X
ಹೋಮ್ ಚಲನಚಿತ್ರಗಳ ಒಳನೋಟ

ರುಕ್ಮಿಣಿ ವಸಂತ್ ಟು ಆರಾಧನಾ: 2023ರಲ್ಲಿ ಸಿನಿರಸಿಕರ ಮನಗೆದ್ದ ಸ್ಯಾಂಡಲ್‌ವುಡ್ ನಟಿಯರು ಇವರೇ!

Author Sowmya Bairappa | Updated: Thursday, January 4, 2024, 05:27 PM [IST]

2023ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 200ಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಕಂಡಿದ್ದವು. ಈ ಪೈಕಿ ಕೆಲ ಸಿನಿಮಾಗಳ ನಟಿಮಣಿಯರು ಹೆಚ್ಚು ಗಮನ ಸೆಳೆದಿದ್ದರು. ತಮ್ಮ ಅದ್ಭುತ ನಟನೆ ಮೂಲಕ ಕನ್ನಡಿಗರ ಮನಗೆದ್ದಿದ್ದರು. ವಿಶೇಷವೆಂದರೆ ಅವರೆಲ್ಲರೂ ಕನ್ನಡತಿಯರೇ. ಆ ನಟಿಮಣಿಯರು ಯಾರು ಎಂಬ ಮಾಹಿತಿ ಇಲ್ಲಿದೆ.


cover image
ರುಕ್ಮಿಣಿ ವಸಂತ್

2019ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಜಿ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ರುಕ್ಮಿಣಿ ವಸಂತ್, ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಈ ನಟಿಯ ಸಿಂಪಲ್‌ ಲುಕ್, ಮಾತು, ನಗು ಹಾಗೂ ಸಹಜ ಅಭಿನಯಕ್ಕೆ ಕನ್ನಡ ಸಿನಿರಸಿಕರು ಫುಲ್ ಫಿದಾ ಆಗಿದ್ದರು. ಇವರ ಸಹಜ ಅಭಿನಯನಕ್ಕೆ ಎಲ್ಲರು ಫಿದಾ ಆಗಿದ್ದು, ಮುಂದಿನ ದಿನಗಳಲ್ಲಿ ಈ ನಟಿ ಚಂದನವನದ ಸ್ಟಾರ್ ನಟಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. 

ಚೈತ್ರ ಆಚಾರ್

ಕನ್ನಡದ ಆಲಿಯಾ ಭಟ್ ಅಂತಲೇ ಖ್ಯಾತಿ ಗಳಿಸಿರುವ ಚೈತ್ರಾ ಆಚಾರ್‌, ಟೋಬಿ ಸಿನಿಮಾದಲ್ಲಿ 'ಜೆನ್ನಿ' ಪಾತ್ರದ ಮೂಲಕ ಸಾಕಷ್ಟು ಮೆಚ್ಚುಗೆ ಗಳಿಸಿದ್ದರು. ಚಿತ್ರದಲ್ಲಿ ಉತ್ತರ ಕನ್ನಡ ಭಾಗದ ಟಿಪಿಕಲ್ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಈ ನಟಿ, ರಾಜ್‌ ಬಿ ಶೆಟ್ಟಿ ಮಗಳಾಗಿ ಪಾತ್ರದಲ್ಲಿ ಜೀವಿಸಿದ್ದರು. ಟೋಬಿಯಲ್ಲಿ ಅವರದ್ದು ಸಿನಿಮಾದಾಚೆಗೂ ಕಾಡುವಂತಹ ಪಾತ್ರವಾಗಿತ್ತು. 

ಸಿಂಧು ಶ್ರೀನಿವಾಸ್ ಮೂರ್ತಿ

ನಟಿ ಮತ್ತು ನಿರ್ದೇಶಕಿ ಸಿಂಧೂ ಶ್ರೀನಿವಾಸ್ ಮೂರ್ತಿ 'ಆಚಾರ್ & ಕೋ' ಸಿನಿಮಾ ಮೂಲಕ ಸಿನಿಪ್ರಿಯರ ಮನಸ್ಸು ಗೆದ್ದಿದ್ದರು. ಇಂದಿನ ಕಾಲದ ಕಮರ್ಶಿಯಲ್ ಸಿನಿಮಾಗಳನ್ನು ಮಾಡುವುದು ಅಷ್ಟೇನು ಕಷ್ಟದ ಕೆಲಸವಲ್ಲ. ಆದರೆ, 60ರ ದಶಕದ ಕಥೆಯನ್ನು ತೆರೆಮೇಲೆ ತರುವುದು ನಿಜಕ್ಕೂ ಸಹ ಚಾಲೆಂಜಿಂಗ್. ರೆಟ್ರೋ ಸ್ಟೈಲ್ ಸಿನಿಮಾ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ನಿರ್ದೇಶಕಿ ಸಿಂಧು ಶ್ರೀನಿವಾಸ್ ಮೊದಲ ಬಾರಿಗೆ ಇಂತಹ ಪ್ರಯತ್ನ ಮಾಡಿ, ಅದರಲ್ಲಿ ಸೂಪರ್ ಸಕ್ಸಸ್ ಕಂಡಿದ್ದರು. ಈ ಸಿನಿಮಾ ನಿರ್ದೇಶಿಸಿ, ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.    

ಬೃಂದಾ ಆಚಾರ್ಯ

2021ರಲ್ಲಿ ತೆರೆಕಂಡ ಪ್ರೇಮಂ ಪೂಜ್ಯಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಬೃಂದಾ ಆಚಾರ್ಯ, ಸದ್ಯ ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾ ಸುಪ್ರಜಾ ರಾಮ ಸಿನಿಮಾದಲ್ಲಿನ ನಟನೆ ಮೂಲಕ ಪ್ರೇಕ್ಷಕರ ಮನಸ್ಸು ಕದ್ದಿದ್ದಾರೆ. ಕೌಟುಂಬಿಕ ಕಥೆ ಹೊಂದಿದ್ದ ಈ ಸಿನಿಮಾದಲ್ಲಿ ಬೃಂದಾ 'ಶಿವಾನಿ' ಪಾತ್ರದ ಮೂಲಕ ಗಮನ ಸೆಳೆದಿದ್ದರು. 

ಅಮೃತಾ ಪ್ರೇಮ್

'ಟಗರು' ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್​ವುಡ್‌ಗೆ ಪದಾರ್ಪಣೆ ಮಾಡಿದ ನಟ ಲವ್ಲಿ ಸ್ಟಾರ್ ಪ್ರೇಮ್ ಪುತ್ರಿ ಅಮೃತಾ, ಮೊದಲ ಸಿನಿಮಾದಲ್ಲೇ ಪ್ರೇಕ್ಷಕರು ಮನಗೆದ್ದಿದ್ದರು. ಅಮೃತಾಗೆ ಇದು ಮೊದಲ ಸಿನಿಮಾ ಅಂತ ಅನಿಸಿರಲಿಲ್ಲ, ಸಿಕ್ಕ ಅವಕಾಶವನ್ನು ತುಂಬಾನೇ ನೀಟ್ ಆಗಿ ಬಳಸಿಕೊಂಡಿದ್ದರು. ಸಿನಿಮಾದಲ್ಲಿ ನಾಗಭೂಷಣ ಹಾಗೂ ಅಮೃತಾ ಪ್ರೇಮ್ ಕಾಂಬಿನೇಷನ್ ನೋಡುವುದಕ್ಕೇನೆ ಚಂದವಾಗಿತ್ತು. 

 

ಆರಾಧನಾ ಆರ್

ಕನ್ನಡದ ಖ್ಯಾತ ನಿರ್ಮಾಪಕ ರಾಮು ಮತ್ತು ಕನಸಿನ ರಾಣಿ ಮಾಲಾಶ್ರೀ ಪುತ್ರಿಯಾದ ಆರಾಧನಾ ರಾಮ್ ಚಾಲೆಂಜಿಂಗ್ ಸ್ಡಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದರು. ಚಿತ್ರದಲ್ಲಿ ನಾಯಕಿ ಪ್ರಭಾವತಿಯಾಗಿ ತಮ್ಮ ನಟನೆ ಮೂಲಕ ಹಮನ ಸೆಳೆದಿದ್ದಾರೆ. ಚಿತ್ರದಲ್ಲಿ ಅವರು ಎಲ್ಲೂ ಹೊಸ ನಟಿ ಅನಿಸೋದೇ ಇಲ್ಲ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದದದು, ಆ ಪಾತ್ರಕ್ಕೆ ಅವರ ತಯಾರಿ ಗೊತ್ತಾಗುತ್ತದೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+