ಗೋವಿಂದ್ ದಾಸರ್ ನಿರ್ದೇಶಿಸಿ ಸಂಕಲಿಸಿರುವ ಈ ಚಿತ್ರದಲ್ಲಿ ರೂರಲ್ ಅಂಜನ್ ನಾಯಕನಾಗಿ ನಟಿಸಿದ್ದರೆ, ಸೋನು ಪಾಟೀಲ್ ಮತ್ತು ಶಿಲ್ಪಾ ಶೈಲೇಶ್ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರಕ್ಕೆ ಶಿವು ಬೆರ್ಗಿ ಸಂಗೀತವಿದ್ದರೆ, ಹರೀಶ್ ಜಿಂದೆ ಛಾಯಾಗ್ರಹಣವಿದೆ.
ಕಥೆ: ದೀಪು ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಳ್ಳುವುದರಿಂದ, ಕುಟುಂಬದ ಜವಾಬ್ದಾರಿ ಅವನ ಹೆಗಲ ಮೇಲೆ ಬೀಳುತ್ತದೆ. ಜೀವನೋಪಾಯಕ್ಕಾಗಿ ಅಟೋ ಗ್ಯಾರೇಜ್ ನಲ್ಲಿ ಕೆಲಸ ಮಾಡಲು ತೊಡಗುತ್ತಾನೆ. ತನ್ನ ಕುಟುಂಬವನ್ನು ರೌಡಿಗಳಿಂದ ರಕ್ಷಿಸಿಕೊಳ್ಳಲು ವಿಶಿಷ್ಟವಾಗಿ ವರ್ತಿಸುವ ಇವನು ಯರ್ರಾಬಿರ್ರಿ ಎಂದು ಹೆಸರು ಪಡೆಯುತ್ತಾನೆ.