X
ಹೋಮ್ ಚಲನಚಿತ್ರಗಳ ಒಳನೋಟ

ವಿದೇಶದಲ್ಲಿ ಸಿಗುತ್ತಿದ್ದ ಲಕ್ಷಗಟ್ಟಲೇ ಸಂಬಳಕ್ಕೆ ಗುಡ್‌ಬೈ ಹೇಳಿ ಕನ್ನಡ ಕಿರುತೆರೆ ನಟರಿವರು!

Author Sowmya Bairappa | Published: Saturday, March 16, 2024, 02:04 PM [IST]

ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟಿಸಬೇಕೆಂಬುದು ಹಲವರ ಕನಸು. ಹೀಗಾಗಿ, ಆರಂಭದಲ್ಲಿ ಆ ಕನಸು ನನಸಾಗದಿದ್ದರೂ ಸ್ವಲ್ಪ ಸಮಯ ತೆಗೆದುಕೊಂಡು ನಟನೆಗೆ ಎಂಟ್ರಿಕೊಡುತ್ತಾರೆ. ಕನ್ನಡ ಕಿರುತೆರೆ ಕೆಲ ನಟರು ವಿದೇಶದಲ್ಲಿ ಲಕ್ಷ-ಲಕ್ಷ ಸಂಬಳ ಪಡೆಯುತ್ತಿದ್ದರೂ ನಟನೆ ಮೇಲಿನ ಒಲವಿನಿಂದ ಆ ಕೆಲಸ ಬಿಟ್ಟು ಭಾರತದಲ್ಲಿಯೇ ನೆಲಸಿದ್ದಾರೆ. ಇಲ್ಲಿ ವಿದೇಶದಲ್ಲಿ ಪಡೆಯುತ್ತಿದ್ದ ಲಕ್ಷಗಟ್ಟಲೇ ಸಂಬಳಕ್ಕೆ ಗುಡ್‌ಬೈ ಹೇಳಿ ಬಂದ ಕನ್ನಡ ಕಿರುತೆರೆ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಚಂದನ್ ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ಸುಶಾಂತ್ ಪಾತ್ರದ ಗಮನ ಸೆಳೆಯುತ್ತಿರುವ ಚಂದನ್ ಗೌಡ ಕಿರುತೆರೆ ಕಾಲಿಡುವ ಮುನ್ನ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ಅಮೆರಿಕಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದನ್, ಲಕ್ಷ-ಲಕ್ಷ ಸಂಬಳ ಪಡೆಯುತ್ತಿದ್ದರು. ಕೊರೊನಾ ಬಳಿಕ ಭಾರತಕ್ಕೆ ಮರಳಿದ ಅವರು, ರಾಜಾ-ರಾಣಿ ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದಾದ ಬಳಿಕ ಪತ್ನಿಯ ಪ್ರೇರಣೆಯಿಂದ ನಾಯಕನಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. 

 

ಸುದರ್ಶನ್ ರಂಗಪ್ರಸಾದ್

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ತಾಂಡವ್ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ಸುದರ್ಶನ್ ರಂಗಪ್ರಸಾದ್ ಫಾರಿನ್‌ನಲ್ಲಿ ಎಂಬಿಎ ಮಾಡಿದ್ದರು. ಆದರೆ, ಅವರಿಗೆ ನಟನೆಗೆ ಬಗ್ಗೆ ಹೆಚ್ಚು ಒಲವಿತ್ತು. ಹೀಗಾಗಿ ರಂಗಭೂಮಿಯಲ್ಲಿ ತೊಡಗಿಕೊಂಡರು. ಆದರೆ, ಅವರಿಗೆ ರಂಗಭೂಮಿ ಅಂದುಕೊಂಡಷ್ಟು ಯಶಸ್ಸು ಕೊಡಲಿಲ್ಲ. ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಅದೂ ಕೂಡ ವರ್ಕ್ ಆಗಲಿಲ್ಲ. ಮುಂದೆ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಾ ಇನ್ನೇನು ಸೆಟಲ್ ಆದರೂ ಅನ್ನುವಷ್ಟರಲ್ಲಿ ಕಾಂಟ್ರವರ್ಸಿಯಾಯ್ತು. ಹೀಗೆ ಮಾಡಿದ ಕೆಲಸಗಳೆಲ್ಲವೂ ಯಶಸ್ಸು ಪಡೆಯದಿದ್ದಾಗ ಅಮೆರಿಕಾಗೆ ತೆರಳಿ ಕೆಲಸ ಮಾಡಲು ಆರಂಭಿಸಿದರು. ಇಲ್ಲಿ ಅವರಿಗೆ ಲಕ್ಷಗಟ್ಟಲೇ ಸಂಬಳ ಬರುತ್ತಿತ್ತು. ಆದರೆ, ಹಾಲಿಡೇಗಾಗಿ ಊರಿಗೆ ಬಂದಾಗ ಕೊರೊನಾ ಲಾಕ್‌ಡೌನ್ ಆಯಿತು. ಆಗ ಸಮಸ್ಯೆ ಆರಂಭವಾಯಿತು. ಈ ವೇಳೆ  ಭಾಗ್ಯಲಕ್ಷ್ಮೀ ಸೀರಿಯಲ್‌ಗೆ ಆಡಿಷನ್ ಕೊಟ್ಟ ಸುದರ್ಶನ್, ಧಾರಾವಾಹಿಗೆ ಸೆಲೆಕ್ಟ್ ಆದರು.

ಗಗನ್ ಚಿನ್ನಪ್ಪ

ಸೀತಾರಾಮ್ ಧಾರಾವಾಹಿಯಲ್ಲಿ 'ರಾಮ್' ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ಗಗನ್ ಚಿನ್ನಪ್ಪ, ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಹೆಡ್ ಆಗಿ ಮೂರು ವರ್ಷ ಜರ್ಮನಿ ಮತ್ತು ಓಮನ್‌ನಲ್ಲಿ ಕೆಲಸ ಮಾಡಿದ್ದರು. ಮುಂದೆ ಭಾರತಕ್ಕೆ ಮರಳಿದ ಗಗನ್, ಐಟಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು. ಬಾಲ್ಯದಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಕಂಡಿದ್ದ ಇವರು, ತಮ್ಮ ಅಫೀಸ್ ಕೆಲಸದ ನಡುವೆ ಬಿಡುವು ಸಿಕ್ಕಾಗ ಆಡಿಶಶ್‌ಗಳಿಗೆ ಹೋಗುತ್ತಿದ್ದರು. 'ಮಂಗಳಗೌರಿ ಮದುವೆ' ಧಾರಾವಾಹಿಯ ಆಡಿಶನ್‌ಗೆ ಹೋದ ಗಗನ್ ಚಿನ್ನಪ್ಪ ಆಯ್ಕೆಯೂ ಆದರು. 

ದಿಲೀಪ್ ಶೆಟ್ಟಿ

ಕನ್ನಡ ಕಿರುತೆರೆಯ ಬುರ್ಜ್ ಖಲೀಫಾ ಅಂತಲೇ ಖ್ಯಾತಿ ಪಡೆದಿರುವ ದಿಲೀಪ್ ಶೆಟ್ಟಿ, ಸದ್ಯ ನೀನಾದೆ ನಾ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ದಿಲೀಪ್, ಕಾಮರ್ಸ್‌ನಲ್ಲಿ ಸ್ನಾತಕೋತ್ತರ ಮುಗಿಸಿ ದುಬೈನಲ್ಲಿ ಕೆಲಸ ಗಿಟ್ಟಿಸಿಕೊಂಡು ಅಲ್ಲಿಗೆ ಶಿಫ್ಟ್ ಆದರು. ಕೆಲ ವರ್ಷಗಳ ಕಾಲ ಅಲ್ಲೇ ನೆಲಸಿದ್ದ ಅವರು, ಅನೇಕ ಫ್ಯಾಚನ್‌ ಶೋಗಳಲ್ಲಿ ಭಾಗವಹಿಸಿ, ಮಿಸ್ಟರ್ ದುಬೈ ಪಟ್ಟ ಪಡೆದರು. ಕರ್ನಾಟಕ್ಕೆ ಬಂದು ಏನಾದ್ರೂ ಸಾಧನೆ ಮಾಡಬೇಕೆಂಬುದು ಅವರ ಆಸೆಯಾಗಿತ್ತು. ಹೀಗಾಗಿ ದುಬೈನ ಕೆಲಸ ಬಿಟ್ಟು ಬಂದು ವಿದ್ಯಾ ವಿನಾಯಕ ಧಾರಾವಾಹಿಗೆ ಸೆಲೆಕ್ಟ್ ಆದರು. 

ಚರಿತ್ ಬಾಳಪ್ಪ

ಮುದ್ದುಲಕ್ಷ್ನೀ ಧಾರಾವಾಹಿ ಖ್ಯಾತಿಯ ನಟ ಚರಿತ್ ಬಾಳಪ್ಪ ಕಿರುತೆರೆ ಬರುವ ಮುನ್ನ ಪೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಚರಿತ್ ಅವರಿಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಬಹಳಷ್ಟು ಆಸಕ್ತಿ ಇತ್ತು. ಅವರ ಮನೆಯಲ್ಲಿ ಯಾರೂ ನಟನಾ ಹಿನ್ನೆಲೆಯಿಂದ ಬಂದವರಲ್ಲ. ಡ್ಯಾನ್ಸ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಗ ಸ್ಟೇಜ್‌ನಲ್ಲಿ ಪರ್ಫಾರ್ಮ್ ಮಾಡುವುದು ನಟಿಸುವುದು ಇವೆಲ್ಲ ಚರಿತ್ ಅವರ ನೆಚ್ಚಿನ ಆಸಕ್ತಿಕರ ವಿಚಾರಗಳಾಗಿತ್ತು. ಆದರೆ, ಮಧ್ಯಮ ವರ್ಗದ ಕುಟುಂಬದವನಾದ ಚರಿತ್ ನಟನೆಯನ್ನೇ ವೃತ್ತಿಯಾಗಿ ಮೆಚ್ಚಿಕೊಳ್ಳುವುದು ಅವರ ತಂದೆ ತಾಯಿಗೆ ಅಷ್ಟು ಇಷ್ಟವಿರಲಿಲ್ಲ. ಹಾಗಾಗಿ ಕೆಲಸವನ್ನು ಹುಡುಕಿಕೊಂಡು ಅದರ ಜೊತೆಜೊತೆಗೆ ನಟನೆಯನ್ನು ಮಾಡುತ್ತಿದ್ದರು. ನಂತರ ನಟನೆ ಮೇಲಿನ ಒಲವಿನಿಂದ ಲಕ್ಷ-ಲಕ್ಷ ಸಂಬಳ ಬರುತ್ತಿದ್ದ ಕೆಲಸವನ್ನು ತೊರೆದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+