ಸಯಾಜಿ ಶಿಂದೆ ಜೀವನಚರಿತ್ರೆ
ಮಹಾರಾಷ್ಟ್ರದ ಸತಾರಾ ಬಳಿಯಿರುವ ಒಂದು ಚಿಕ್ಕ ಹಳ್ಳಿಯಲ್ಲಿ ಜನಿಸಿದ ಸಯ್ಯಾಜಿ ಶಿಂಧೆ ಮೂಲತಃ ಮರಾಠಿ ಚಿತ್ರರಂಗದವರು.ಮರಾಠಿ ಭಾಷೆಯಲ್ಲಿ ಪದವಿ ಪಡೆದ ಶಿಂಧೆ ಮಹಾರಾಷ್ಟ್ರ ನೀರಾವರಿ ಇಲಾಖೆಯಲ್ಲಿ ವಾಚಮನ್ ಕೆಲಸ ಮಾಡುತ್ತಿದ್ದರು. ಮುಂದೆ ಅಭಿನಯದಲ್ಲಿ ಅಭಿರುಚಿ ಬೆಳೆಸಿಕೊಂಡ ಇವರು ಮರಾಠಿ ಚಿತ್ರ `ಶೋಲ್'ದಲ್ಲಿ ಅಭಿನಯಿಸಿದರು. ಶಿಂಧೆ ಸಿನಿ ಕೆರಿಯರ್ ಪ್ರಾರಂಭಿಸಿದ್ದು ಮರಾಠಿ ಚಿತ್ರದ ಮೂಲಕವಾದರೂ ಇವರಿಗೆ ಬಿಗ್ ಬ್ರೇಕ್ ನೀಡಿದ್ದು 2000ರಲ್ಲಿ ತೆರೆಗೆಬಂದ ತಮಿಳು ಚಿತ್ರ `ಭಾರತಿ'.ಈ ಚಿತ್ರವು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತು ಮತ್ತು ರಾಷ್ಟ್ರಪ್ರಶಸ್ತಿ ಪಡೆಯಿತು.ತಮಿಳು ಭಾಷೆ ಬರದಿದ್ದರೂ ಕೂಡ ತಮಿಳುನಾಡಿನ ಶ್ರೇಷ್ಠ ಸಾಹಿತಿ ಮತ್ತು ಕವಿ ಸುಬ್ರಮಣ್ಯಮ್ ಭಾರತಿಯವರ ಪಾತ್ರದಲ್ಲಿ ಶಿಂಧೆ ನೀಡಿದ ಅಭಿನಯ ಸಾಕಷ್ಟು ಪ್ರಶಂಸೆ ಪಡೆಯಿತು.
ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ `ಟ್ಯಾಗೋರ್' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದರು.2004 ರಲ್ಲಿ ಪುನೀತ್ ಅಭಿನಯದ `ವೀರ ಕನ್ನಡಿಗ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.