twitter

    ಅಮೃತಮತಿ ಕಥೆ

    ಕನ್ನಡದ ಮಹಾಕವಿಗಳಲ್ಲೊಬ್ಬನಾದ, 13 ನೇ ಶತಮಾನದಲ್ಲಿ ಜೀವಿಸಿದ್ದ ಜನ್ನನ `ಯಶೋಧರ ಚರಿತ' ಕೃತಿಯ ಮೇಲೆ ಆಧರಿತ ಚಿತ್ರ ಅಮೃತಮತಿ. ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಅಮೃತಮತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮನಸ್ಸು ಮತ್ತು ದೇಹಗಳ ನಡುವೆ ನಡೆಯುವ ತುಮುಲಗಳನ್ನು ಚಿತ್ರ ಕಟ್ಟಿ ಕೊಡಲಿದೆ.

    ಯುವರಾಜ ಯಶೋಧರನ ಹೆಂಡತಿ ಅಮೃತಮತಿ ಒಂದು ದಿನ ಕುದುರೆ ಲಾಯದ ಉಸ್ತುವಾರಿ ನೋಡಿಕೊಳ್ಳುವ ಅಷ್ಟಾವಂಕನ ಹಾಡಿಗೆ ಮರುಳಾಗಿ ಅವನಲ್ಲಿ ಮೋಹಿತಳಾಗುತ್ತಾಳೆ. ತನ್ನ ಸೇವಕಿಯ ಮೂಲಕ ಅವನ್ನನು ಒಪ್ಪಿಸಿ ಕುದುರೆ ಲಾಯದಲ್ಲಿ ಅವನನ್ನು ಸಂಧಿಸಲು ಆರಂಭಿಸುತ್ತಾಳೆ.

    ಈ ವಿಷಯ ತಿಳಿದ ಯಶೋಧರ ಒಂದು ರಾತ್ರಿ ಅವರಿಬ್ಬರನ್ನು ಹಿಂಬಾಲಿಸಿ ತನ್ನ ಅನುಮಾನವನ್ನು ಖಚಿತ ಪಡಿಸಿಕೊಳ್ಳುತ್ತಾನೆ. ಅವರಿಬ್ಬರನ್ನು ಕೊಲ್ಲಬೇಕಿನಿಸಿದರೂ ಕೊಲ್ಲದೆ ಹಿಂತಿರುಗುತ್ತಾನೆ. ಕೆಲ ದಿನಗಳ ನಂತರ ಅಮೃತಮತಿ ತನ್ನ ವಿಷಯ ಗಂಡ ಮತ್ತು ಅತ್ತೆ ಮಾವಂದಿರ ತಿಳಿದಿದೆಯೆಂಬ ಅನುಮಾನದಿಂದ ಅವರಿಗೆ ವಿಷದ ಲಡ್ಡು ಉಣಬಡಿಸಿ ಅವರ ಸಾವಿಗೆ ಕಾರಣಳಾಗುತ್ತಾಳೆ. ಮುಂದೆ ಎಲ್ಲರ ಜನ್ಮ ಜನ್ಮಾಂತರ ಕಥೆಗಳನ್ನು ಜನ್ನ ತನ್ನ ಕೃತಿಯಲ್ಲಿ ಹೇಳುತ್ತಾನೆ.

    ಬರಗೂರು ರಾಮಚಂದ್ರಪ್ಪ ಅಮೃತಮತಿಯ ದೃಷ್ಟಿಯಿಂದ ಈ ಕಥೆಗೆ ತಮ್ಮ ಚಿತ್ರದ ಮೂಲಕ ಮರು ವ್ಯಾಖ್ಯಾನ ನೀಡಿದ್ದಾರೆ. ಚಿತ್ರಕ್ಕೆ ಶಮಿತಾ ಮಲ್ನಾಡ್ ಸಂಗೀತ ನೀಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
    **Note:Hey! Would you like to share the story of the movie ಅಮೃತಮತಿ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X