ಕೆ ಶಿವರುದ್ರಯ್ಯ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ರಾಜೇಶ್ ನಟರಂಗ, ಸೋನು ಗೌಡ, ಸುಧಾ ಬೆಳವಾಡಿ, ಭಾರ್ಗವಿ ನಾರಾಯಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲನಟ ಮಾಸ್ಟರ್ ಆ್ಯರೆನ್ ಚಿತ್ರದ ಮುಖ್ಯ ಪಾತ್ರಧಾರಿ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಕೆ ಕಲ್ಯಾಣ ಸಾಹಿತ್ಯದ ಜೊತೆಗೆ ಸಂಗೀತ ನೀಡಿದ್ದಾರೆ. ಗಿರೀಶ್ ಕಾಸರವಳ್ಳಿ ಸಂಭಾಷಣೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಸ್ಟ್ರೋಯ್ನಿ ಜೋಸೆಫ್ ಪಾಯ್ಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಚಿತ್ರ ರಾಮ ಎಂಬ ಪುಟ್ಟ ಬಾಲಕನ ಪಯಣವನ್ನು ಹೇಳುತ್ತದೆ. ರಾಮ ತನ್ನ ತಾಯಿ ಮತ್ತು ಅಜ್ಜಿಯ ಜೊತೆ, ತಂದೆಯಿಂದ ದೂರವಾಗಿ ವಾಸವಾಗಿರುತ್ತಾನೆ. ಊರಿನ ಜಾತ್ರೆಯಲ್ಲಿ ಆಕಸ್ಮಾತ್ ತನ್ನ ತಂದೆಯನ್ನು ಮೊದಲ ಬಾರಿ ಭೇಟಿಯಾಗುತ್ತಾನೆ. ಒಡೆದು ಹೋದ ಕುಟುಂಬವನ್ನು ಜೋಡಿಸಲು ರಾಮ ಹೇಗೆ ಸೇತುವೆಯಾಗುತ್ತಾನೆ ಎಂಬುದು ಚಿತ್ರದ ಮುಂದಿನ ಕಥೆ.
ಈ ಚಿತ್ರ 2018 ನೇ ಸಾಲಿನ ಕರ್ನಾಟಕ ರಾಜ್ಯ ದ್ವಿತೀಯ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆಯಿತು.