X
ಹೋಮ್ ಚಲನಚಿತ್ರಗಳ ಒಳನೋಟ

ನಿರ್ದೇಶನದ ಜೊತೆಗೆ ನಟನೆಯಲ್ಲೂ ಮೋಡಿ ಮಾಡಿದ ಸ್ಯಾಂಡಲ್‌ವುಡ್ ಡೈರೆಕ್ಟರ್ಸ್!

Author Sowmya Bairappa | Updated: Saturday, February 1, 2025, 11:03 AM [IST]

ಸ್ಯಾಂಡಲ್‌ವುಡ್‌ನ ಹಲವಾರು ಕಲಾವಿದರು ನಟನೆ ಮತ್ತು ನಿರ್ದೇಶನದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಕನ್ನಡದ ಹಲವು ನಿರ್ದೇಶಕರು ಸೂಪರ್ ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುವ ಜೊತೆಗೆ ನಟನೆಯಲ್ಲೂ ಮೋಡಿ ಮಾಡಿದ್ದಾರೆ. ಇಲ್ಲಿ ಆ ನಿರ್ದೇಶಕರ ಪಟ್ಟಿಯನ್ನು ನೀಡಲಾಗಿದೆ.


cover image
ಯೋಗರಾಜ್ ಭಟ್
1

ಕನ್ನಡ ಚಿತ್ರಗಳಿಗೆ ಹೊಸತನದ ಸ್ಪರ್ಶ ನೀಡಿದವರು ಯೋಗರಾಜ್ ಭಟ್. ಇವರನ್ನು ಕನ್ನಡದ ವಿಕಟ ಕವಿ ಅಂತಲೇ ಕರೆಯುತ್ತಾರೆ. 2003ರಲ್ಲಿ ತೆರೆಕಂಡ ಮಣಿ ಚಿತ್ರದಿಂದ ಸಿನಿಮಾ ನಿರ್ದೇಶನಕ್ಕಿಳಿದ ಯೋಗರಾಜ್ ಭಟ್, ರಂಗ SSLC, ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಪರಮಾತ್ಮ, ದನ ಕಾಯೋನು, ವಾಸ್ತು ಪ್ರಕಾರ, ಡ್ರಾಮಾ, ಮುಗುಳುನಗೆ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿರ್ದೇಶನದ ಜೊತೆಗೆ ದ್ಯಾವ್ರೇ, ಪರಪಂಚ, ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ, ಲಕ್ಕಿಮ್ಯಾನ್, ಉತ್ತರಾಕಾಂಡ ಸೇರಿದಂತೆ ಹಲವು ಸಿನಿಮಾಗಳಲ್ಲಿ ಫೋಷಕ ನಟರಾಗಿ ಅಭಿನಯಿಸಿದ್ದಾರೆ.

ಎಸ್. ನಾರಾಯಣ್
2

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರಂತಹ ದಿಗ್ಗಜರಿಗೆ ಸಿನಿಮಾ ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಕಲಾಸಾಮ್ರಾಟ್ ಎಸ್ ನಾರಾಯಣ್, ಕನ್ನಡ ಸಿನಿಮಾರಂಗಕ್ಕೆ ಅನೇಕ ಮರೆಯಲಾಗದ ಸಿನಿಮಾಗಳನ್ನು ನೀಡಿದ್ದಾರೆ.. ನಿರ್ದೇಶಕರಾಗಿ ಮಾತ್ರವಲ್ಲದೇ, ನಾಯಕನಟ ಹಾಗೂ ಫೋಷಕನಟರಾಗಿ ಕಮಾಲ್ ಮಾಡಿದ್ದಾರೆ. ಕುರಿಗಳು ಸಾರ್ ಕುರಿಗಳು, ಕಲ್ಯಾಣಿ, ಸೂರ್ಯವಂಶ, ಗಲಾಟೆ ಅಳಿಯಂದಿರು, ಅಂಜಲಿ ಗೀತಾಂಜಲಿ, ತಿಪ್ಪರಳ್ಳಿ ತರ್ಲೆಗಳು, ಛತ್ರಿಗಳು ಸಾರ್ ಛತ್ರಿಗಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಓಂ ಪ್ರಕಾಶ್ ರಾವ್
3

ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿರುವ ಓಂ ಪ್ರಕಾಶ್ ರಾವ್, ಪಾಳೇಗಾರ, ಲಾಕಪ್ ಡೆತ್, ಹುಚ್ಚ, ನಿನ್ನೆ ಪ್ರೀತಿಸುವೆ, ಕಲಾಸಿಪಾಳ್ಯ, ಸಾಹುಕಾರ, ಅಣ್ಣ್ರಾವ್ರು, ಮಂಡ್ಯ, ಪ್ರಿನ್ಸ್, ಅಯ್ಯ, ಹುಬ್ಬಳ್ಳಿ, ಚಂದ್ರಲೇಖಾ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇವರು ನಟರಾಗಿ ಎಸ್‌ಪಿ ಭಾರ್ಗವಿ, ಡಕೋಟ ಎಕ್ಸ್‌ಪ್ರೆಸ್, ಕನಕಾಂಬರಿ, ಹಠವಾದಿ, ಅಭಯ್ , ತಾಕತ್, ಶೌರ್ಯ, ತಿಪ್ಪರಳ್ಳಿ ತರ್ಲೆಗಳು, ಪ್ರಿನ್ಸ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಗುರುಪ್ರಸಾದ್
4

2006ಲ್ಲಿ ತೆರೆಕಂಡ ಮಠ ಸಿನಿಮಾ ಮೂಲಕ ನಟ ಹಾಗೂ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಗುರುಪ್ರಸಾದ್‌, ಸ್ಯಾಂಡಲ್‌ವುಡ್‌ನ ಕ್ರಿಯೇಟಿವ್‌ ನಿರ್ದೇಶಕ ಎನಿಸಿಕೊಂಡಿದ್ದರು. ವಿಭಿನ್ನ ಫಾರ್ಮ್ಯಾಟ್‌ನ ಸಿನಿಮಾಗಳು ಅವರ ಬತ್ತಳಿಕೆಯಿಂದ ಬಂದಿವೆ. ನಿರ್ದೇಶನ ಮಾತ್ರವಲ್ಲದೇ ನಟನೆಯಿಂದಲೂ ಕನ್ನಡಿಗರಿಗೆ ಚಿರಪರಿಚಿತರಾಗಿದ್ದ ಇವರು, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್, ಮೈಲಾರಿ, ಹುಡುಗರು, ಬಡವ ರಾಸ್ಕಲ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಟಿ ಎಸ್ ನಾಗಾಭರಣ
5

ಸಹಾಯಕ ನಿರ್ದೇಶಕರಾಗಿ ಸಿನಿಮಾರಂಗ ಪ್ರವೇಶಿಸಿದ ಟಿ.ಎಸ್.ನಾಗಾಭರಣ, 1978ರಲ್ಲಿ `ಗ್ರಹಣ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಂಡರು. ಈ ಚಿತ್ರ ಎರಡು ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆಯಿತು. ಇವರು ನಿರ್ದೇಶಿಸಿದ ಚಿತ್ರಗಳಲ್ಲಿ ಸುಮಾರು 20 ಚಿತ್ರಗಳು ಅಂತರಾಷ್ಟ್ರೀಯ, ರಾಷ್ಟೀಯ ಮತ್ತು ರಾಜ್ಯ ಮಟ್ಟಗಳಲ್ಲಿ ಪ್ರಶಸ್ತಿಗಳನ್ನು ಪಡೆದಿವೆ. ಇವರು ನಟರಾಗಿ ಆಕ್ಸಿಡೆಂಟ್, ಕಿರಾತಕ, ಜೈಲಲಿತ, ಬೈರಾಗಿ, ಕೆಜಿಎಫ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.




ಪ್ರೇಮ್
6

2003ರಲ್ಲಿ ಬಿಡುಗಡೆಗೊಂಡ 'ಕರಿಯ' ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಜೋಗಿ ಪ್ರೇಮ್, ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವರು ನಿರ್ದೇಶಕರಾಗಿ ಮಾತ್ರವಲ್ಲದೇ, ಪ್ರೇಮ್ ಅಡ್ಡ, ಡಿಕೆ, ಪ್ರೀತಿ ಏಕೆ ಭೂಮಿ ಮೇಲಿದೆ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಆ ಮೂಲಕ ನಟನೆಯಲ್ಲೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+