twitter

    ಗುರು ಶಿಷ್ಯರು 1981 ಕಥೆ

    ಭಾರ್ಗವ ನಿರ್ದೇಶನದ ಗುರುಶಿಷ್ಯರು ಚಿತ್ರದಲ್ಲಿ ವಿಷ್ಣುವರ್ಧನ್, ಮಂಜುಳಾ, ಜಯಮಾಲಿನಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರವನ್ನು ದ್ವಾರಕೀಶ್ ನಿರ್ಮಿಸಿ ನಟಿಸಿದ್ದರು. ಉದಯ ಶಂಕರ್ ಚಿತ್ರದ ಸಂಭಾಷಣೆ ಜೊತೆ ಗೀತೆಗಳನ್ನು ಬರೆದಿದ್ದರು. ಈ ಚಿತ್ರ ಕನ್ನಡದ ಅತ್ಯದ್ಭುತ ಹಾಸ್ಯ ಚಿತ್ರವಾಗಿ ಗುರುತಿಸಿಕೊಂಡಿದೆ. ಚಿತ್ರದ ಹಾಡುಗಳು, ಪ್ರಮುಖವಾಗಿ ದೊಡ್ಡವರೆಲ್ಲಾ ಜಾಣರಲ್ಲ ಎಂಬ ಹಾಡು ತುಂಬಾ ಪ್ರಸಿದ್ಧಿಯಾಗಿತ್ತು. ಚಿತ್ರದಲ್ಲಿ ವಿಷ್ಣುವರ್ಧನ್ ಒಂದು ಆಸ್ಥಾನದ ರಾಜನಾಗಿ ಮತ್ತು ಪರಮ ಶಿವಭಕ್ತನಾಗಿ ನಟಿಸಿದ್ದರು.

    ಒಬ್ಬ ಪ್ರಕಾಂಡ ಗುರು ಮತ್ತು ಬ್ರಹ್ಮಜ್ಞಾನಿಗಳಾದ ಅವನ 12 ಜನ ಶಿಷ್ಯರು ಶಪಿತರಾಗಿ ಭೂಲೋಕದಲ್ಲಿ ಮತಿಹೀನರಾಗಿ ಜನಿಸುತ್ತಾರೆ. ಈ ಶಾಪನಿಮಿತ್ತ ಭೂಲೋಕಕ್ಕೆ ಬಂದ ಇವರು ಮಾಡುವ ಅವಾಂತರಗಳು ಮತ್ತು ಕೊನೆಗೆ ಶಾಪ ನಿವಾರಣೆಯನ್ನು ಚಿತ್ರ ಚಿತ್ರಿಸುತ್ತದೆ.

    **Note:Hey! Would you like to share the story of the movie ಗುರು ಶಿಷ್ಯರು 1981 with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X