ಟೈಗರ್ ಪ್ರಭಾಕರ್ ನಿರ್ದೇಶನದ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕಿಂಕರನಾಗಿ ನಟಿಸಿದರೆ, ಪ್ರಭಾಕರ್ ಯಮನಾಗಿ ಘರ್ಜಿಸುತ್ತಾರೆ. ವಜ್ರಮುನಿ, ಮುಖ್ಯಮಂತ್ರಿ ಚಂದ್ರು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಭೂಲೋಕದ ಒಂದು ಹುಡುಗಿಯ ಆತ್ಮವನ್ನು ತರಲು ಯಮ (ಟೈಗರ್ ಪ್ರಭಾಕರ್) ತನ್ನ ಕಿಂಕರ (ವಿಷ್ಣವರ್ಧನ್) ನನ್ನು ಕಳಿಸುತ್ತಾನೆ. ಆದರೆ ಕಿಂಕರ ಆ ಹುಡುಗಿಯ ಮೇಲಲೆ ಪ್ರೀತಿ ಮೂಡುತ್ತದೆ. ತನ್ನ ವೇಷ ಬದಲಿಸಿ ಭೂಮಿಯಲ್ಲಿ ಮಾನವರಂತೆ ಇದ್ದು ಆ ಯುವತಿಯನ್ನು ತನ್ನ ಪ್ರೇಮಪಾಶದಲ್ಲಿ ವಹಿಸಿಕೊಂಡು ಯಮಪಾಶವನ್ನು ದೂರವಿರುಸುತ್ತಾನೆ.ಆ ಹುಡುಗಿಯ ಆತ್ಮವನ್ನು ಕರೆದೊಯ್ಯಲು ಕೊನೆಗೆ ಯಮನೇ ಭೂಮಿಗೆ ಬರುತ್ತಾನೆ. ಇಲ್ಲಿಂದ ಯಮ ಮತ್ತು ಕಿಂಕರನ ಆಟ ಪ್ರಾರಂಭವಾಗುತ್ತದೆ.