ಲಕ್ಷ್ಮಣ ಶಿವಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ, ಗೀತ ಸಾಹಿತಿ ಮತ್ತು ಸಂಕಲನಕಾರ. ಇವರು 2016 ರಲ್ಲಿ ತೆರೆಕಂಡ `ಎ ಡೇ ಇನ್ ಸಿಟಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಇವರು ಕನ್ನಡದ ಪ್ರಖ್ಯಾತ ನಿರ್ದೇಶಕ ಸಿ.ವಿ.ಶಿವಶಂಕರ್ರವರ ಪುತ್ರ.
ಬಾಲ್ಯದಿಂದಲೂ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ನಾಟಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಇವರು ವಿಧ್ಯಾಭ್ಯಾಸದ ನಂತರ ಎನಿಮೇಷನ್ ಕ್ಷೇತ್ರದಲ್ಲಿ ಕೆಲಕಾಲ ಕೆಲಸ ಮಾಡಿದರು.
ಯಾವಾಗಲೂ ಕ್ಯಾಮರಾದ ಹಿಂದೆ ನಿಂತು ಕೆಲಸ ಮಾಡಲು ಬಯಸುವ ಇವರು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ.ಕೆಲವು ಕಿರುತೆರೆ ಧಾರಾವಾಹಿಗಳಲ್ಲೂ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವು ಚಿತ್ರಗಳಿಗೆ ಗೀತಸಾಹಿತ್ಯವನ್ನು ಒದಗಿಸಿದ್ದಾರೆ
2015 ರಲ್ಲಿ ತೆರೆಕಂಡ `ಎ ಡೇ ಇನ್ ಸಿಟಿ ಲೈಫ್' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.ಈ ಚಿತ್ರ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಪ್ರದರ್ಶನವಾಯಿತು.