X
ಹೋಮ್ ಚಲನಚಿತ್ರಗಳ ಒಳನೋಟ

ಸ್ಯಾಂಡಲ್‌ವುಡ್‌ನ ಈ ನಿರ್ದೇಶಕರ ಕಂಬ್ಯಾಕ್‌ಗಾಗಿ ಸಿನಿಪ್ರೇಕ್ಷಕರು ಕಾಯ್ತಿದ್ದಾರೆ!

Author Sowmya Bairappa | Updated: Friday, March 28, 2025, 06:12 AM [IST]

ಒಂದು ಸಿನಿಮಾ ಸಕ್ಸಸ್‌ಗೆ ನಿರ್ದೇಶಕನ ಪಾತ್ರ ಬಹಳ ದೊಡ್ಡದಿರುತ್ತದೆ. ಓರ್ವ ಕ್ರಿಯಾಶೀಲ ನಿರ್ದೇಶಕ ಸೃಷ್ಟಿಸುವ ಕೆಲ ಪಾತ್ರಗಳು ಜನರು ಸಿಕ್ಕಾಪಟ್ಟೆ ಇಷ್ಟಪಡುವಂತೆ ಮಾಡುತ್ತವೆ. ಈ ಪಾತ್ರಗಳು ನಟ-ನಟಿಯರ ಸಿನಿ ಕರಿಯರ್‌ಗೂ ಬ್ರೇಕ್ ನೀಡುತ್ತವೆ. ಒಂದು ಕಾಲದಲ್ಲಿ ಚಂದನವನಕ್ಕೆ ದೊಡ್ಡ ಹಿಟ್ ಕೊಟ್ಟ ನಿರ್ದೇಶಕರ ಸಿನಿಮಾಗಳು ಇತ್ತೀಚೆಗೆ ಸೋಲುತ್ತಿವೆ. ಅಂದು ಸದಾ ವಿಭಿನ್ನತೆ, ಹೊಸತನದಿಂದ ಕೂಡಿರುತ್ತಿದ್ದ ಇವರ ಸಿನಿಮಾವನ್ನು ಜನರು ತುಂಬಾ ಇಷ್ಟಪಡುತ್ತಿದ್ದರು. ಆದ್ರೀಗ, ಇವರು ಚಿತ್ರಗಳು ಸೋಲಲು ಕಾರಣ ಏನೆಂಬುದು ಯಾರಿಗೂ ತಿಳಿದಿಲ್ಲ. ಇಲ್ಲಿ ಸ್ಯಾಂಡಲ್‌ವುಡ್‌ನ ಯಾವೆಲ್ಲಾ ನಿರ್ದೇಶಕರ ಕಂಬ್ಯಾಕ್‌ಗಾಗಿ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ ಎಂಬ ಮಾಹಿತಿಯನ್ನು ನೀಡಲಾಗಿದೆ.


cover image
ಯೋಗರಾಜ್ ಭಟ್
1

ಕನ್ನಡ ಚಿತ್ರರಂಗದ ವಿಕಟಕವಿ ಯೋಗರಾಜ್‌ ಭಟ್ ಸಿನಿಮಾಗಳು ಅವರದ್ದೇ ಆದ ಒಂದು ಶೈಲಿಯಲ್ಲಿರುತ್ತವೆ. ಇವರಿಗೆ ಗೆಲವು ತಂದುಕೊಟ್ಟಿದ್ದು ಮುಂಗಾರುಮಳೆ. ಈ ಸಿನಿಮಾ ಇಡೀ ಸಿನಿಮಾತಂಡ ಲೈಫ್ ಚೇಂಜ್ ಮಾಡಿದೆ ಅಂದರೆ ತಪ್ಪಾಗಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿದ್ದ ಚಿತ್ರ ಮುಂಗಾರುಮಳೆ. ಇದಾದ ಬಳಿಕ ಬಂದ ಗಾಳಿಪಟ, ಮನಸಾರೆ, ಪಂಚರಂಗಿ, ಡ್ರಾಮಾ, ಪರಮಾತ್ಮವರೆಗೂ ಎಲ್ಲಾ ಚಿತ್ರಗಳು ಪ್ರೇಕ್ಷಕರ ಮನಗೆದ್ದವು. ಈ ಎಲ್ಲಾ ಚಿತ್ರಗಳಲ್ಲೂ ಒಂದು ರೀತಿಯ ಹೊಸತನವಿತ್ತು. ಇವರ ಸಿನಿಮಾದ ಹಾಡುಗಳು, ಡೈಲಾಗ್ ಹಿಟ್ ಆಗುತ್ತಿದ್ದವು. ಇದಾದ ಬಳಿಕ ಮುಗುಳುನಗೆ ಹಾಗೂ ಗಾಳಿಪಟ ೨ ಚಿತ್ರಗಳು ತಕ್ಕಮಟ್ಟಿನ ಯಶಸ್ಸು ನೀಡಿದ್ದವು. ಇದಾದ ನಂತರ ಬಂದ ವಾಸ್ತುಪ್ರಕಾರ, ಪಂಚತಂತ್ರ, ಗರಡಿ, ಕರಟಕ ದಮನಕ ಚಿತ್ರಗಳು ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದ್ದು, ಭಟ್ಟರ ಕಂಬ್ಯಾಕ್‌ಗೆ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.

ದುನಿಯಾ ಸೂರಿ
2

ಮುಂಗಾರುಮಳೆ ಟೈಮ್‌ನಲ್ಲೇ ರಿಲೀಸ್ ಆದ ಮತ್ತೊಂದು ಹೊಸ ಅಲೆಯ ಸಿನಿಮಾ ದುನಿಯಾ. ಸೂರಿಯವರಂತಹ ಸೃಜನಶೀಲ ನೀರ್ದೇಶಕರನ್ನ ಹಾಗೂ ವಿಜಯ್ ಅವರಂತಹ ಆಕ್ಷನ್ ಹೀರೋ ಅನ್ನು ಕನ್ನಡಚಿತ್ರರಂಗಕ್ಕೆ ತಂದ ಸಿನಿಮಾವಿದು. ಇದಾದ ಬಳಿ ಸೂರಿಯವರು ಒಂದು ಹಿಟ್, ಒಂದು ಫ್ಲಾಪ್ ಸಿನಿಮಾಗಳನ್ನು ನೀಡುತ್ತಾ ಬಂದರು. ಇವರ ಹಿಟ್ ಸಿನಿಮಾಗಳು ಜಾಕಿ, ಟಗರು, ಕಡ್ಡಿಪುಡಿ. ಅಂಡರ್‌ ವರ್ಲ್ಡ ಅನ್ನು ತುಂಬಾ ರಿಯಾಲಿಸ್ಟಿಕ್ ಆಗಿ ತೋರಿಸುವ ಕೌಶಲ್ಯ ಹೊಂದಿರುವ ಇವರು, ಹೀರೋ ಜೊತೆಗೆ ಫೋಷಕ ನಟರ ಪಾತ್ರಗಳಿಗೂ ಅಷ್ಟೇ ಒತ್ತು ನೀಡುತ್ತಿದ್ದರು. ಟಗರು ಬಳಿಕ ಸೂರಿಯವರ ಯಾವ ಸಿನಿಮಾಗಳು ಯಶಸ್ಸು ಗಳಿಸಿಲ್ಲ.

ಪವನ್ ಕುಮಾರ್
3

ಲೂಸಿಯಾ ಸಿನಿಮಾ ಖ್ಯಾತಿಯ ಪವನ್‌ ಕುಮಾರ್‌ ನಿರ್ದೇಶನ ಮಾಡಿರುವುದು ಕೆಲವೇ ಕೆಲವು ಸಿನಿಮಾಗಳಾದರೂ ಪ್ರತಿ ಸಿನಿಮಾದಲ್ಲಿಯೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಲೈಫು ಇಷ್ಟೇನೆ, ಲೂಸಿಯಾ, ಯೂ ಟರ್ನ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಇವರು, ಪರಭಾಷೆಯಲ್ಲೂ ಗುರುತಿಸಿಕೊಂಡಿದ್ದರು. ಯೂಟರ್ನ್ ಯಶಸ್ಸಿನ ಬಳಿಕ ನಟನೆಯಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಪವನ್, 2023ರಲ್ಲಿ ಫಹಾದ್ ಫಾಸಿಲ್ ಅವರ ಧೂಮಂ ಸಿನಿಮಾ ನಿರ್ದೇಶಿಸಿದರು. ಆದರೆ, ಈ ಸಿನಿಮಾ ಸೋಲು ಕಂಡಿತ್ತು. ಮುಂದಿನ ಸಿನಿಮಾದಲ್ಲಿ ಪವನ್ ಕಂಬ್ಯಾಕ್‌ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

ಪ್ರೇಮ್
4

ಪ್ರೇಮ್ ಅಂದಾಕ್ಷಣ ನೇನಪಾಗೋದೇ ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಸಿನಿಮಾಗಳು. ಈ ಮೂರು ಸಿನಿಮಾಗಳ ಮೂಲಕ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿದ್ದರು. ಅದರಲ್ಲೂ ಜೋಗಿ ಸಿನಿಮಾ ಬಂದಾಗ ಥಿಯೇಟರ್ ಮುಂದೆ ಜನಜಾತ್ರೆ. ಇವರ ಸಿನಿಮಾಗಳಲ್ಲಿ ಹಾಡುಗಳು ಸಹ ಹಿಟ್ ಆಗುತ್ತಿದ್ದವು. ಹೀರೋ, ಹೀರೋಯಿನ್, ಸರ್ಪೋಟಿಂಗ ಕ್ಯಾರೆಕ್ಟರ್‌ಗಳು ಜನರಿಗೆ ಬೇಗ ಕನೆಕ್ಸ್ ಆಗುತ್ತಿದ್ದವು. ಈ ಮೂರು ಚಿತ್ರಗಳ ಬಳಿಕ ಪ್ರೇಮ್, ರಾಜ್ ದಿ ಶೋ ಮ್ಯಾನ್, ಜೋಗಯ್ಯ್, ದಿ ವಿಲನ್ , ಏಕ್‌ ಲವ್ ಯಾ ಸಿನಿಮಾ ಮಾಡಿದ್ರು. ಈ ಪೈಕಿ ರಾಜ್‌ ಬಿಟ್ಟರೆ ಬೇರೆ ಯಾವ ಚಿತ್ರಗಳು ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಸದ್ಯ ಅವರು ಕೆಡಿ ಡೆವಿಲ್ ಸಿನಿಮಾ ಮಾಡ್ತಿದ್ದು, ಇದರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದರ ಜೊತೆಗೆ ದರ್ಶನ್ ಜೊತೆಗೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ವಿಜಯ ಪ್ರಸಾದ್
5

ಸಿಲ್ಲಿಲಲ್ಲಿ ಎಂಬ ಕನ್ನಡದ ಪ್ರಸಿದ್ದ ಧಾರವಾಹಿಗೆ ನಿರ್ದೇಶನ ಮಾಡಿ ಜನ ಮನ್ನಣೆಗಳಿಸಿದ ವಿಜಯ ಪ್ರಸಾದ್, ಸಿದ್ಲಿಂಗು ಸಿನಿಮಾ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಈ ಸಿನಿಮಾ ಪ್ರೇಕ್ಷಕರ ಮನಗೆದ್ದಿತು. ಇದಾದ ಬಳಿಕ ಬಂದ ನೀರ್ ದೋಸೆ ಚಿತ್ರ ಕೂಡ ಹಿಟ್ ಆಯಿತು. ವಿಜಯ ಪ್ರಸಾದ್ ತಮ್ಮ ಸಿನಿಮಾಗಳ ಪಾತ್ರಗಳನ್ನು ತುಂಬಾ ಆಳವಾಗಿ ಹೆಣೆಯುತ್ತಿದ್ದರು. ಜೊತೆಗೆ ಒಂದಷ್ಟು ಚೇಷ್ಟೇ, ವಿಡಂಬನೆ, ಪ್ರಬುದ್ಧವಾದ ಒಂದಷ್ಟು ವಿಷಯಗಳನ್ನು ಇಟ್ಟುಕೊಂಡು ಸಮಾಜಕ್ಕೆ ಸಂದೇಶ ಕೊಡುವ ಪ್ರಯತ್ನ ಮಾಡುತ್ತಿದ್ದರು. ಆದರೆ, ಈ ಎರಡು ಸಿನಿಮಾಗಳ ಬಳಿಕ ಬಂದ ಪೆಟ್ರೋಮ್ಯಾಕ್ಸ್, ತೋತಾಪುರಿ ಚಾಪ್ಟರ್ 1, ತೋತಾಪುರಿ 2,  ಸಿದ್ಲಿಂಗು 2 ಸಿನಿಮಾಗಳು ಪ್ರೇಕ್ಷಕರಿಗೆ ಹಿಡಿಸಲಿಲ್ಲ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+