twitter

    ಒಡೆಯ ಕಥೆ

    ಒಡೆಯ ಸಾಹಸ ಪ್ರಧಾನ ಚಿತ್ರವಾಗಿದೆ. ಖ್ಯಾತ ನಿರ್ದೇಶಕ ಎಂ.ಡಿ ಶ್ರೀಧರ್  ಚಿತ್ರ ನಿರ್ದೇಶಿಸಿದ್ದು ,ಬುಲ್-ಬುಲ್ ಚಿತ್ರದ ನಂತರ ಮತ್ತೊಮ್ಮೆ ದರ್ಶನ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಂದೇಶ ನಾಗಾರಾಜ ಚಿತ್ರಕ್ಕೆ ಬಂಡವಾಳ ಹೂಡಿದರೆ, ಚಿತ್ರದಲ್ಲಿ ನವಪ್ರತಿಭೆ ಕೊಡಗಿನ ಬೆಡಗಿ ಸನಾ ತಿಮ್ಮಯ್ಯ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಮೊದಲ ಟೀಸರ್ ಕನ್ನಡ ರಾಜ್ಯೋತ್ಸವಕ್ಕೆ ತೆರೆಗೆ ಬಂದಿತು.

    ಊರಿಗೆ ಎಲ್ಲಿರಿಗೂ ಬೇಕಾಗಿರುವ ವ್ಯಕ್ತಿ ಗಜೇಂದ್ರ. ತನ್ನ ನಾಲ್ಕು ಜನ ತಮ್ಮಂದಿರ ಜೊತೆ ಸೇರಿ ಊರಿನ ಜನೆ ಬೇಕು ಬೇಡುಗಳನ್ನು ನೋಡಿಕೊಳ್ಳುತ್ತಾ ಜನ ಪ್ರೀತಿಯನ್ನು ಗಳಿಸಿರುತ್ತಾನೆ. ಆದರೆ ಗಜನಿಗೆ ಮದುವೆ ಅಂದರೆ ಅಲರ್ಜಿ, ಬ್ಯಾಚಲರ್ ಆಗಿಯೇ ಇರಬೇಕೆಂದು ನಿರ್ಧರಿಸಿರುತ್ತಾನೆ. ಅವನಿಗೆ ಹೇಗಾದರೂ ಮಾಡಿ ಮದುವೆ ಮಾಡಬೇಕೆಂದು ತಮ್ಮಂದಿರು ನಿರ್ಧರಿಸುತ್ತಾರೆ. ಅವನ ಬಾಲ್ಯದ ಪ್ರೇಯಸಿಯ ಹೆಸರಿನ ಸಕ್ಕೂ  ಮೇಲೆ ಗಜನಿಗೆ ಪ್ರೀತಿ ಹುಟ್ಟುವಂತೆ ಮಾಡುತ್ತಾರೆ.

    ನಂತರ ನಾಯಕಿ ತನ್ನ ಕುಟುಂಬಕ್ಕೆ ಗಜನನ್ನು ಪರಿಚಯಸಿಲು ತನ್ನ ಊರಿಗೆ ಕರೆದೊಯ್ಯುತ್ತಾಳೆ. ಅಲ್ಲಿ ನಡೆಯುವ ವಿದ್ಯಮಾನಗಳೇನು...ನಾಯಕಿಯ ಹಿನ್ನಲೆ ಏನು..ಎಂಬುದು ಚಿತ್ರದ ಕಥಾವಸ್ತು.

    ಚಿತ್ರದಲ್ಲಿ ಪಂಕಜ್, ನಿರಂಜನ್, ಸಮರ್ಥ್ ಮತ್ತು ಯಶಸ್ ದರ್ಶನ್ ನಾಲ್ಕು ಸಹೋದರರಾಗಿ ನಟಿಸಿದ್ದಾರೆ.ಚಿತ್ರದ ಮೊದಲ ಹಂತದ ಶೂಟಿಂಗ್ ಮೈಸೂರಿನಲ್ಲಿ ಜರುಗಿದರೆ, ಎರಡನೇ ಹಂತದ ಚಿತ್ರೀಕರಣ ಹೈದರಾಬಾದಿನಲ್ಲಿ ನೆಡೆಯಿತು.
    **Note:Hey! Would you like to share the story of the movie ಒಡೆಯ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X