ಅಭಿನವ ಬೀಚಿ ಎಂದೇ ಖ್ಯಾತರಾಗಿರುವ ಪ್ರಾಣೇಶ್ ಕರ್ಣಾಟಕದ ಖ್ಯಾತ ಹಾಸ್ಯ ಕಲಾವಿದರು. ದೇಶ- ವಿದೇಶಗಳಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನೀಡಿರುವ ಇವರು ನವಿರಾದ ತಿಳಿ ಹಾಸ್ಯದಲ್ಲಿ ತಾತ್ವಿಕ ಭೋದನೆಯನ್ನು ಸೇರಿಸಿ ಹೇಳುವ ಪರಿ ಪ್ರಶಂಸನೀಯ. ಗಂಗಾವತಿಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು ಓದು- ಬರಹದಲ್ಲಿ ಸಾಧಾರಣ ವಿಧ್ಯಾರ್ಥಿ.
ಖ್ಯಾತ ಸಾಹಿತಿ ಬೀಚಿಯವರ ಆಗಾಧವಾದ ಪ್ರಭಾವಕ್ಕೊಳಗಾದ ಇವರು ಹಾಸ್ಯ-ಸಂಜೆ ಕಾರ್ಯಕ್ರಮಗಳನ್ನೇ ತಮ್ಮ ಜೀವನಾಧಾರವಾಗಿ ಮಾಡಿಕೊಂಡು ಅದರಿಂದಲೇ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಕಾರಂತರು,ಭೈರಪ್ಪನವರ ಸಾಹಿತ್ಯದತ್ತ ಹೆಚ್ಚಾಗಿ ಒಲವಿರುವ ಇವರು ಚಿತ್ರರಂಗದಲ್ಲಿ `ಮುಸ್ಸಂಜೆ ಮಾತು' ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದರು.