ಪೂರ್ಣಚಂದ್ರ ತೇಜಸ್ವಿಯವರ ಪ್ರಸಿದ್ಧ ಕಾದಂಬರಿ `ಜುಗಾರಿ ಕ್ರಾಸ್'ನ್ನು ಟಿ.ಎಸ್.ನಾಗಭರಣ ತೆರೆಗೆ ತರುತ್ತಿದ್ದಾರೆ. ಯುವಸಾಮ್ರಾಟ್ ಚೀರಂಜೀವಿ ಸರ್ಜಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಕಡ್ಡಿಪುಡಿ ಚಂದ್ರು `ಬನಶಂಕರಿ ಚಿತ್ರಾಲಯ'ದ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ.
ಜುಗಾರಿ ಕ್ರಾಸ್ ಕಾದಂಬರಿ ಒಂದು ದಿನದಲ್ಲಿ ನೆಡೆಯುವ ಘಟನೆಗಳಲ್ಲಿ ಒಂದು ಶತಮಾನದ ಇತಿಹಾಸವನ್ನು ಹೇಳುತ್ತದೆ. ವ್ಯಂಗ್ಯ ಮತ್ತು ವಿನೋದ ಈ ಕಾದಂಬರಿಯ ಧ್ವನಿಯಾಗಿದೆ. ಪರಸ್ಪರ ವೈರುಧ್ಯ ಘಟನೆಗಳ ಅಡಿಯಲ್ಲಿ ಬದುಕಿನ ಆಳವಾದ ಅರ್ಥದ ಅನ್ವೇಷಣೆ ಅಡಗಿದೆ.