ಶಿವಾಜಿ ಸುರತ್ಕಲ್ (2020)(U/A)
Release date
21 Feb 2020
genre
ಶಿವಾಜಿ ಸುರತ್ಕಲ್ ಕಥೆ
ರಮೇಶ್ ಅರವಿಂದ್ ಈ ಚಿತ್ರದಲ್ಲಿ ಡಿಟೆಕ್ಟಿವ್ ಪಾತ್ರವನ್ನು ಮಾಡಿದ್ದಾರೆ. ಎರಡು ಶೇಡ್ ಇರುವ ಪಾತ್ರವನ್ನು ಮಾಡಿರುವ ರಮೇಶ್ಗೆ ರಾಧಿಕಾ ಚೇತನ್ ಮತ್ತು ಆರೋಹಿ ನಾರಾಯನನ್ ಸಾಥ್ ನೀಡುತ್ತಾರೆ. .ಚಿತ್ರದ ಬಹತೇಕ ಚಿತ್ರೀಕರಣ ಮಡಿಕೇರಿಯಲ್ಲಿ ಆಗಿದೆ. ಆಕಾಶ್ ಶ್ರೀವತ್ಸ ಚಿತ್ರವನ್ನು ನಿರ್ದೇಶಿಸಿದ್ದರೆ, ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ. ತನಿಖಾಧಿಕಾರಿ ಕಥಾನಾಯಕ ಶಿವಾಜಿ ವಿಚಿತ್ರ ಶೈಲಿಯಲ್ಲಿ ಪ್ರಕರಣಗಳನ್ನು ಭೇದಿಸುತ್ತಿರುತ್ತಾನೆ. ರಾಧಿಕಾ ಚೇತನ್ ರಮೇಶ್ ಪತ್ನಿ ಪಾತ್ರದಲ್ಲಿ ನಟಿಸಿದ್ದರೆ, ಆರೋಹಿ ನಾರಾಯಣ್ ಮನೋವೈದ್ಯೆ ಪಾತ್ರದಲ್ಲಿ ಮಿಂಚಿದ್ದಾರೆ.
ರಣಗಿರಿಯ ರೆಸಾರ್ಟ್ ನಲ್ಲಿ ಮಂತ್ರಿ ಮಗನ ಕೊಲೆಯೊಂದು ನಡೆಯುತ್ತದೆ. ಆ ಕೊಲೆಯನ್ನು ತನಿಖೆ ಮಾಡಲು ಅಧಿಕಾರಿಯ ಆಗಮನ ಆಗುತ್ತದೆ. ಆತನೇ ಶಿವಾಜಿ ಸುರತ್ಕಲ್. ಶಿವಾಜಿ ಸುರತ್ಕಲ್ ಒಬ್ಬ ಚಾಣಕ್ಷ ತನಿಖಾಧಿಕಾರಿ. ಆತನ 101ನೇ ಕೇಸ್ ಮಂತ್ರಿ ಮಗನ ಸಾವು. ಆತನ ಕೆರಿಯರ್ ನಲ್ಲಿಯೇ ಇಂತಹ ಕೇಸ್ ನೋಡಿರುವುದಿಲ್ಲ. ಈ ಕೇಸ್ ಹಿಂದೆ ಬೀಳುವ ಶಿವಾಜಿ ಹೇಗೆ ಅದನ್ನು ನಿಭಾಹಿಸುತ್ತಾನೆ ಎನ್ನುವುದು ಸಿನಿಮಾದ ಮುಖ್ಯ ಕಥೆ.
ರಣಗಿರಿಯ ರೆಸಾರ್ಟ್ ನಲ್ಲಿ ಮಂತ್ರಿ ಮಗನ ಕೊಲೆಯೊಂದು ನಡೆಯುತ್ತದೆ. ಆ ಕೊಲೆಯನ್ನು ತನಿಖೆ ಮಾಡಲು ಅಧಿಕಾರಿಯ ಆಗಮನ ಆಗುತ್ತದೆ. ಆತನೇ ಶಿವಾಜಿ ಸುರತ್ಕಲ್. ಶಿವಾಜಿ ಸುರತ್ಕಲ್ ಒಬ್ಬ ಚಾಣಕ್ಷ ತನಿಖಾಧಿಕಾರಿ. ಆತನ 101ನೇ ಕೇಸ್ ಮಂತ್ರಿ ಮಗನ ಸಾವು. ಆತನ ಕೆರಿಯರ್ ನಲ್ಲಿಯೇ ಇಂತಹ ಕೇಸ್ ನೋಡಿರುವುದಿಲ್ಲ. ಈ ಕೇಸ್ ಹಿಂದೆ ಬೀಳುವ ಶಿವಾಜಿ ಹೇಗೆ ಅದನ್ನು ನಿಭಾಹಿಸುತ್ತಾನೆ ಎನ್ನುವುದು ಸಿನಿಮಾದ ಮುಖ್ಯ ಕಥೆ.
**Note:Hey! Would you like to share the story of the movie ಶಿವಾಜಿ ಸುರತ್ಕಲ್ with us? Please send it to us ([email protected]).