ಮೈಸೂರಿನಲ್ಲಿ ಜನಿಸಿದ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ. ಇವರ ತಂದೆ ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ಹರಿ ಸಿಂಗ್ ಮತ್ತು ತಾಯಿ ಕನ್ನಡ ಚಿತ್ರನಟಿ ಪ್ರತಿಮಾದೇವಿ. 1975 ರಲ್ಲಿ `ನಾಗಕನ್ಯೆ' ಚಿತ್ರದ ಮೂಲಕ ಸಿನಿ ಕೆರಿಯರ್ ಪ್ರಾರಂಭಿಸಿದ ಬಾಬುರವರು ಕನ್ನಡದಲ್ಲಿ ಸುಮಾರು 50 ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಇವರು ಮೂರು ಬಾರಿ ರಾಷ್ಟ್ರಪತಿ ರಜತಕಮಲ ಪ್ರಶಸ್ತಿ ಪಡೆದಿದ್ದಾರೆ.
ಇವರ ಪುತ್ರ ಆದಿತ್ಯ ಕನ್ನಡ ಚಿತ್ರರಂಗದ ನಟ ಮತ್ತು ಪುತ್ರಿ ರಿಷಿಕಾ ಸಿಂಗ್ ಕೂಡ ಚಂದನವನದಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.