ರಾಜಮಾರ್ತಾಂಡ (2023)(U/A)
ರಾಜಮಾರ್ತಾಂಡ ಕಥೆ
ಕೆ ರಾಮನಾರಾಯಣ ನಿರ್ದೇಶನದಲ್ಲಿ ಮೂಡಿಬಂದಿರುವ ರಾಜಮಾರ್ತಾಂಡ ಚಿತ್ರದಲ್ಲಿ ಚಿರಂಜೀವಿ ಸರ್ಜಾ, ದೀಪ್ತಿ ಸತಿ ಮತ್ತು ತ್ರಿವೇಣಿ ರಾವ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದಿವ್ಯಾ ಎನ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ ಜನ್ಯ ಸಂಗೀತವಿದೆ. ದೇವರಾಜ್, ವಿನೀತ್ ಕುಮಾರ್ ಪ್ರಮುಖ ಪೋಷಕ ವರ್ಗದಲ್ಲಿ ನಟಿಸಿದ್ದಾರೆ.
ಚಿತ್ರದ ಡಬ್ಬಿಂಗ್ ಮುಂಚೆಯೇ ಚಿರು ನಿಧನರಾಗಿದ್ದರಿಂದ, ಈ ಚಿತ್ರದಲ್ಲಿ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ.
ಕಥೆ: ಸಿನಿಮಾದ ನಾಯಕ ಬಡ ಕುಟುಂಬದಿಂದ ಬಂದ ವ್ಯಕ್ತಿ. ಅಜ್ಜಿಯೇ ಈ ಹೀರೊನನ್ನು ಸಾಕುತ್ತಾಳೆ. ಆದರೆ, ರಾಜನ ಕಥೆಯನ್ನು ಹೇಳುತ್ತಲೇ ಬೆಳೆಸುತ್ತಾಳೆ. ಅದೇ ನಾಯಕನ ಮನಸ್ಸಿನಲ್ಲಿ ನಾನು ರಾಜನಾಗಬೇಕು ಅನ್ನೋ ಆಸೆ ಬೆಳೆದುಕೊಂಡೇ ಬರುತ್ತೆ. ರಾಜನಂತೆಯೇ ಆಗಾಗ ವರ್ತನೇ ಮಾಡುವುದಕ್ಕೆ ಶುರು ಮಾಡುತ್ತಾನೆ. ಹೀಗೊಮ್ಮೆ ಫೈಟಿಂಗ್ ಸನ್ನಿವೇಶ ಬಂದಾಗ, ತಾನು ಬಡ ಕುಟುಂಬದವನು ಅಲ್ಲ. ರಾಜಮನೆತನದ ವ್ಯಕ್ತಿ ಅನ್ನೋದು ಹೀರೊಗೆ ಗೊತ್ತಾಗುತ್ತೆ. ಅದಲ್ಲಿಂದ 'ರಾಜಮಾರ್ತಾಂಡ'ನ ಅಸಲಿ ಕಥೆ ಆರಂಭವಾಗುತ್ತೆ.