ಅಭಿಮನ್ಯು (2014)(U/A)
ಅಭಿಮನ್ಯು ಕಥೆ
ಅಭಿಮನ್ಯು ಚಿತ್ರವನ್ನು ಕನ್ನಡ ದಲ್ಲಿ ಮೊಟ್ಟ ಮೊದಲ ಬಾರಿಗೆ ಅರ್ಜುನ್ ಸರ್ಜಾ ಅವರು ನಿರ್ದೇಶಿಸಿದ್ದು, ಅರ್ಜುನ್ ಸರ್ಜಾ(ನಾಯಕ) ಮತ್ತು ಸುರ್ವೀನ್ ಚಾವ್ಲಾ (ನಾಯಕಿಯಾಗಿ) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಎಸ್ ಜಹಾಂಗೀರ್, ರಾಹುಲ್ ದೇವ್, ರವಿ ಕಲೆ, ವಿನಯ್ ಪ್ರಸಾದ್, ರಘು ಬಾಬು, ಮಾಸ್ಟರ್ ಭರತ್, ಬಿರಾದರ್, ಶಫಿ, ಮೊದಲಾದವರ ತಾರ ಬಳಗವೇ ಈ ಚಿತ್ರದಲ್ಲಿ ಮುಡಿ ಬಂದಿದ್ದೆ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟಿಸಿ, ನಿರ್ಮಿಸಿ, ನಿರ್ದೇಶಿಸಿರುವ ಸ್ಯಾಂಡಲ್ ವುಡ್ ನ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ 'ಅಭಿಮನ್ಯು'.
ಒಡಿಶಾ ಮತ್ತು ಬಿಹಾರ್ ನಲ್ಲಿ ನಡೆದ ಘಟನೆಗಳನ್ನ ಇಟ್ಕೊಂಡು ಕಥೆ ಮಾಡಿದ್ದು. ಶಿಕ್ಷಣ ಮಕ್ಕಳಿಗೆ ಆಜನ್ಮ ಸಿದ್ಧ ಹಕ್ಕು. ಆದ್ರೆ, ನಮ್ಮ ದೇಶದಲ್ಲಿ ಮಕ್ಕಳಿಗೆ ಸಿಗಬೇಕಾದ ಬೇಸಿಕ್ ಎಜ್ಯುಕೇಷನ್ ಸಿಗ್ತಾಯಿಲ್ಲ. ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಅಂತಾರೆ. ಆದ್ರೆ ಅದ್ರಲ್ಲಿ ಸ್ಟ್ಯಾಂಡರ್ಡ್ ಇಲ್ಲ, ಕ್ವಾಲಿಟಿ ಇಲ್ಲ. ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಅಂತೀವಿ. ಆದ್ರೆ ಶಿಕ್ಷಣವೇ ಇಲ್ಲದೆ ಹೋದ್ರೆ ಹೇಗೆ..?
ಎಷ್ಟೋ ಕುಟುಂಬಗಳು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡೋಕೆ ಆಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೆಲ್ಲಾ ಅವಲೋಕಿಸಿ, ಅಂತಹ ಕುಟುಂಬಗಳ ಪ್ರತಿನಿಧಿಯಾಗಿ ಅಭಿಮನ್ಯು ಸಿನೆಮಾವನ್ನು ಚಿತ್ರಿಸಿದ್ದಾರೆ. ಅರ್ಜುನ್ ಸರ್ಜಾರನ್ನ ''ಆಕ್ಷನ್ ಕಿಂಗ್'' ಅಂತಲೇ ಜನ ಈಗಲೂ ಗುರುತಿಸುತ್ತಾರೆ.
ನಾಯಕಿ ಸುರ್ವೀನ್ ಚಾವ್ಲಾ ಬಾಲಿವುಡ್ ನ ಗ್ಲಾಮರಸ್ ಹೀರೋಯಿನ್.ಸುರ್ವೀನ್ ಚಾವ್ಲಾ ಅಭಿಮನ್ಯು ಚಿತ್ರದಲ್ಲಿ ಹೋಮ್ಲಿ ಪಾತ್ರ. ಅವರ ಪಾತ್ರದಲ್ಲಿ ತುಂಬಾ ಎಮೋಷನ್ಸ್ ಇದೆ.
ನಿರ್ದೇಶಕ ಅರ್ಜುನ್ ಸರ್ಜಾ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೆ.