ಶಂಕರನಾಗ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಅನಂತನಾಗ್ ಮತ್ತು ಜಯಂತಿ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಶಂಕರನಾಗ್,ಜಯಮಾಲಾ, ಮಂಜುಳಾ, ಟೈಗರ್ ಪ್ರಭಾಕರ್ ಮುಂತಾದ ಕಲಾವಿದರನ್ನೊಳಗೊಂಡ ಈ ಚಿತ್ರದ ಕಥೆಯನ್ನು ಶಂಕರನಾಗ್ ಬರೆದಿದ್ದರು.
ಚಿತ್ರದಲ್ಲಿ ಪುನರ್ಜನ್ಮದ ಕತೆಯನ್ನು ಹೇಳಲಾಗಿತ್ತು. ಇಳಯರಾಜ ಸಂಗೀತ ನಿರ್ದೇಶನದ ಈ ಚಿತ್ರದ ಎಲ್ಲ ಗೀತೆಗಳು ಸೂಪರ್ ಹಿಟ್ ಆಗಿದ್ದವು. ಅದರಲ್ಲೂ `ತಂಗಾಳಿಯಲ್ಲಿ ನಾನು ' ಹಾಡು ತುಂಬಾ ಪ್ರಸಿದ್ಧವಾಗಿತ್ತು. 1980 ರಲ್ಲಿ ಅತಿ ಹೆಚ್ಚು ಗಳಿಕೆ ಕನ್ನಡ ಚಿತ್ರಗಳಲ್ಲಿ ಈ ಚಿತ್ರವೂ ಒಂದು.