X
ಹೋಮ್ ಚಲನಚಿತ್ರಗಳ ಒಳನೋಟ

ರಾಜಮೌಳಿ ಸಿನಿಮಾದಲ್ಲಿ ಗೆಲುವು ಕಂಡು ಆಮೇಲೆ ಸಾಲು-ಸಾಲು ಸೋಲು ಕಂಡ ಹೀರೋಗಳಿವರು!

Author Sowmya Bairappa | Updated: Friday, November 15, 2024, 09:58 AM [IST]

ಎಸ್ ಎಸ್ ರಾಜಮೌಳಿ ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರಲ್ಲಿ ಒಬ್ಬರು. ಬಾಹುಬಲಿ ಸರಣಿಗಳ ಮೂಲಕ ದೇಶ-ವಿದೇಶದಲ್ಲೂ ಭಾರತೀಯ ಸಿನಿಮಾಗಳು ಸದ್ದು ಮಾಡುವಂತೆ ಮಾಡಿದವರು ರಾಜಮೌಳಿ. ಇವರ ನಿರ್ದೇಶನದಲ್ಲಿ ಮೂಡಿಬರುವ ಚಿತ್ರದಲ್ಲಿ ನಟಿಸಲು ಅನೇಕ ನಟ-ನಟಿಯರು ಹಾತೊರೆಯುತ್ತಾರೆ. ಟಾಲಿವುಡ್‌ನ ಬಹುತೇಕ ಹೀರೋಗಳಿಗೆ ಹಿಟ್ ಸಿನಿಮಾ ನೀಡಿದ ಖ್ಯಾತಿ ರಾಜಮೌಳಿ ಅವರಿಗೆ ಸಲ್ಲುತ್ತದೆ. ಆದರೆ, ಇವರ ಸಿನಿಮಾಗಳಲ್ಲಿ ನಟಿಸಿ, ಸೂಪರ್ ಸಕ್ಸಸ್ ಕಂಡಿದ್ದ ಹಲವು ನಟರು ಬೇರೆ ಸಿನಿಮಾಗಳಲ್ಲಿ ಸೋಲು ಕಂಡಿದ್ದಾರೆ. ಇದು ವಿಚಿತ್ರವಾಗಿದ್ದರೂ ಈವರೆಗಿನ ರೆಕಾರ್ಡ್ ಗಮನಿಸಿದರೆ ಅದು ಸತ್ಯ ಅನಿಸುತ್ತದೆ. ರಾಜಮೌಳಿ ಸಿನಿಮಾದಲ್ಲಿ ಗೆಲುವು ಕಂಡು ಆಮೇಲೆ ಸಾಲು-ಸಾಲು ಸೋಲು ಕಂಡ ಹೀರೋಗಳ ಪಟ್ಟಿ ಇಲ್ಲಿದೆ.


cover image
ಜೂನಿಯರ್ ಎನ್.ಟಿ.ಆರ್

2024ರ ಸೆಪ್ಟಂಬರ್ 27ರಂದು ಬಿಡುಗಡೆಯಾಗಿದ್ದ ಜ್ಯೂನಿಯರ್ ಎನ್‌ಟಿಆರ್ ನಟನೆಯ 'ದೇವರ' ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೊರಟಾಲ ಶಿವ  ನಿರ್ದೇಶನದ ಈ ಚಿತ್ರವನ್ನು ಕೆಲವರು ಮೆಚ್ಚಿಕೊಂಡಿದ್ದರೂ, ಇನ್ನೂ ಹಲವರು ಇಷ್ಟಪಟ್ಟಿರಲಿಲ್ಲ. ಜ್ಯೂನಿಯರ್ ಎನ್‌ಟಿಆರ್ ಈ ಸಿನಿಮಾಗೂ ಮುನ್ನ ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬ್ಲಾಕ್‌ಬಾಸ್ಟರ್ ಆಗುವುದರ ಜೊತೆಗೆ, ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅಂದ್ಹಾಗೆ ಜ್ಯೂನಿಯರ್ ಎನ್‌ಟಿಆರ್‌ಗೆ ಇದು ಮೊದಲ ಅನುಭವಲ್ಲ. ಮೊದಲ ಚಿತ್ರ ಸ್ಟೂಡೆಂಟ್ ನಂಬರ್ ೧ ಸೂಪರ್ ಹಿಟ್ ಆಗಿತ್ತು. ಈ ಚಿತ್ರದ ಡೈರೆಕ್ಟರ್ ರಾಜಮೌಳಿ. ಬಳಿಕ ನಟಿಸಿದ ಸುಬ್ಬು ಫ್ಲಾಪ್ ಆಗಿತ್ತು. ನಂತರ ಬಂದ ರಾಜಮೌಳಿ ನಿರ್ದೇಶನದ 'ಸಿಂಹಾದ್ರಿ' ಹಿಟ್ ಆದರೆ, ನಂತರ ಬಂದ ಆಂಧ್ರವಾಲ ಡಿಸಾಸ್ಟರ್ ಆಗಿತ್ತು.

ಪ್ರಭಾಸ್

ರಾಜಮೌಳಿ ಅವರು ಮೊದಲ ಬಾರಿಗೆ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳಿದ್ದು 'ಛತ್ರಪತಿ' ಸಿನಿಮಾದಲ್ಲಿ. 2005ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಬ್ಲ್ಯಾಕ್‌ಬಸ್ಟರ್‌ ಆಗಿತ್ತು. ಆದರೆ, ಪ್ರಭಾಸ್ ಮುಂದಿನ ಸಿನಿಮಾ 'ಪೌರ್ಣಮಿ' ಬಹಳ ದೊಡ್ಡಮಟ್ಟದಲ್ಲಿ ಸೋಲು ಕಂಡಿತ್ತು. ಅದಾದ ಬಳಿಕ ರಾಜಮೌಳಿ ಹಾಗೂ ಪ್ರಭಾಸ್ ಜೋಡಿ ಮತ್ತೆ ಒಂದಾಗಿದ್ದು 'ಬಾಹುಬಲಿ' ಸೀರೀಸ್‌ ಚಿತ್ರಗಳಿಗೆ. ಈ ಎರಡು ಸರಣಿಗಳು ದೇಶಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಬಾಹುಬಲಿ ಸೀರೀಸ್‌ಗಳ ಮೂಲಕ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಇದರ ನಂತರ ತೆರೆಕಂಡ ಸಾಹೋ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಯಿತು. ನಂತರದ ಬಂದ ರಾಧೇ ಶ್ಯಾಮ್ ಹಾಗೂ ಆದಿಪುರಷ್ ಕೂಡ ಬಾಕ್ಸಾಪೀಸ್‌ನಲ್ಲಿ ಸೋತವು.

 ನಿತಿನ್

ಟಾಲಿವುಡ್ ನಟ ನಿತಿನ್ ಅಭಿನಯದ 'ಸೈ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾವನ್ನು ಎಸ್ ಎಸ್ ರಾಜಮೌಳಿ ನಿರ್ದೇಶನ ಮಾಡಿದ್ದರು. ಆದರೆ, ಈ ಸಿನಿಮಾದ ಬಳಿಕ ಬಂದ ರಾಘವೇಂದ್ರ ರಾವ್ ನಿರ್ದೇಶನದ 'ಅಲ್ಲಾರಿ ಬುಲ್ಲೋಡು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಮತ್ತೆ ರಾಜಮೌಳಿ ಸಿನಿಮಾದಲ್ಲಿ ನಿತಿನ್ ಕಾಣಿಸಿಕೊಂಡಿಲ್ಲ.

ರಾಮಚರಣ್ ತೇಜಾ

ನಟ ರಾಮ್‌ಚರಣ್ ಹಾಗೂ ರಾಜಮೌಳಿ ಮೊದಲ ಬಾರಿಗೆ ಒಂದಾಗಿದ್ದು 'ಮಗಧೀರ' ಸಿನಿಮಾ ಮೂಲಕ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೂಪರ್ ಸಕ್ಸಸ್ ಕಂಡಿತ್ತು. ನಂತರ ಬಂದ  'ಆರೆಂಜ್' ಸೋಲು ಕಂಡಿತ್ತು. ಮುಂದೆ ರಾಜಮೌಳಿಯವರ 'ಆರ್‌ಆರ್‌ಆರ್' ಚಿತ್ರದಲ್ಲಿ ನಟಿಸಿ ಗೆಲುವು ಕಂಡರು. ಇದು ವಿಶ್ವಾದ್ಯಂತ ಖ್ಯಾತಿ ಪಡೆದ ಸಿನಿಮಾ. ಆರ್‌ಆರ್‌ಆರ್ ಬಳಿಕ ಬಂದ ರಾಮ್‌ಚರಣ್ & ಚಿರಂಜೀವಿ ನಟನೆಯ 'ಆಚಾರ್ಯ' ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆಯಿತ್ತು. ಆದರೆ, ಆಚಾರ್ಯ ಚಿತ್ರ ದೊಡ್ಡ ಮಟ್ಟದಲ್ಲಿ ಸೋಲು ಕಂಡಿತ್ತು.


ಮಹೇಶ್‌ಬಾಬುಗೆ ರಾಜಮೌಳಿ ಆಕ್ಷನ್ ಕಟ್

ಸದ್ಯ ಎಸ್ ಎಸ್‌ ರಾಜಮೌಳಿ ಅವರು ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಸಾಕಷ್ಟು ನಿರೀಕ್ಷೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+