ರಂಗಸ್ಥಳ (2019)(U/A)
ರಂಗಸ್ಥಳ ಕಥೆ
ತೆಲುಗಿನ ರಂಗಸ್ಥಲಂ ಚಿತ್ರ ಕನ್ನಡದಲ್ಲಿ ರಂಗಸ್ಥಳ ಹೆಸರಿನಿಂದ ತೆರೆಕಾಣುತ್ತಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮಚರಣ್ ತೇಜಾ ನಾಯಕನಾಗಿ ನಟಿಸಿದ್ದಾರೆ.ನಾಯಕಿಯಾಗಿ ಸಮಂತಾ ಅಕ್ಕಿನೇನಿ ನಟಿಸಿದ್ದರೆ, ಪ್ರಮುಖ ಪಾತ್ರವೊಂದರಲ್ಲಿ ಅನಸೂಯ ಭಾರಧ್ವಾಜ್ ನಟಿಸಿದ್ದಾರೆ. ಇನ್ನುಳಿದಂತೆ ಪ್ರಕಾಶರಾಜ್ ಮತ್ತು ಜಗಪತಿ ಬಾಬು ಖಳನ ಪಾತ್ರದಲ್ಲಿ ಕಾಣಿಸಿಕೊಂಡಲರೆ , ನಟಿ ಪೂಜಾ ಹೆಗಡೆ ಒಂದು ನೃತ್ಯವೊಂದರಲ್ಲಿ ನರ್ತಿಸಿದ್ದಾರೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತವಿದೆ.ಈ ಚಿತ್ರದ ಸ್ಯಾಟಲೈಟ್ ಹಕ್ಕು ಉದಯ ವಾಹಿನಿ ಪಡೆಯಿತು.
ಕಥೆ
ಕಿಟ್ಟಿ (ರಾಮಚರಣ್) ಊರಿನಲ್ಲಿ ಎಲ್ಲರಿಗೆ ಬೇಕಾದ ಯುವಕ, ಅದರೆ ಸ್ವಲ್ಪ ಕಿವುಡ. ಎಲ್ಲವನ್ನೂ ಜೋರಾಗಿ ಚೀರಿ ಹೇಳಬೇಕು. ಒಂದು ದಿನ ಹಾವನ್ನು ಹೊಡೆಯಲು ಬೆನ್ನತ್ತಿ ಹೋದಾಗ ,ರಾಮಲಕ್ಷ್ಮಿಯನ್ನು ನೋಡಿ ಪ್ರೀತಿಯಲ್ಲಿ ಬೀಳುತ್ತಾನೆ. ಕಿಟ್ಟಿ ಅಣ್ಣ ರಮೇಶ್ ದುಬೈಯಿಂದ ಊರಿಗೆ ಬಂದಾಗ, ಊರಿನಲ್ಲಿ ಪಂಚಾಯಿತಿ ಅಧ್ಯಕ್ಷನ ಆಧ್ಯಕ್ಷತೆಯಲ್ಲಿ ನೆಡೆಯುವ ದಬ್ಬಾಳಿಕೆಗಳನ್ನು ಪ್ರತಿಭಟಿಸುತ್ತಾನೆ. ಹಾಗೇ ಅವನ್ನನು ಮಟ್ಟ ಹಾಕಲು ತಾನು ಪಂಚಾಯಿತಿ ಚುನಾವಣೆಗೆ ನಿಲ್ಲುತ್ತಾನೆ.
ರಮೇಶ್ ತನ್ನ ಪ್ರಯತ್ನದಲ್ಲಿ ಯಶಸ್ಸು ಪಡೆಯುತ್ತಾನಾ? ಹೇಗೆ ಕಿಟ್ಟಿ ತನ್ನ ಅಣ್ಣನಿಗೆ ನೆರವಾಗಿ ನಿಲ್ಲುತ್ತಾನೆ ಎಂಬುದು ಚಿತ್ರದ ಮುಂದಿನ ಕಥೆ.