ರಾಜಗುರು ಹೊಸಕೋಟೆ ನಿರ್ದೇಶನದ `ಸಮಯದ ಹಿಂದೆ ಸವಾರಿ' ಚಿತ್ರದಲ್ಲಿ ರಾಹುಲ್ ಹೆಗಡೆ ನಾಯಕನಾಗಿ ನಟಿಸಿದ್ದಾರೆ. ಗಾಂಚಾಲಿ ಚಿತ್ರದಲ್ಲಿ ನಟಿಸಿದ್ದ ಪ್ರಕೃತಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕ ರಾಹುಲ್ ಹೆಗಡೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಗುರು ನಿರ್ದೇಶನ ಮಾತ್ರವಲ್ಲದೇ ಚಿತ್ರಕ್ಕೆ ಸಾಹಿತ್ಯ ಬರೆದು ಸಂಗೀತ ಕೂಡ ನೀಡಿದ್ದಾರೆ.ಈ ಚಿತ್ರ ಖ್ಯಾತ ಸಿನಿ ಪತ್ರಕರ್ತ ಮತ್ತು ಸಾಹಿತಿ ಜೋಗಿಯವರ `ನದಿಯ ನೆನಪಿನ ಹಂಗು" ಕೃತಿ ಆಧಾರಿತವಾಗಿದೆ.
ಚಿತ್ರದ ಕಥೆ ಉಪ್ಪಿನಂಗಡಿ ಎಂಬ ಕರಾವಳಿ ಊರಿನಲ್ಲಿ ಆರಂಭವಾಗುತ್ತದೆ. ನಿರಂಜನ ಎಂಬ ವ್ಯಕ್ತಿಯ ಕೊಲೆಯಾಗುತ್ತದೆ. ಇತನ ಕೊಲೆಯ ಹಿಂದಿನ ರಹಸ್ಯವನ್ನು ಬೇಧಿಸಲು ಇವನ ಗೆಳೆಯರು ಹೊರುಡುತ್ತಾರೆ. ಇವರ ತನಿಖೆ ಒಂದು ಹಂತಕ್ಕೆ ಮಟ್ಟುವ ಹೊತ್ತಿಗೆ ಕೊಲೆಯಾದ ನಿರಂಜನ ಮತ್ತೆ ಪ್ರತ್ಯಕ್ಷನಾಗುತ್ತಾನೆ.ಈ ಎಲ್ಲ ಘಟನೆಗಳ ಕಾರಣವೇನು ಎಂಬುದು ಚಿತ್ರದ ಕತೆ.