X
ಹೋಮ್ ಚಲನಚಿತ್ರಗಳ ಒಳನೋಟ

ಬೆಂಕಿಯಲ್ಲಿ ಅರಳಿದ ಹೂವು to ಉರ್ವಿ: ಕನ್ನಡದಲ್ಲಿ ಮೂಡಿಬಂದ ಅತ್ಯುತ್ತಮ ಮಹಿಳಾ ಪ್ರಧಾನ ಸಿನಿಮಾಗಳಿವು!

Author Administrator | Updated: Thursday, March 7, 2024, 02:54 PM [IST]

ಮಹಿಳಾ ಶಕ್ತಿ ಮತ್ತು ಸಮಾನತೆಗಾಗಿ ಹಲವಾರು ಹೋರಾಟಗಳು ನಡೆದಿವೆ. ಸಿನಿಮಾರಂಗ ಕೂಡ ನಾರಿ ಶಕ್ತಿಯನ್ನು ಹೋರ ಹಾಕಲು ಒಂದು ಪ್ರಬಲ ಮಾಧ್ಯಮ. ಇಲ್ಲಿ ಕನ್ನಡದ ಪ್ರಮುಖ ಮಹಿಳಾ ಕೇಂದ್ರಿತ ಚಲನಚಿತ್ರಗಳನ್ನು ನೀಡಿದೆ.


cover image
ಬೆಂಕಿಯಲ್ಲಿ ಅರಳಿದ ಹೂವು
1

ಕೆ ಬಾಲಚಂದರ್ ನಿರ್ದೇಶನದಲ್ಲಿ ಮೂಡಿಬಂದ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಸುಹಾಸಿನಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಕಮಲ್ ಹಾಸನ್, ಜೈ ಜಗದೀಶ್ ಮತ್ತು ಶರತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ತನ್ನ ತಾಯಿ, ತಂಗಿಯಂದಿರು, ಅಣ್ಣ ಮತ್ತು ಅವನ ಕುಟುಂಬವನ್ನು ಸಾಕುವ ಜವಾಬ್ದಾರಿ ಹೊರುವ ಕವಿತಾ ತನ್ನ ಸ್ವಂತ ಬದುಕನ್ನೇ ತ್ಯಾಗ ಮಾಡುತ್ತಾಳೆ.

Hasina
2

ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ಹಸೀನಾ ಚಿತ್ರದಲ್ಲಿ ತಾರಾ ಅನುರಾಧ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕೆ ತಾರಾ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಈ ಚಿತ್ರ ಮುಸ್ಲಿಮ್ ಯುವತಿಯೊಬ್ಬಳ ಗಂಡನಿಂದ ತೊರೆಯಲ್ಪಟ್ಟು ಮೂರು ಮಕ್ಕಳ ಜೊತೆ ಹೇಗೆ ಹಲವು ಕಷ್ಟಕ್ಕೆ ಒಳಗಾಗುತ್ತಾಳೆ ಎಂಬ ಕಥೆಯನ್ನು ಹೊಂದಿತ್ತು.

Munnudi
3

ಪಿ ಶೇಷಾದ್ರಿ ನಿರ್ದೇಶನದಲ್ಲಿ ಮೂಡಿಬಂದ ಮುನ್ನುಡಿ ಚಿತ್ರದಲ್ಲಿ ತಾರಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಶರಿಯಾ ಕಾನೂನುಗಳನ್ನು ತನ್ನಿಷ್ಟದಂತೆ ಬಳಿಸಿಕೊಂಡು ಹೇಗೆ ಮುಸ್ಲಿಮ್ ಯುವತಿಯರ ಮೇಲೆ ಶೋಷಣೆ ಮಾಡಲಾಗುತ್ತದೆ ಎಂಬುದನ್ನು ಈ ಚಿತ್ರ ತೋರಿಸಿತ್ತು. ಸ್ವಲ್ಪ ದಿನಗಳ ಕಾಲ ವಿಹಾರಕ್ಕೆ ಬಂದ ಅರಬ್ ನನ್ನು ಮದುವೆಯಾಗಿ ಮುಂದೆ ಹಲವಾರು ವರ್ಷಗಳ ಕಾಲ ಮರು ಮದುವೆಗೆ ಒಪ್ಪದೇ ಅವನ ನಿರೀಕ್ಷೆಯಲ್ಲಿಯೇ ಕಾಯುವ ಮಹಿಳೆಯ ಪಾತ್ರದಲ್ಲಿ ತಾರಾ ನಟಿಸಿದ್ದರು.

Gulabi Talkies
4

ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ `ಗುಲಾಬಿ ಟಾಕೀಸ್' ಚಿತ್ರದ ನಟನೆಗಾಗಿ ಉಮಾಶ್ರೀ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಮತ್ತು ಓಸಿಯಾನ್ ಫಿಲ್ಮ್ಸ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಈ ಚಿತ್ರದಲ್ಲಿ `ಗುಲಾಬಿ' ಎಂಬ ಮುಸ್ಲಿಮ್ ಮಹಿಳೆಯ ಪಾತ್ರದಲ್ಲಿ ಉಮಾಶ್ರೀ ಮನೋಘ್ನವಾದ ಅಭಿನಯ ನೀಡಿದ್ದರು. ಚಿತ್ರದ ಕಥೆ ಕುಂದಾಪುರದ ಸುತ್ತವಿರುವ ಬೆಸ್ತರ ಸುತ್ತಮುತ್ತ ಹೆಣೆದಿತ್ತು.

ದ್ವೀಪ
5

ಗಿರೀಶ್ ಕಾಸರವಳ್ಳಿ ನಿರ್ದೇಶನದ ದ್ವೀಪ ಚಿತ್ರದಲ್ಲಿ ದಿವಗಂತ ನಟಿ ಸೌಂದರ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಎರಡು ರಾಷ್ಟ್ರ ಪ್ರಶಸ್ತಿ, ನಾಲ್ಕು ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು ಮೂರು ಸೌಥ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿತ್ತು. ಮಳೆಯಿಂದಾಗಿ ಮುಳುಗುತ್ತಿರುವ ದ್ವೀಪದಿಂದ ಸ್ಥಳಾಂತರವಾಗಲು ಇಚ್ಚಿಸಿದ ಕುಟುಂಬದ ಕಥೆಯನ್ನು ಈ ಚಿತ್ರ ಹೊಂದಿತ್ತು.

ಹೆಬ್ಬೆಟ್ ರಾಮಕ್ಕ
6

ಹೆಬ್ಬೆಟ್ ರಾಮಕ್ಕ ಚಿತ್ರದಲ್ಲಿ ತಾರಾ ಮತ್ತು ದೇವರಾಜ ಪ್ರಮುಖ ಪಾತ್ರದಲ್ಲಿ ನಟಸಿದ್ದರು. ಎನ್.ಆರ್.ನಂಜುಂಡೇಗೌಡ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಅಕ್ಷರ ಜ್ಞಾನವಿರದ ರಾಮಕ್ಕ ಹೇಗೆ ರಾಜಕೀಯವಾಗಿ ಬೆಳೆಯುತ್ತಾಳೆ ಎಂಬ ಕಥೆಯನ್ನು ಹೊಂದಿತ್ತು. 65 ನೇ ರಾಷ್ಟೀಯ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಪಡೆಯಿತು.

Puttakkana Highway
7

ಬಿ ಸುರೇಶ್ ನಿರ್ದೇಶನದಲ್ಲಿ ಮೂಡಿಬಂದ ಪುಟ್ಟಕ್ಕನ ಹೈವೇ ಚಿತ್ರದಲ್ಲಿ ಶೃತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ರವರ ಕಾದಂಬರಿ ಆಧಾರಿತ ಈ ಚಿತ್ರ ಅಭಿವೃದ್ದಿಗಾಗಿ ಮಾಡುವ ಭೂ ಕಬಳಿಕೆಯ ಒಳಿತು ಮತ್ತು ಕೆಡಕನ್ನು ಮನೋಘ್ನವಾಗಿ ಕಟ್ಟಿ ಕೊಟ್ಟಿತು.

ತಾಯಿ ಸಾಹೇಬ
8

ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ಮೂಡಿಬಂದ ತಾಯಿ ಸಾಹೇಬ ಚಿತ್ರ ರಂಗನಾಥ ಶ್ಯಾಮರಾವ್ ಲೋಕಾಪುರ ಅವರ ಕಾದಂಬರಿ ಆಧಾರಿತವಾಗಿತ್ತು. ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಜೈಮಾಲಾ ಮತ್ತು ಸುರೇಶ್ ಹೆಬ್ಳೀಕರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರ ಸ್ವಾಂತಂತ್ರ ಪೂರ್ವ ಮತ್ತು ನಂತರದ ಕಾಲಘಟ್ಟದ ಚಿತ್ರಣವನ್ನು ನೀಡುತ್ತದೆ. 45 ನೇ ರಾಷ್ಟೀಯ ಪ್ರಶಸ್ತಿಯಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು.

ಕಿರಗೂರಿನ  ಗಯ್ಯಾಳಿಗಳು
9

ಡಿ. ಸುಮನಾ ಕಿತ್ತೂರ್ ನಿರ್ದೇಶನದಲ್ಲಿ ಮೂಡಿಬಂದ ಕಿರಿಗೂರಿನ ಗಯ್ಯಾಳಿಗಳು ಚಿತ್ರ ಪೂರ್ಣಚಂದ್ರ ತೇಜಸ್ವಿಯವರು ಬರೆದ ಇದೇ ಹೆಸರಿನ ಕಾದಂಬರಿ ಆಧಾರಿತವಾಗಿತ್ತು. ಶ್ವೇತಾ ಶ್ರೀವಾತ್ಸವ್, ಸುಕೃತಾ ವಾಗ್ಲೆ, ಕಾರುಣ್ಯಾ ರಾಮ್, ಕಿಶೋರ್ , ಅಚ್ಯುತ್ ಕುಮಾರ್, ಸೋನು ಗೌಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ನಾತಿಚರಾಮಿ
10

ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ `ಹರಿವು' ನಿರ್ದೇಶಕ ಮನಸೋರೆರವರ ಎರಡನೇ ಚಿತ್ರ `ನಾತಿಚರಾಮಿ'. ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಮತ್ತು ನಾಯಕಿ ಶೃತಿ ಹರಿಹರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಶೀರ್ಷಿಕೆ ನಾತಿಚರಾಮಿಯ ಅರ್ಥ `ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ' ಎಂಬುದು. ದಾಂಪತ್ಯಕ್ಕೆ ಕಾಲಿಡುವ ಸಮಯದಲ್ಲಿ ಜೋಡಿಗಳು ಧರ್ಮ,ಅರ್ಥ,ಕಾಮದಲ್ಲೂ ನಾನು ಪ್ರತಿಜ್ಞಾಬದ್ಧನಾಗಿರುತ್ತೇನೆ ಎಂಬ ಕಂಕಣ ತೊಡುತ್ತಾರೆ. ಆದರೆ, ಆ ಪ್ರತಿಜ್ಞೆಗೆ ಎಷ್ಟು ಜನ ಬದ್ಧರಾಗಿರುತ್ತಾರೆ ಮತ್ತು ವಾಸ್ತವ ಜೀವನದಲ್ಲಿ ಅದರ ವ್ಯಾಪ್ತಿ ಎಷ್ಟು ಎಂಬುದನ್ನು ಮನಸೋರೆ ಸೂಕ್ಷವಾಗಿ ಚಿತ್ರಿಸಿದ್ದಾರೆ. ಹೆಣ್ಣಿನ ಬಚ್ಚಿಟ್ಟ ಭಾವನೆಗಳು ಸಂಕೋಚದ ಬೇಲಿ ದಾಟಿ ಬಂದಾಗ ಸಮಾಜ ಅದನ್ನು ಸ್ವೀಕರಿಸುವ ರೀತಿಯನ್ನು ಚಿತ್ರ ಸೂಕ್ಷವಾಗಿ ಪ್ರಶ್ನಿಸುತ್ತದೆ. 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಸಿನಿಮಾ ಐದು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಶ್ರುತಿ ಹರಿಹರನ್ ಕೂಡ ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. 

 

ಉರ್ವೀ
11

ಉರ್ವಿ ಸಿನಿಮಾದಲ್ಲಿ ನಟಿ ಶ್ರುತಿ ಹರಿಹರನ್ ಅದ್ಭುತವಾಗಿ ನಟಿಸಿದ್ದರು. ಈ ಚಿತ್ರ ಮಹಿಳಾ ಶೋಷಣೆಯ ನಾನಾ ಮುಖಗಳನ್ನ ಬಿಚ್ಚಿಟ್ಟರೂ, ಪ್ರಧಾನ ಕಥಾವಸ್ತು ವೇಶ್ಯಾವಾಟಿಕೆಯ ಜಾಲ. ಕೆಲ ಕಾರಣಗಳಿಂದಾಗಿ ಸಿನಿಮಾ ನೋಡಗನ ಮನಸಿನಾಳಕ್ಕೆ ಇಳಿಯುತ್ತದೆ. ಚಿತ್ರಕಥೆ, ಸಿನಿಮಾಟೋಗ್ರಫಿ, ಹಿನ್ನಲೆ ಸಂಗೀತ ಉರ್ವಿಯ ಜೀವಾಳ. ಮೊದಲರ್ಧ ನೋವಿನ ಕಾವ್ಯದಂತೆ ಹಿಂಡಿದರೆ, ಕ್ಲೈಮ್ಯಾಕ್ಸ್ ಬರುತ್ತಿದ್ದಂತೆಯೇ ಕ್ರಾಂತಿಗೀತೆ ಆಗಿಬಿಡುತ್ತೆ. ಇಡೀ ಸಿನಿಮಾವನ್ನ ಶ್ರುತಿ ಹರಿಹರನ್ ಆವರಿಸಿಕೊಂಡಿದ್ದರು. ಶ್ವೇತಾ ಪಂಡಿತ್ ಮತ್ತು ಶ್ರದ್ಧಾ ಶ್ರೀನಾಥ್ ನಟನೆಯ ಗಟ್ಟಿಯಾದ ಜುಗಲ್ ಬಂದಿ ಈ ಸಿನಿಮಾದಲ್ಲಿತ್ತು. 

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+