X
ಹೋಮ್ ಚಲನಚಿತ್ರಗಳ ಒಳನೋಟ

ಸೃಜನ್ ಲೋಕೇಶ್ ಟು ಅಕುಲ್ ಬಾಲಾಜಿ: ಸ್ಚಂತ ರೆಸ್ಟೋರೆಂಟ್ ಹೊಂದಿರುವ ಕನ್ನಡದ ನಟ-ನಟಿಯರಿವರು!

Author Sowmya Bairappa | Updated: Thursday, July 27, 2023, 05:35 PM [IST]

ಕನ್ನಡದ ಅನೇಕ ನಟ-ನಟಿಯರು ಬರೀ ನಟನೆಯಲ್ಲಷ್ಟೇ ತೊಡಗಿಕೊಳ್ಳದೇ, ಉದ್ಯಮವನ್ನು ನಡೆಸುತ್ತಿದ್ದಾರೆ. ತಮ್ಮ ತಮ್ಮ ಅಭಿರುಚಿಗೆ ತಕ್ಕಂತೆ ಅವರು ಉದ್ಯಮ ನಡೆಸುತ್ತಿದ್ದಾರೆ. ಈ ಪೈಕಿ ಕೆಲ ನಟರು ಹೋಟೆಲ್ ಉದ್ಯಮದತ್ತ ಮುಖ ಮಾಡಿದ್ದಾರೆ. ಇಲ್ಲಿ ಕನ್ನಡ ಯಾವೆಲ್ಲಾ ನಟ-ನಟಿಯರು ರೆಸ್ಟೋರೆಂಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಅವು ಎಲ್ಲಿವೆ ಎಂಬ ಮಾಹಿತಿ ಇಲ್ಲಿದೆ.


cover image
ಸೃಜನ್ ಲೋಕೇಶ್

ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸದ್ಯ ರಿಯಾಲಿಟಿ ಶೋಗಳು ಹಾಗೂ ಪ್ರೊಡಕ್ಷನ್ ಹೌಸ್‌ನಲ್ಲಿ ಸಕ್ರಿಯರಾಗಿದ್ದಾರೆ. ಸೃಜನ್ ಅವರಿಗೆ ಹೋಟೆಲ್ ಬ್ಯುಸಿನೆಸ್‌ನಲ್ಲಿ ಸಾಕಷ್ಟು ಆಸಕ್ತಿಯಿತ್ತು. ಹೀಗಾಗಿ ಇದೀಗ ಬೆಂಗಳೂರಿನಲ್ಲಿ ಎರಡು ರೆಸ್ಟೋರೆಂಟ್‌ಗಳನ್ನು ತೆರೆದಿದ್ದಾರೆ. ಬೆಳ್ಳಂದೂರಿನಲ್ಲಿ ಸೃಜನ್ ಒಡೆತನದ ಸೋಚಿ ಎಂಬ ರೆಸ್ಟೋರೆಂಟ್ ಇದೆ. ಇದಲ್ಲದೇ ಇತ್ತೀಚೆಗಷ್ಟೇ ಬನಶಂಕರಿಯಲ್ಲಿ 'ಕೋಕು ಕಿಚನ್' ಎಂಬ ಮತ್ತೊಂದು ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. 

 

ಶೈನ್ ಶೆಟ್ಟಿ

ನಟ ಹಾಗೂ ಬಿಗ್ ಬಾಸ್ ಸೀಸನ್ ೭ರ ವಿಜೇತ ಶೈನ್ ಶೆಟ್ಟಿ ಕೂಡ ರೆಸ್ಟೋರೆಂಟ್ ಹೊಂದಿದ್ದಾರೆ. ಇವರು ೨೦೧೯ರಲ್ಲಿ ಬನಶಂಕರಿ ೨ನೇ ಹಂತದಲ್ಲಿ ಸಣ್ಣದೊಂದು ಗಾಡಿಯಲ್ಲಿ 'ಗಲ್ಲಿ ಕಿಚನ್' ತೆರೆದಿದ್ದರು. ಇಲ್ಲಿನ ಆಹಾರಕ್ಕೆ ಜನರು ಫಿದಾ ಆಗಿದ್ದು, ಸಿಕ್ಕಾಪಟ್ಟೆ ಫೇಮಸ್ ಆಯಿತು. ಸದ್ಯ  ಶೈನ್ ಶೆಟ್ಟಿ ಮೂರು 'ಗಲ್ಲಿ ಕಿಚನ್' ಹೆಸರಿನ ರೆಸ್ಟೋರೆಂಟ್‌ಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 

 

ಕಿರಣ್ ರಾಜ್

ಕಿರಣ್ ರಾಜ್ ಕನ್ನಡ ಕಿರುತೆರೆ ಲೋಕದ ಯಶಸ್ವಿ ನಟ ಮಾತ್ರವಲ್ಲದೇ ಯಶಸ್ವಿ ಉದ್ಯಮಿ ಕೂಡ ಹೌದು. ಕಿರಣ್ ಒಂದು ಮಲ್ಟಿ ಕುಸಿನ್ ರೆಸ್ಟೋರೆಂಟ್ ಹಾಗೂ ತಮ್ಮದೇಯಾದ ಬಟ್ಟೆ ಬ್ರಾಂಡ್ ಅನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದರ ಜೊತೆಗೆ ಸದ್ಯ ಸಿನಿಮಾ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. 

ಅಕುಲ್ ಬಾಲಾಜಿ

ಅಕುಲ್ ಬಾಲಾಜಿ ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ಮತ್ತು ಚಿತ್ರನಟ. ಹಲವು ಯಶಸ್ವಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಇವರು, ಬಿಗ್‌ಬಾಸ್ ಕನ್ನಡ ಸೀಸನ್ 2ರ ವಿಜೇತರು ಕೂಡ ಹೌದು. ಸುಮಾರು 30 ಯಶಸ್ವಿ ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಕೂಡ ಉದ್ಯಮಿದಲ್ಲಿ ತೊಡಗಿಕೊಂಡಿದ್ದಾರೆ. ಅಕುಲ್ ದೊಡ್ಡಬಳ್ಳಾಪುರ ಬಳಿಯ ಲಘುಮೇನಹಳ್ಳಿಯಲ್ಲಿ ರೆಸಾರ್ಟ್‌ವೊಂದನ್ನು ಹೊಂದಿದ್ದಾರೆ. 

ಚೈತ್ರಾ ವಾಸುದೇವನ್

ನಟಿ-ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ತಮ್ಮದೇಯಾದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ಹೊಂದಿದ್ದಾರೆ. ಬಿಗ್‌ ಬಾಸ್‌ಗೂ ಎಂಟ್ರಿಕೊಟ್ಟಿದ್ದ ಈ ಚೆಲುವೆ ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ. ಚೈತ್ರಾ ವಾಸುದೇವನ್ ಅವರ ತಂದೆ ಹೋಟೆಲ್ ಉದ್ಯಮಿಯಾಗಿದ್ದು, ಇವರು ಕೂಡ ವೆಜ್‌ ರೆಸ್ಟೋರೆಂಟ್ ನಟಡೆಸಿಕೊಂಡು ಹೋಗುತ್ತಿದ್ದಾರೆ. 

 

ಚಂದನ್

ನಟ ಚಂದನ್ ಕೂಡ ಹೋಟೆಲ್ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದಷ್ಟೇ ಬೆಂಗಳೂರಿನ ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಮದುವೆಯಾದ ಬಳಿಕ ಕವಿತಾ ಹಾಗೂ ಚಂದನ್ ಸೇರಿ ಮೈಸೂರು ಹಾಗೂ ಬೆಂಗಳೂರು ರಸ್ತೆಯಲ್ಲಿ 'ಮಂಡಿಪೇಟೆ ಪಲಾವ್' ಎಂಬ ರೆಸ್ಟೋರೆಂಟ್ ಅನ್ನು ಆರಂಭಿಸಿದ್ದಾರೆ. 

 

ಶ್ರುತಿ ನಾಯ್ಡು

ಕನ್ನಡ ಕಿರುತೆರೆ ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಶ್ರುತಿ ನಾಯ್ಡು, ಬೆಳ್ಳೆತೆರೆಯಲ್ಲೂ ಮಿಂಚಿದ್ದಾರೆ. ಇದರ ಜೊತೆಗೆ ಉದ್ಯಮದಲ್ಲಿ ತೊಡಗಿಕೊಂಡಿರುವ ಶ್ರುತಿ ನಾಯ್ಡು, ಸಾಂಸ್ಕೃತಿಕ ನಗರಿ ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ವೊಂದನ್ನು ಹೊಂದಿದ್ದಾರೆ. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+