್ದರು. ಈ ಸಂದರ್ಭ ವೈಟ್‌ಫಿಲ್ಡ್ ಸಮೀಪ ರಿಷಿಕಾ ಸಿಂಗ್ ಪ್ರಯಾಣಿಸುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಬೆನ್ನುಹುರಿ ಮುರಿದ್ದರಿಂದ ರಿಷಿಕಾ ಸಿಂಗ್ ಎದ್ದು ಓಡಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಬೆಂಗಳೂರಿನ ಸಕ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಅಪಘಾತವಾದ ಮೊದಲೆರಡು ತಿಂಗಳು ಸ್ಥಿತಿ ಗಂಭೀರ ಅಂತಲೇ ಹೇಳಲಾಗುತ್ತಿತ್ತು. ಆದರೆ, ಒಂದೂವರೆ ವರ್ಷಗಳ ಕಾಲ ಕಷ್ಟಗಳನ್ನು ಎದುರಿಸಿ, ನಿಧಾನವಾಗಿ ಚೇತರಿಸಿಕೊಂಡಿದ್ದರು. 

ಆದಿತ್ಯ

2015ರಲ್ಲಿ ರಿಷಿಕಾ ಸಿಂಗ್ ಸಹೋದರ ನಟ ಆದಿತ್ಯ ಚಲಿಸುತ್ತಿದ್ದ ಫಾರ್ಚ್ಯುನರ್ ಕಾರು ಕೂಡ ಅಪಘಾತಕ್ಕೀಡಾಗಿತ್ತು. ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಅಚಾನಕ್ಕಾಗಿ i10 ಕಾರ್ ಎದುರಿಗೆ ಬಂದು, ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದವು. ಎರಡು ಕಾರುಗಳು ಜಖಂ ಆಗಿದ್ದರೂ, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಎದುರಾಗಿರಲಿಲ್ಲ. ನಟ ಆದಿತ್ಯಗೆ ಸಣ್ಣ-ಪುಟ್ಟ ಗಾಯಗಳಾಗಿದ್ದವು. 

ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಒಂದು ಕಾರ್ಯಕ್ರಮ ಮುಗಿಸಿಕೊಂಡು ಬೆಂಗಳೂರಿಗೆ ಹೋಗುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಕಾರಿನಲ್ಲಿದ್ದ ದರ್ಶನ್, ದೇವರಾಜ್‌, ಪ್ರಜ್ವಲ್ ದೇವರಾಜ್ ಅವರಿಗೂ ಪೆಟ್ಟಾಗಿತ್ತು. ಈ ಸಂದರ್ಭ ಮುಂದೆ ಕುಳಿತುಕೊಂಡಿದ್ದ ದರ್ಶನ್ ಅವರ ಬಲಗೈಗೆ ಬಲವಾದ ಪೆಟ್ಟು ಬಿದ್ದು, ಅವರ ಕೈ ಮೂಳೆ ಮುರಿದು ಹೋಗಿತ್ತು. ಆನಂತರ ಚಿಕಿತ್ಸೆಗೆ ಒಳಗಾಗಿದ್ದ ದರ್ಶನ್, ಈಗಲೂ ಕೂಡ ಅದರ ನೋವು ಅನುಭವಿಸುತ್ತಿದ್ದಾರೆ. 

ಶರ್ಮಿಳಾ ಮಾಂಡ್ರೆ

2020ರಲ್ಲಿ ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಜಾಗ್ವಾರ್ ಕಾರ್‌ನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಬೆಂಗಳೂರಿನ ವಸಂತನಗರ ಫ್ಲೈಓವರ್‌ನ ಕೆಳಗಿನ ಪಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದಿತ್ತು. ಇದರಿಂದ ಕಾರಿನ ಬಲಭಾಗ ತೀವ್ರ ಜಖಂ ಆಗುವುದರೊಂದಿಗೆ ಶರ್ಮಿಳಾ ಅವರ ಮುಖಕ್ಕೆ ಪೆಟ್ಟಾಗಿತ್ತು. ಶರ್ಮಿಳಾ ಅವರ ಸ್ನೇಹಿತನ ಕೈಗೆ ಮತ್ತು ಬಲಗೈಗೆ ತುಂಬಾ ಪೆಟ್ಟಾಗಿತ್ತು. 

ಯತಿರಾಜ್ ಜಗ್ಗೇಶ್

ಕನ್ನಡದ ಹಿರಿಯ ನಟ, ರಾಜಕಾರಣಿ ಜಗ್ಗೇಶ್ ಪುತ್ರ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು 2021ರಲ್ಲಿ ಅಪಘಾತಕ್ಕೀಡಾಗಿತ್ತು. ಬೆಂಗಳೂರು-ಹೈದರಾಬಾದ್‌ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಯತಿರಾಜ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಆಗಿದ್ದು, ಯಾವುದೇ ಅಪಾಯ ಸಂಭವಿಸಿರಲಿಲ್ಲ. 

ಮಾಲಾಶ್ರೀ

1994ರ ಜುಲೈ 24ರಂದು ನಿರ್ಮಾಪಕ ಸಚಿನ್ ಮಲ್ಯ, ನಟ ಸುನೀಲ್ ಮತ್ತು ಮಾಲಾಶ್ರೀ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಎದುರಿಗೆ ಬರುವ ಟ್ರಕ್‌ವೊಂದು ಕಾರಿಗೆ ಗುದ್ದಿತು. ಈ ಅಪಘಾತ ಸಂಭವಿಸಿದ ಒಂದು ತಾಸಿನ ನಂತರ ಸುನೀಲ್ ಕೊನೆಯುಸಿರೆಳೆದರೆ, ಮಾಲಾಶ್ರೀಯವರು ಹಲವು ಗಾಯಗಳೊಂದಿಗೆ ಪವಾಡಸದೃಶ್ಯವಾಗಿ ಬದುಕುಳಿದಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+