X
ಹೋಮ್ ಚಲನಚಿತ್ರಗಳ ಒಳನೋಟ

ಸಿನಿಮಾರಂಗದಲ್ಲಿ ಯಶಸ್ಸಿನ ಶಿಖರ ಏರುತ್ತಿದ್ದಂತೆ ನಿಧನರಾದ ಸ್ಯಾಂಡಲ್‌ವುಡ್ ನಟರಿವರು!

Author Sowmya Bairappa | Updated: Thursday, February 13, 2025, 09:59 AM [IST]

ಕನ್ನಡ ಸಿನಿಮಾರಂಗ ಇಂದು ಜಾಗತಿಕವಾಗಿ ಗುರುತಿಸಿಕೊಂಡಿದೆಯೆಂದರೆ ಅದಕ್ಕೆ ಹಲವಾರು ಕಲಾವಿದರ ಅವಿಸ್ಮರಣೀಯ ಕೊಡುಗೆಯಿದೆ. ಕನ್ನಡದ ಹಲವಾರು ನಟರು ಅಭೂತಪೂರ್ವ ಸಾಧನೆ ಮಾಡಿ, ತಮ್ಮ ಜೀವನದ ಉತ್ತುಂಗದಲ್ಲಿದ್ದಾಗಲೇ ಚಿತ್ರರಂಗವನ್ನು ಅಗಲಿದ್ದಾರೆ. ಆದರೆ, ಕಲಾವಿದನಿಗೆ ಎಂದು ಸಾವಿಲ್ಲ ಎಂಬಂತೆ ಸಿನಿಮಾಗಳ ಮೂಲಕ ಅವರು ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿದ್ದಾರೆ. ಇಲ್ಲಿ ಸಿನಿಮಾರಂಗದಲ್ಲಿ ಯಶಸ್ಸಿನ ಶಿಖರ ಏರುತ್ತಿದ್ದಂತೆ ನಿಧನರಾದ ಸ್ಯಾಂಡಲ್‌ವುಡ್ ನಟರ ಪಟ್ಟಿಯನ್ನು ನೀಡಲಾಗಿದೆ.


cover image
ಪುನೀತ್ ರಾಜ್‌ಕುಮಾರ್
1

ಬಾಲ ಕಲಾವಿದರಾಗಿ ಚಂದನವನ ಪ್ರವೇಶಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್, ಅಪ್ಪು ಚಿತ್ರದ ಮೂಲಕ ಹೀರೋ ಆದರು. ಸಮಾಜಕ್ಕೆ ಮಾದರಿಯಾಗುವಂತಹ ಚಿತ್ರಗಳನ್ನೇ ಹೆಚ್ಚಾಗಿ ಮಾಡಿದ್ದ ಪುನೀತ್, ಸಿನಿಮಾ ಕ್ಷೇತ್ರದಲ್ಲೂ ಎಲ್ಲರಿಗೂ ಮಾದರಿಯಾಗಿದ್ದರು. ಇವರ ಸಿನಿಮಾಗಳನ್ನು ಚಿಕ್ಕವರಿಂದ ಹಿಡಿದು ವಯಸ್ಸಾದವರ ವರೆಗೆ ಪ್ರೀತಿಯಿಂದ ನೋಡುತ್ತಿದ್ದರು. ಕೇವಲ ಸಿನಿಮಾ ಮಾತ್ರವಲ್ಲದೇ, ಯಾವುದೇ ಪ್ರಚಾರ ಬಯಸದೇ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಎಲ್ಲರಿಗೂ ಮಾದರಿಯಾಗಿದ್ದರು. ಇಷ್ಟೆಲ್ಲಾ ಸಾಧನೆ ಮಾಡಿದ್ದ ಪುನೀತ್, 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ ನಿಧನರಾದರು. ಅವರ ಹಠಾತ್ ಅಗಲಿಕೆಯಿಂದ ಕರುನಾಡಿಗೆ ಬರಸಿಡಿಲು ಬಂಡಿದಂತಾಗಿತ್ತು.

ಶಂಕರ್ ನಾಗ್
2

ಕನ್ನಡ ಚಿತ್ರ ಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ್ ನಾಗ್, ಕನ್ನಡಿಗರ ತಾದ್ಯಾತ್ಮದಲ್ಲಿ ಬೆರೆತು ಹೋಗಿದ್ದಾರೆ. ತಮ್ಮ 35 ವರ್ಷದ ಕಿರಿದಾದ ಬದುಕಿನ ಪಯಣದಲ್ಲಿ ನೂರಾರು ವರುಷ ನೆನೆಯುವಂತಹ ಕಾರ್ಯ ಸಾಧಿಸಿದ ಛಲಗಾರ ಶಂಕರ್ ನಾಗ್. ಅವರು ನಾಯಕನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗವನ್ನು ಬೆಳಗಿದ್ದಾರೆ. ಕೇವಲ 35 ವಯಸ್ಸಿನಲ್ಲೇ ತಮ್ಮ ಚುರುಕಾದ ಜೀವನದಿಂದ ತುಂಬಾ ಎತ್ತರಕ್ಕೆ ಬೆಳೆದಿದ್ದ ಶಂಕರನಾಗ್‌, 1990ರ ಸೆಪ್ಟೆಂಬರ್ 30ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರವಲಯದ ಬಳಿ ಅಪಘಾತಕ್ಕೀಡಾಗಿ ನಿಧನರಾದರು.

ಚಿರಂಜೀವಿ ಸರ್ಜಾ
3

ಚಿಕ್ಕಪ್ಪ ಅರ್ಜುನ್ ಸರ್ಜಾ ಅವರ ಕೈಕೆಳಗೆ ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿರಂಜೀವಿ ಸರ್ಜಾ, 2009ರಲ್ಲಿ ತೆರೆಕಂಡ ವಾಯುಪುತ್ರ ಚಿತ್ರದ ಮೂಲಕ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ನಂತರ ಭಿನ್ನ-ಭಿನ್ನ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಚೆಂದನವನದಲ್ಲಿ ಹೆಸರು ಮಾಡಿದ್ದ ಚಿರು,  2020ರ ಜೂನ್ 7ರಂದು ಹೃದಯಾಘಾತದಿಂದ ತಮ್ಮ 39ನೇ ವಯಸ್ಸಿನಲ್ಲಿ ವಿಧಿವಶರಾದರು.

ಸುನೀಲ್
4

ನಟ ಸುನೀಲ್ 90ರ ದಶಕದಲ್ಲಿ ಚಾಕಲೇಟ್ ಹೀರೋ ಎಂದೇ ಖ್ಯಾತಿ ಪಡೆದಿದ್ದರು. 1990 ರಿಂದ 1994 ರವರೆಗೆ ಸಿನಿಮಾರಂಗದಲ್ಲಿ ಸಕ್ರಿಯವಾಗಿದ್ದ ಇವರು, ಸುಮಾರು ಮೂವತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಬೆಳ್ಳಿ ಕಾಲುಂಗುರ, ದ್ರಾಕ್ಷಾಯಿಣಿ, ಮಾಲಾಶ್ರೀ ಮಾಮಾಶ್ರೀ, ಶೃತಿ ಮುಂತಾದ ಹಿಟ್ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದರು. ಸಿನಿಪರದೆಯ ಮೇಲೆ ಸುನೀಲ್ ಮತ್ತು ಮಾಲಾಶ್ರೀ ಆ ಕಾಲದ ಫೇವರಿಟ್ ಜೋಡಿಯಾಗಿತ್ತು. ತಮ್ಮ ಚುರುಕು ಅಭಿನಯದಿಂದ ಕನ್ನಡದಲ್ಲಿ ಸಂಚಲನ ಮೂಡಿಸಿದ್ದ ಸುನೀಲ್, 1994 ಜುಲೈ 24ರಂದು ನಿರ್ಮಾಪಕ ಸಚಿನ್ ಮಲ್ಯ ಮತ್ತು ನಟಿ ಮಾಲಾಶ್ರೀಯವರೊಂದಿಗೆ ಬಾಗಲಕೋಟೆಯಿಂದ ಬೆಂಗಳೂರಿಗೆ ಕಾರಿನಲ್ಲಿ ಬರುವಾಗ ಅಪಘಾತದಲ್ಲಿ ನಿಧನರಾದರು. ಮಾಲಾಶ್ರೀ ಪವಾಡ ಸದೃಶವಾಗಿ ಬದುಕುಳಿದಿದ್ದರು.

ಸಂಚಾರಿ ವಿಜಯ್
5

ಕನ್ನಡ ಚಿತ್ರರಂಗದ ಅದ್ಭುತ ನಟರಲ್ಲಿ ಒಬ್ಬರಾಗಿದ್ದ ಸಂಚಾರಿ ವಿಜಯ್, 62ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ನಾನು ಅವನಲ್ಲ ಅವಳು' ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಇದರಲ್ಲಿ ಅವರು ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ್ದರು. ಸಂಚಾರಿ ವಿಜಯ್ ಅವರ ಮತ್ತೊಂದು ಸಿನಿಮಾದ 'ಹರಿವು' ಅತ್ಯುತ್ತಮ ಕನ್ನಡ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಪಡೆದಿತ್ತು. ಹೀಗೆ ಚಿತ್ರರಂಗದಲ್ಲಿ ಉತ್ತುಂಗಕ್ಕೇರುತ್ತಿರುವಾಗಲೇ 2021ರ ಜೂನ್ 12ರಂದು ರಾತ್ರಿ 11.30ರ ಸುಮಾರಿಗೆ ಸ್ನೇಹಿತ್ ನವೀನ್ ಜೊತೆ ಬೈಕ್‌ನಲ್ಲಿ ಹೋಗುವಾಗ ಅಪಘಾತಕ್ಕೆ ಒಳಗಾದರು. ಈ ವೇಳೆ ಅವರ ಮೆದುಳು ಮತ್ತು ಬಲ ತೊಡೆಗೆ ತೀವ್ರ ಪೆಟ್ಟಾಗಿದ್ದರಿಂದ ಜೂನ್ 15ರಂದು ನಿಧನರಾದರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದ ವಿಜಯ್, ಕೊನೆಯುಸಿರೆಳೆಯುವಾಗಲೂ ತಮ್ಮ ಅಂಗಾಂಗಳ ದಾನದ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದರು.





Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+