ಆತ್ಮ ಕನ್ನಡ ಸಿನಿಮಾವನ್ನು
ಪ್ರಮೋದ್ ಎಸ್ ಆರ್ ನಿರ್ದೇಶನ ಮಾಡಿದ್ದಾರೆ. ವಿರಾಜ್ ಫಿಲ್ಮ ರೆಕಾರ್ಡಿಂಗ್ ಸ್ಟುಡಿಯೋ ಮಾಲೀಕ
ಅನಿಲ್ ಸಿ.ಆರ್ ಈ ಸಿನಿಮಾಗೆ ಕಥೆ ಬರೆದು, ನಿರ್ಮಿಸುವುದರ ಜೊತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ಕಾವ್ಯ ಆರ್.ವಿ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಸತೀಶ್ ಆರಾಧ್ಯ, ದಿವ್ಯ ಬೇಲೂರು, ಲಕ್ಷ್ಮೀ ಗೌಡ, ಪುಷ್ಪ ಪಿ.ಜೆ, ರ್ಯಾಬಿಟ್ ಶಿವ, ಎಲ್ಲೇಶ್ ಕುಮಾರ್ ಮೆಲವಂಕಿ ತಾರಾಗಣದಲ್ಲಿದ್ದಾರೆ. ನಿತೀನ್ ರಾಜ್ ಸಂಗೀತ, ರಣಧೀರ್ ನಾಯಕ ಛಾಯಾಗ್ರಹಣ ಹಾಗೂ ಆಯುರ್ ಸಂಕಲನವಿದೆ.
ಸಿನಿಮಾ ಕಥೆ: ಆರು ಸ್ನೇಹಿತರು ಪಾರ್ಟಿ ಮಾಡಲು ಒಂದು ಜಾಗಕ್ಕೆ ಹೋಗುತ್ತಾರೆ. ಆ ಗುಂಪಿನಲ್ಲಿರುವ ಒಬ್ಬಳು ಘೋಸ್ಟ್ ಹಂಟರ್. ಆಕೆಯ ಎಲ್ಲರನ್ನು ಭೂತದ ಮನೆಗೆ ಕರೆದುಕೊಂಡು ಹೋಗುತ್ತಾಳೆ. ಉಳಿದವರು ಪಾರ್ಟಿ ಮಾಡುವಾಗ ಆಕೆ ಘೋಸ್ಟ್ ಹಂಟ್ ಮಾಡುತ್ತಿರುತ್ತಾಳೆ. ಅಲ್ಲಿ ಸಿಗುವ ಆತ್ಮದಿಂದ 20 ವರ್ಷಗಳ ಹಿಂದಿನ ಭಯಾನಕ ಘಟನೆ ಅನಾವರಣಗೊಳ್ಳುತ್ತದೆ. ಅದೇನು? ಮುಂದೇನಾಗುತ್ತದೆ ಎಂಬುದೇ ಸಿನಿಮಾ ಕಥೆ.