X
ಹೋಮ್ ಚಲನಚಿತ್ರಗಳ ಒಳನೋಟ

ಸಲಾರ್ ಸಿನಿಮಾದಲ್ಲಿ ಅಭಿನಯಿಸಿರುವ ಸ್ಯಾಂಡಲ್‌ವುಡ್‌ ನಟರ ಪಟ್ಟಿ ಇಲ್ಲಿದೆ.

Author Sowmya Bairappa | Updated: Tuesday, December 26, 2023, 10:11 AM [IST]

ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ 'ಸಲಾರ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿದೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನ ದೇವ-ವರದರಾಜ ಮನ್ನಾರ್ ದೋಸ್ತಿ, ಕುಸ್ತಿಯ ಕಥೆ ಅನಾವರಣವಾಗಿದೆ. ಚಿತ್ರದ ಇನ್ನೊಂದು ವಿಶೇಷವೆಂದರೆ ಕನ್ನಡ ಆರು ಮಂದಿ ನಟರು ಸಲಾರ್‌ನಲ್ಲಿ ಅಭಿನಯಿಸಿದ್ದಾರೆ. ಆ ನಟರು ಯಾರು? ಅವರ ಪಾತ್ರವೇನು ಎಂಬ ಮಾಹಿತಿ ಇಲ್ಲಿದೆ.


cover image
ದೇವರಾಜ್

ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ಕನ್ನಡ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿದೆ. ಸ್ಯಾಂಡಲ್‌ವುಡ್‌ನ ಡೈನಾಮಿಕ್ ಹೀರೋ ದೇವರಾಜ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಟ್ರೇಲರ್‌ನಲ್ಲಿ ರಾಜಮನ್ನಾರ್ ಅರಮನೆಯಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ತಲೆ ತಗ್ಗಿಸಿ ನಿಂತಿರುವುದನ್ನು ಒಂದು ಫ್ರೇಮ್‌ನಲ್ಲಿ ನೋಡಬಹುದು. 

 

ರವಿ ಭಟ್

ದೇವ ಹಾಗೂ ವರದರಾಜ ಮನ್ನಾರ್ ಎನ್ನುವ ಇಬ್ಬರು ಸ್ನೇಹಿತರ ಕತೆ 'ಸಲಾರ್'. ಬಹಳ ಆತ್ಮೀಯ ಸ್ನೇಹಿತರಾಗ ಇವರಿಬ್ಬರು ಆಜನ್ಮ ಶತ್ರುಗಳಾದರೆ ಏನಾಗುತ್ತದೆ? ಎನ್ನುವುದನ್ನು 2 ಸಿನಿಮಾಗಳಲ್ಲಿ ಪ್ರಶಾಂತ್ ನೀಲ್ ಕಟ್ಟಿಕೊಟ್ಟಿದ್ದಾರೆ. ಈ ರಾಜ ಮನ್ನಾರ್ ಜೊತೆಗಿರುವ ಸಹಚರನಾಗಿ ಕನ್ನಡದ ನಟ ರವಿಭಟ್ ನಟಿಸಿದ್ದಾರೆ.

ಪ್ರಮೋದ್ ಮಂಜು

ರತ್ನನ್ ಪ್ರಪಂಚ ಚಿತ್ರದ ದ್ವಿತೀಯಾರ್ಧದಲ್ಲಿ ಅಪ್ಪಟ ಉತ್ತರ ಕರ್ನಾಟಕದ ಹೈದ 'ಉಡಾಳ್ ಬಾಬು ರಾವ್' ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಪ್ರಮೋದ್ ಪಂಜು ಅವರು ಸಲಾರ್ ಸಿನಿಮಾದಲ್ಲಿ ವರದರಾಜ ಮನ್ನಾರ್(ಬಾಲ) ಸಹೋದರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಗರುಡ ರಾಮ್, ಮಧು ಗುರುಮೂರ್ತಿ  ಪಾತ್ರ

ಕೆಜಿಎಫ್ ಚಿತ್ರದ  ಗರುಡ ಪಾತ್ರದ ಮೂಲಕ ಖ್ಯಾತಿ ಪಡೆದಿರುವ ಗರುಡ ರಾಮ್ ಸದ್ಯ ಕನ್ನಡಕ್ಕಿಂತಲೂ ಬೇರೆ ಭಾಷೆಗಳಲ್ಲೇ ಖ್ಯಾತಿ ಗಳಿಸುತ್ತಿದ್ದಾರೆ. ಗರುಡ ರಾಮ್ ಹಾಗೂ ಮಧು ಗುರುಮೂರ್ತಿ ಅವರು ಸಲಾರ್‌ನಲ್ಲಿ ಖಡಕ್ ಪಾತ್ರಗಳಲ್ಲಿ ನಟಿಸಿದ್ದಾರೆ. ಭಜರಂಗಿ ಲೋಕಿ ಕೂಡ 'ಸಲಾರ್' ಚಿತ್ರದಲ್ಲಿ ನಟಿಸಿರೋದಾಗಿ ಸುದ್ದಿಯಾಗಿತ್ತು. ಆದರೆ, ಅವರು ಕಾಣಿಸಿಕೊಂಡಿಲ್ಲ. 

ಸೌರವ್ ಲೋಕೇಶ್

ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ ಚಿತ್ರದಲ್ಲಿ ಖಳನಟನ ಪಾತ್ರದಿಂದ ಗಮ ಸೆಳೆದ ಲೋಕಿ ಅವರು, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದರು. ಇವರು ಕೂಡ ಸಲಾರ್ ಸಿನಿಮಾದಲ್ಲಿ ನಟಿಸಿದ್ದು,  ಈ ಮೂಲಕ ಪ್ಯಾನ್‌ ಇಂಡಿಯಾ ನಟರಾಗಿದ್ದಾರೆ. 

 

ಅಶ್ವಿನ್ ಹಾಸನ್

ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಶ್ವಿನ್ ಹಾಸನ್, ಸಲಾರ್ ಸಿನಿಮಾದಲ್ಲಿ ಕಸ್ಟಮ್ಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. 

ಸಿನಿಮಾದ ಕಥೆ

ವರದರಾಜ ಮನ್ನಾರ್ (ಪೃಥ್ವಿರಾಜ್ ಸುಕುಮಾರನ್) ದೇವ(ಪ್ರಭಾಸ್)ಗೆ ಬಾಲ್ಯದ ಗೆಳೆಯ. ಕಾರಣಾಂತರಗಳಿಂದ ದೇವ ಖಾನ್ಸರ್ ಬಿಟ್ಟು ತಾಯಿ ಜೊತೆ ಅಸ್ಸಾಂನಲ್ಲಿ ನೆಲೆಸಿರುತ್ತಾನೆ. ತಾಯಿಗೆ ಕೊಟ್ಟ ಮಾತಿನಂತೆ ಆತ ಆಯುಧ ಹಿಡಿಯಲ್ಲ. ಯಾರ ಮೇಲೂ ಕೋಪಗೊಳ್ಳದೇ ತಪ್ಪು ಕಂಡಾಗ ಒಳಗೊಳಗೆ ಕುದಿಯುತ್ತಿರುತ್ತಾನೆ. ಹೀಗಿರುವಾಗ ಆದ್ಯ(ಶೃತಿಹಾಸನ್) ವಿದೇಶದಿಂದ ಕೊಲ್ಕತ್ತಾಗೆ ಬರ್ತಾಳೆ. ಆದ್ಯಗೆ ಪ್ರಾಣಹಾನಿ ಇದೆ ಎಂದು ಆಕೆ ತಂದೆ ತನ್ನ ಸಹಾಯಕನ ಮೂಲಕ ಅಸ್ಸಾಂನಲ್ಲಿರುವ ದೇವ ಬಳಿಗೆ ಕಳುಹಿಸುತ್ತಾನೆ. ಇಷ್ಟಕ್ಕೂ ಆದ್ಯ ಯಾರು? ಆಕೆಗೆ ಇರುವ ಕಂಟಕ ಏನು? ಆಕೆಯನ್ನು ದೇವ ಯಾಕೆ ರಕ್ಷಿಸುತ್ತಾನೆ? ಇದೆಲ್ಲದರ ನಡುವೆ ದೇವ ಹಾಗೂ ವರದ ನಡುವೆ ವೈಮನಸ್ಸು ಮೂಡಲು ಕಾರಣ ಏನು? ಕಥೆಯ ಕೇಂದ್ರಬಿಂದು ಖಾನ್ಸರ್‌ ಹಿನ್ನೆಲೆ ಏನು? ಎಂಬುದೇ ಸಿನಿಮಾದ ಕಥೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+