twitter
    Celebs»S Mahender»Biography

    ಎಸ್ ಮಹೇಂದರ್ ಜೀವನಚರಿತ್ರೆ

    ಎಸ್ .ಮಹೇಂದರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಟ. ಇವರು ಕೊಳ್ಳೇಗಾಲದ ಬಂಡಹಳ್ಳಿಯಲ್ಲಿ ಜನಿಸಿದರು. ಇವರು ಬಿಜೆಪಿ ಅಭ್ಯರ್ಥಿಯಾಗಿ ಕೊಳ್ಳೇಗಾಲ ಕ್ಷೇತ್ರದಿಂದ ಸ್ಫರ್ಧಿಸಿದ್ದರು.


    1992 ರಲ್ಲಿ ತೆರೆಕಂಡ `ಪ್ರಣಯದ ಪಕ್ಷಿಗಳು' ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ `ತಾಯಿ ಇಲ್ಲದ ತಬ್ಬಲಿ' ,`ಶೃಂಗಾರ ಕಾವ್ಯ' ,`ಕರ್ಪೂರದ ಗೊಂಬೆ', `ಸ್ನೇಹಲೋಕ',`ಅಸುರ' `ವಾಲೀ' ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 1998 ರಲ್ಲಿ ತಮ್ಮ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ಶೃತಿಯವರನ್ನು ವಿವಾಹವಾದರು. ಈ ದಂಪತಿಗಳಿಗೆ ಗೌರಿ ಎಂಬ ಪುತ್ರಿಯಿದ್ದಾಳೆ. 2001 ರಲ್ಲಿ ತೆರೆಕಂಡ `ಗಟ್ಟಿಮೇಳ' ಚಿತ್ರದಲ್ಲಿ ಎಸ್ ಮಹೇಂದರ್ ಮತ್ತು ಶೃತಿ ತೆರೆಮೇಲೆ ಕೂಡ ದಂಪತಿಯಾಗಿ ನಟಿಸಿದ್ದರು.


    2009 ರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಶೃತಿ ಮತ್ತು ಮಹೇಂದರ್ ಡೈವೋರ್ಸ್ ಪಡೆದರು. ನಂತರ ಮಹೇಂದರ್ ಮೈಸೂರಿನಲ್ಲಿ ನೆಲೆಸಿರುವ ಯಶೋಧಾ ಎಂಬುವವರನ್ನು ವಿವಾಹವಾದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X