X
ಹೋಮ್ ಚಲನಚಿತ್ರಗಳ ಒಳನೋಟ

Happy Birthday: ರಾಜ್‌ ಬಿ ಶೆಟ್ಟಿ ನಟನೆಯ ಟಾಪ್ ಸಿನಿಮಾಗಳ ಪಟ್ಟಿ ಇಲ್ಲಿದೆ.

Author Sowmya Bairappa | Updated: Friday, July 5, 2024, 09:11 AM [IST]

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕರಾಗಿರುವ ರಾಜ್ ಬಿ ಶೆಟ್ಟಿ 2017ರಲ್ಲಿ ಒಂದು ಮೊಟ್ಟೆಯ ಕಥೆ ಸಿನಿಮಾ ಮೂಲಕ ಬಣ್ಣ್ದ ಲೋಕಕ್ಕೆ ಕಾಲಿಟ್ಟರು. ಮಂಗಳೂರಿನ ಭಾರತಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ರಾಜ್, ನಂತರ ರೋಷಿಣಿ ಸಮಾಜಸೇವಾ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಮಂಗಳೂರಿನ ಬಿಗ್‌ ಎಫ್ಎಂನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸಿದರು. ನಂತರ ನಾಟಕ ತಂಡ ಸೇರಿದ ರಾಜ್ ಕೆಲವೊಂದು ಸಾಕ್ಷ್ಯಚಿತ್ರಗಳನ್ನು ತಯಾರು ಮಾಡಿದರು. ರಾಜ್ ಒಂದು ಮೊಟ್ಟಯ ಕಥೆ ಎಂಬ ಕಿರುಚಿತ್ರವನ್ನು ನಿರ್ದೇಶಿಸುವ ಹಂತದಲ್ಲಿದ್ದಾಗ ಸುಹಾನ್ ಪ್ರಸಾದ್ ಎಂಬುವವರ ಸಲಹೆ ಮತ್ತು ಸಹಾಯದಿಂದ ಕಿರುಚಿತ್ರದ ಬದಲಾಗಿ ಒಂದು ಚಲನಚಿತ್ರವನ್ನು ಮಾಡೋಣ ಎಂಬ ನಿರ್ಧಾರಕ್ಕೆ ಬಂದರು. ಅಂದಿನಿಂದ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾದ ಇವರು, ಇಂದು ತಮ್ಮ ವಿಭಿನ್ನ ಕಥೆಗಳಿಂದ ಗುರುತಿಸಿಕೊಂಡಿದ್ದಾರೆ. ಇಲ್ಲಿ ರಾಜ್‌ ಬಿ ಶೆಟ್ಟಿ ನಟನೆಯ ಟಾಪ್ ಸಿನಿಮಾಗಳ ಪಟ್ಟಿಯನ್ನು ನೀಡಲಾಗಿದೆ.


cover image
ಒಂದು ಮೊಟ್ಟೆಯ ಕಥೆ

ರಾಜ್‌ ಬಿ ಶೆಟ್ಟಿ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ಒಂದು ಮೊಟ್ಟೆಯ ಕಥೆ. ಚಿತ್ರದಲ್ಲಿ ಮಂಗಳೂರಿನ ಬೋಳು ತಲೆಯ ಜನಾರ್ಧನ್ (ರಾಜ್.ಬಿ.ಶೆಟ್ಟಿ)ಗೆ ಸುಂದರ ಯುವತಿಯನ್ನ ಮದುವೆ ಆಗುವ ಆಸೆ. ಆದ್ರೆ, ತಲೆ ಮೇಲೆ ಕೂದಲು ಇಲ್ಲದ ಜನಾರ್ಧನ್ ಕಂಡ್ರೆ ಸುಂದರ ಹುಡುಗಿಯರು ಮಾರುದ್ದ ದೂರ. ಇನ್ನೊಂದು ವರ್ಷದಲ್ಲಿ ಜನಾರ್ಧನ್ ಮದುವೆ ಆಗಲಿಲ್ಲ ಅಂದ್ರೆ 'ಸನ್ಯಾಸಿ' ಯೋಗ ಇದೆ. ಮಗ ಸನ್ಯಾಸಿ ಆಗದೆ, ಸಂಸಾರಿ ಆಗಬೇಕು ಎಂಬುದು ತಂದೆ-ತಾಯಿಯ ಬಯಕೆ. ಹೀಗಿರುವಾಗ 'ಮೊಟ್ಟೆ' ಜನಾರ್ಧನ್ ಗೆ ಮದುವೆ ಆಗುತ್ತಾ.? 'ದೊಡ್ಡ' ಮನಸ್ಸು ಮಾಡಿ ಒಪ್ಪಿಕೊಳ್ಳುವ ಹುಡುಗಿ ಯಾರು.? ಎಂಬುದು ಉಳಿದ ಕಥೆ. ಒಂದು ಮೊಟ್ಟೆಯ ಕಥೆ ಮೂಲಕ ನಿರ್ದೇಶಕ ಮತ್ತು ನಾಯಕ ರಾಜ್ ಬಿ ಶೆಟ್ಟಿ ಸಾಮಾಜಿಕ ತಾರತಮ್ಯಗಳನ್ನು ಬಹಳ ತಮಾಷೆಯಾಗಿ ತೋರಿಸಿದ್ದರು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ ಎಂಬ ಸಂದೇಶವನ್ನು ನೀಡಿದ್ದ ಈ ಸಿನಿಮಾಗೆ ಪ್ರೇಕ್ಷಕರು ಬೆಂಬಲ ಸೂಚಿಸಿ, ಮೆಚ್ಚಿಕೊಂಡಿದ್ದರು. 

ಅಮ್ಮಚ್ಚಿಯೆಂಬ ನೆನಪು...

2018ರಲ್ಲಿ ತೆರೆಕಂಡ ಅಮ್ಮಚ್ಚಿಯೆಂಬ ನೆನಪು ಎಂಬ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ನಾಯಕನಾಗಿ ನಟಿಸಿದ್ದರು. ಚಿತ್ರದಲ್ಲಿ ಪುಟ್ಟಮ್ಮತ್ತೆ, ಅಕ್ಕು ಹಾಗು ಅಮ್ಮಚ್ಚಿ ಎನ್ನುವ ಮೂರು ಪ್ರಧಾನ ಪಾತ್ರಗಳು ಮೂರು ತಲೆಮಾರಿನ ಕಥೆಯನ್ನು ನಮಗೆ ಹೇಳುತ್ತವೆ. ಪಾತ್ರಗಳು ಮೂರಾದರೂ ಅವುಗಳ ಆತ್ಮದ ಕೂಗು ಒಂದೇ. ಸ್ತ್ರೀಲೋಕದ ದುಗುಡ ದುಮ್ಮಾನಗಳಿಗೆ ಧ್ವನಿಯಾಗುತ್ತಲೇ ಕುಂದಾಪುರ ಕನ್ನಡದ ಆಡುಭಾಷೆಯನ್ನು ಬಳಸಿಕೊಂಡು 'ಅಮ್ಮಚ್ಚಿಯೆಂಬ ನೆನಪು' ಅವರ ಮೂರು ಕಥೆಗಳನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿತ್ತು. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ 'ವೆಂಕಪ್ಪಯ್ಯನ' ಪಾತ್ರವನ್ನು ಅವರು ನಟಿಸಿದಂತೆ ಕಾಣಿಸದೆ ಅವರೇ ಆ ಪಾತ್ರವಾಗಿದ್ದರು. 

ಮಹಿರ

ಮಹೇಶ್ ಗೌಡ ನಿರ್ದೇಶಿಸಿರುವ ಕ್ರೈಮ್ ಥ್ರಿಲ್ಲರ್ 'ಮಹಿರ' ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ವರ್ಜಿನಿಯಾ ರೋಡ್ರಿಗಸ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಸಿನಿಮಾದಲ್ಲಿ ಮಾಯಾ (ವರ್ಜಿನಿಯಾ )ತನ್ನ ಮಗಳು ಆದ್ಯಳೊಂದಿಗೆ ಕರ್ನಾಟಕದ ಕರಾವಳಿ ತೀರದ ಒಂದು ಪಟ್ಟಣದಲ್ಲಿ ಬೀಚ್ ಕೆಫೆ ನಡೆಸುತ್ತಾ ಜೀವನ ಸಾಗಿಸುತ್ತಿರುತ್ತಾಳೆ. ಇವರ ಶಾಂತವಾದ ಜೀವನದಲ್ಲಿ ಒಮ್ಮೆಲೇ ಬಿರುಗಾಳಿ ಬೀಸುತ್ತದೆ. ಪೊಲೀಸ್ ಇಲಾಖೆ ಮತ್ತು ಕೆಲವು ನಟೋರಿಯಸ್ ಕ್ರಿಮಿನಲ್‌ಗಳು ಮಾಯಾಳ ಹಿಂದೆ ಬೀಳುತ್ತಾರೆ. ಮಾಯಾಳ ಹಿನ್ನಲೆ ಏನು ? ಏಕೆ ಪೊಲೀಸ್ ಇಲಾಖೆ ಅವಳ ಹಿಂದೆ ಬಿದ್ದಿದೆ ಎನ್ನುವುದು ಚಿತ್ರದ ಸಸ್ಪೆನ್ಸ್. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ undercover agent ಆಗಿ ನಟಿಸಿದ್ದರು. 

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ

ಬೆಲ್ ಬಾಟಮ್ ಸಗಣಿ ಪಿಂಟೋ ಖ್ಯಾತಿ ಸುಜಯ ಶಾಸ್ತ್ರೀ ನಿರ್ದೇಶಿಸಿರುವ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಾಜ್ ಶೆಟ್ಟಿ 'ವೆಂಕಟಕೃಷ್ಣ ಗುಬ್ಬಿ' ಪಾತ್ರದಲ್ಲಿ ಅಭಿನಯಿಸಿದ್ದರು. ಚಿತ್ರದಲ್ಲಿ ಮದುವೆಯಾಗಲು ತುದಿಗಾಲಲ್ಲಿ ನಿಂತಿರುವ ಸಾಫ್ಟವೇರ್ ಇಂಜಿನಿಯರ್ ವೆಂಕಟಕೃಷ್ಣನಿಗೆ ಎಲ್ಲರೂ ತನ್ನ ಕ್ರಿಶ್ ಎಂದು ಕರೆಯಬೇಕೆಂಬ ಆಸೆ. ಐಟಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿ, ನಿವೃತ್ತಿಯಾಗಿರುವ ಇವರ ತಂದೆ ಮಗನ ವರಾನ್ವೇಷ್ವಣೆಯಲ್ಲಿ ತೊಡುಗುತ್ತಾರೆ. ಊರರವರಿಗೆಲ್ಲಾ ಮದುವೆ ಫಿಕ್ಸಿಂಗ್ ಮಾಡುವ ತಂದೆಗೆ ಮಗನಿಗೆ ಒಂದು ಮ್ಯಾಚ್ ಹುಡುಕಲು ಪರದಾಡುತ್ತಾರೆ. ಔಟ್ ಆ್ಯಂಡ್ ಔಟ್ ಕಾಮಿಡಿಯಾಗಿರುವ ಈ ಚಿತ್ರದಲ್ಲಿ ಸುಜಯ್ ಶಾಸ್ತ್ರೀ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದರು. 

ಕಥಾ ಸಂಗಮ

ಕಥಾ ಸಂಗಮ ಸಿನಿಮಾದಲ್ಲಿ ರಿಷಭ್ ಶೆಟ್ಟಿ, ಹರಿಪ್ರಿಯಾ, ರಾಜ್ ಬಿ ಶೆಟ್ಟಿ, ಕಿಶೋರ್, ಯಜ್ಞಾ ಶೆಟ್ಟಿ ಮುಂತಾದವರು ನಟಿಸಿದ್ದರು. ಇದೊಂದು ಭಿನ್ನ-ಭಿನ್ನ ಕಥೆಗಳ ಕಥಾಸರಣಿಯಾಗಿದ್ದು, ಒದೊಂದು ಕಥೆಯಲ್ಲಿ ಬೇರೆ ಬೇರೆ ಪಾತ್ರವರ್ಗವಿತ್ತು. ಅಪ್ಪ, ಅಮ್ಮ, ಮಗಳು.. ಮಗಳಿಗಾಗಿ ಏನನ್ನು ಬೇಕಾದರೂ ಮಾಡುವ ಅಪ್ಪ. ಈ ಚಿಕ್ಕ ಕುಟುಂಬದ ಪ್ರೀತಿ ತುಂಬಿದ ಕಥೆಯೇ 'ರೈನ್ ಬೋ ಲ್ಯಾಂಡ್'. ಸತ್ಯ ಎನ್ನುವ ನಿವೃತ್ತಿಯ ಅಂಚಿನಲ್ಲಿ ಇರುವ ಉದ್ಯೋಗಿಯ ಮನಸಿನ ಕಥೆ 'ಸತ್ಯಕಥಾ ಪ್ರಸಂಗ'. ಜೋಡಿ ಹಕ್ಕಿಗಳ ಸರಸ ವಿರಸದ ಕಥೆ 'ಗಿರ್ ಗಿಟ್ಲೆ'. ಮಾಧ್ಯಮ, ಸೋಷಿಯಲ್ ಮೀಡಿಯಾದ ಸುತ್ತ ಸಾಗುವ ಕಥೆ 'ಉತ್ತರ'. ಕ್ರೌರ್ಯದ ಕಥೆ 'ಪಡುವಾರಹಳ್ಳಿ'. ಭಯ ತುಂಬಿದ ಕಥೆ 'ಸಾಗರ ಸಂಗಮ', ಹಳ್ಳಿಯಿಂದ ಬೆಂಗಳೂರಿಗೆ ಬರುವ ಮುಗ್ಧ ಹೆಂಗಸಿನ ಕಥೆ 'ಲಚ್ಚವ್ವ'. ಈ ರೀತಿಯ ಏಳು ಬೇರೆ ಬೇರೆ ಕಥೆಗಳು ಸಿನಿಮಾದಲ್ಲಿದ್ದವು. ಕಥಾ ಸಂಗಮ ಒಂದು ನಾರ್ಮಲ್ ಸಿನಿಮಾ ಅಲ್ಲ. ಡಿಫೆರೆಂಟ್ ಸಿನಿಮಾ ಇಷ್ಟ ಪಡುವವರು, ಬೇರೆ ಬೇರೆ ರೀತಿಯ ಸಿನಿಮಾ ಇಷ್ಟ ಪಡುವವರು ಈ ಚಿತ್ರವನ್ನ ಇಷ್ಟಪಡುತ್ತಾರೆ.

ಗರುಡ ಗಮನ ವೃಷಭ ವಾಹನ

ರಾಜ್‌ ಬಿ ಶೆಟ್ಟಿ ಯಾವಾಗಲೂ ವಿಭಿನ್ನ ಕಥೆ ಮತ್ತು ವಿಭಿನ್ನ ಶೈಲಿಯ ನಿರೂಪಣೆ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಮೊಟ್ಟೆಯ ಕಥೆ ಎಂಬ ಹಾಸ್ಯದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು, 'ಗರುಡ ಗಮನ ವೃಷಭ ವಾಹನ' ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿದ್ದರು. ಈ ಸಿನಿಮಾದಲ್ಲಿ ನಾಯಕಿ, ಲವ್, ಡ್ಯುಯೆಟ್ ಸಾಂಗ್ ಯಾವುದು ಇರಲಿಲ್ಲ. ಇದೊಂದು ಮಂಗಳೂರು ಹಿನ್ನಲೆಯಲ್ಲಿ ನೆಡೆಯುವ ಗ್ಯಾಂಗ್‌ಸ್ಟರ್ ಚಿತ್ರವಾಗಿದ್ದು, ಅರ್ಭಟಿಸುವ ರೆಬೆಲ್ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಮಿಂಚದ್ದರು. ಈ ಚಿತ್ರಕ್ಕೆ ಅವರೇ ನಿರ್ದೇಶನ ಮಾಡಿದ್ದರು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+