ಚಿತ್ರದಲ್ಲಿ ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ ನಾಯಕರಾಗಿ ನಟಿಸಿದ್ದಾರೆ. ಮಲಯಾಳಂ ಭಾಷೆಯಲ್ಲಿ ತಯಾರಾದ ಈ ಚಿತ್ರ ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ. ಸುಮಾರು ನೂರು ಕೋಟಿ ಬಜೆಟ್ ನಲ್ಲಿ ಸಿದ್ಧವಾದ ಈ ಚಿತ್ರ ಬಜೆಟ್ ನಲ್ಲಿ ಮಲಯಾಳಂನ ಚಿತ್ರರಂಗದಲ್ಲಿಯೇ ದಾಖಲೆ ಮಾಡಿದೆ.
ಕಥೆ: ಚಿತ್ರದ ಕಥೆ 16 ನೇ ಶತಮಾನದಲ್ಲಿ ಕೇರಳದ ಕ್ಯಾಲಿಕಟ್ ನಲ್ಲಿ ತೆರೆದು ಕೊಳ್ಳುತ್ತದೆ. ಕುಂಜಾಲಿ ಮರಕ್ಕಾರ್ (ಮೋಹನ್ ಲಾಲ್) ಕ್ಯಾಲಿಕಟ್ ನ ಜಾಮೋರಿನ್ ದೊರೆಗಳ ಕೆಳೆಗೆ ಕೆಲಸ ಮಾಡುವ ನಾವಿಕ ಸೇನಾಧಿಪತಿ.ಇದಕ್ಕೂ ಮೊದಲು ಕುಂಜಾಲಿ ಪೋರ್ಚುಗೀಸ್ ದಾಳಿಯಲ್ಲಿ ತನ್ನ ತಂದೆ-ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು, ಹೇಗೋ ತನ್ನ ಚಿಕ್ಕಪ್ಪನ ಸಹಾಯದಿಂದ ಬದುಕುಳಿದಿರುತ್ತಾನೆ. ನಂತರ ಜಾಮೋರಿನ ದೊರೆಯು ತನ್ನ ಮುಖ್ಯ ಸೇನಾಧಿಪತಿ ಆನಂದನ್ ಮನಗಟ್ಟಚನ್ ಮಾತಿನಂತೆ `ಕುಂಜಾಲಿ'ಯನ್ನು ನಾವಿಕ ಪಡೆಯ ಸೇನಾಧಿಪತಿಯನ್ನಾಗಿ ಮಾಡಿರುತ್ತಾನೆ. ಮರಕ್ಕಾರ್ ಪ್ರಪ್ರಥಮ ಬಾರಿಗೆ ನಾವಿಕ ಸೇನೆಯನ್ನು ಸಿದ್ಧಪಡಿಸಿ ಕ್ಯಾಲಿಕಟ್ ನ್ನು ಪೋರ್ಚುಗೀಸ್ ರಿಂದ ಸುರಕ್ಷಿತಗೊಳಿಸಿದನು.ಈ ನಾವಿಕ ದಳ ಸುಮಾರು ಒಂದು ಶತಮಾನಗಳ ಕಾಲ ಪೋರ್ಚುಗೀಸ್ ರ ಆಕ್ರಮಣ ತಡೆಯಿತು.