X
ಹೋಮ್ ಚಲನಚಿತ್ರಗಳ ಒಳನೋಟ

ಸಾಂಗ್ಲಿಯಾನ ಟು ಕೆಂಪೇಗೌಡ: ಖಾಕಿ ಖದರ್ ತೋರಿಸಿದ ಕನ್ನಡದ ಅತ್ಯುತ್ತಮ ಪೊಲೀಸ್ ಸಿನಿಮಾಗಳಿವು!

Author Sowmya Bairappa | Published: Tuesday, September 26, 2023, 01:15 PM [IST]

ಕನ್ನಡದಲ್ಲಿ ಹಲವಾರು ಪೊಲೀಸ್ ಸಿನಿಮಾಗಳು ತೆರೆಗೆ ಬಂದುವೆ. ಭಾರತದ ಮೊದಲ ಬಾಂಡ್ ಚಿತ್ರ ಜೇಡರಬಲೆ ಕನ್ನಡದಲ್ಲಿ ತಯಾರಾಗಿದ್ದು ವಿಶೇಷವೇ ಸರಿ. ವರಟನ ಡಾ.ರಾಜ್‌ಕುಮಾರ್ ಹಲವು ಚಿತ್ರಗಳಲ್ಲಿ ಸಿ.ಐ.ಡಿ ಆಫೀಸರ್ ಆಗಿ ಬಾಂಡ್ ಶೈಲಿಯ ಚಂದನವನಕ್ಕೆ ಬಾಂಡ್ ಚಿತ್ರಗಳನ್ನು ಪರಿಚಯಿಸಿದರು. ನಂತರ ವಿಷ್ಣುವರ್ಧನ್, ಪ್ರಭಾಕರ್, ಅಂಬರೀಶ್ ಸೇರಿದಂತೆ ಹಲವು ನಟರು ಪೊಲೀಸ್ ಪಾತ್ರಗಳಲ್ಲಿ ಮಿಂಚಿ ಯಶಸ್ವಿಯಾದರು. ಕನ್ನಡದಲ್ಲಿ ಪೊಲೀಸ್ ಚಿತ್ರಗಳಿಗೆ ಒಂದು ಗತ್ತು ತಂದುಕೊಟ್ಟ ಕೀರ್ತಿ ಶಂಕರನಾಗ್ ಅವರಿಗೆ ಸಲ್ಲುತ್ತದೆ. ಸಾಂಗ್ಲಿಯಾನ, ಸಿಬಿಐ ಶಂಕರ್, ಸುಂದರಕಾಂಡ ಮುಂತಾದ ಚಿತ್ರಗಳ ಮೂಲಕ ಪೊಲೀಸ್ ಪವರ್‌ ಅನ್ನು ತೆರೆಮೇಲೆ ಚಿತ್ರಿಸಿದ್ದು ಶಂಕರನಾಗ್. ಆಮೇಲೆ ಕೆಲ ವರ್ಷಗಳ ನಂತರ ಸಾಯಿಕುಮಾರ್ ತಮ್ಮ ಕಂಚಿನ ಕಂಠ ಮತ್ತು ಖಡಕ್ ಡೈಲಾಗ್‌ಗಳ ಮೂಲಕ ಯಶಸ್ವಿ ಚಿತ್ರಗಳನ್ನು ನೀಡಿದರು. ಹೀಗೆ ಕನ್ನಡದಲ್ಲಿ ತೆರೆಕಂಡ ಕೆಲ ಅಪೂರ್ವ ಪೊಲೀಸ್ ಸಿನಿಮಾಗಳನ್ನು ಕೆಳಗೆ ನೀಡಲಾಗಿದೆ.


cover image
ಟೈಗರ್ 1986

ಕನ್ನಡ ಚಿತ್ರರಂಗದ ಧೀಮಂತ ನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿದ್ದ ಟೈಗರ್ ಪ್ರಭಾಕರ್ ಕಿರಾತಕ, ಮುತ್ತೈದೆ ಬಾಗ್ಯ, ಸಿ.ಬಿ.ಐ ಶಿವ ಮುಂತಾದ ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದರು. ಆದರೆ, ಅವರಿಗೆ 'ಟೈಗರ್' ಬಿರುದು ತಂದುಕೊಟ್ಟ ಸಿನಿಮಾ ಟೈಗರ್. ರವಿರಾಜಾ ನಿರ್ದೇಶನದಲ್ಲಿ ಮೂಡಿಬಂದ 'ಟೈಗರ್' ಸಿನಿಮಾದಲ್ಲಿ ನಟ ಪ್ರಭಾಕರ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದರು. ಚಿತ್ರದಲ್ಲಿ ಪ್ರಭಾಕರ್ ಕೆಲಸಕ್ಕೆ ಆದ್ಯತೆ ನೀಡುವ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಅವರು ಖಳನಾಯಕರ ವಿರುದ್ಧ ಹೋರಾಡುವ ಸಂದರ್ಭದಲ್ಲಿ ತನ್ನ ಮಗಳನ್ನು ಕಳೆದುಕೊಳ್ಳುತ್ತಾರೆ. ಬಳಿಕ ಆ ಖಳನಾಯಕನನ್ನು ಮುಗಿಸುವ ಮೂಲಕ ತನ್ನ  ಗುರಿಯನ್ನು ಸಾಧಿಸುತ್ತಾನೆ. ಈ ಪಾತ್ರ ಪ್ರಭಾಕರ್ ವೃತ್ತಿ ಜೀವನಕ್ಕೆ ಉತ್ತಮ ತಿರುವು ನೀಡಿತ್ತು. 

ಸಾಂಗ್ಲಿಯಾನ

ಶಂಕರ್ ನಾಗ್ ನಟನೆಯ 'ಸಾಂಗ್ಲಿಯಾನ' ಸಿನಿಮಾ ಗೊತ್ತಿಲ್ಲದವರೇ ಇಲ್ಲ. ಶಂಕರ್ ನಾಗ್ ಇನ್ಸ್‌ಪೆಕ್ಟರ್ ಸಾಂಗ್ಲಿಯಾನ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.  ಮಾರುವೇಷದಲ್ಲಿ ಬಂದು ದುಷ್ಟರ ಜಾಲವನ್ನು ಅರಿತ ನಿಷ್ಟಾವಂತ ಮತ್ತು ನಿಷ್ಟುರ ಪೊಲೀಸ್ ಅಧಿಕಾರಿ ಸಾಂಗ್ಲಿಯಾನ, ನಂತರ ಅವರನ್ನೆಲ್ಲ ಕಂಬಿ ಹಿಂದೆ ಕಳಿಸುವಲ್ಲಿ ಹೇಗೆ ಯಶಸ್ವಿಯಾಗುತ್ತಾನೆ ಎಂಬುದು ಚಿತ್ರದ ಕಥೆ. ಈ ಚಿತ್ರದಲ್ಲಿ ಪೊಲೀಸರ ದೈನಂದಿನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಹಾಗೂ ಅವರು ತಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ತೋರಿಸಲಾಗಿತ್ತು. ಈ ಸಿನಿಮಾದ ಮೂಲಕ ಖಡಕ್ ಪೊಲೀಸ್ ಅಧಿಕಾರಿ ಮತ್ತು ರಾಜಕಾರಣಿ ಹೆಚ್.ಟಿ.ಸಾಂಗ್ಲಿಯಾನರ ಹೆಸರನ್ನು ಶಂಕರನಾಗ್ ಅಜರಾಮರ ಮಾಡಿದ್ದರು. 

ಇಂದ್ರಜಿತ್

ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ ಇಂದ್ರಜಿತ್ ಸಿನಿಮಾ ಕೂಡ ಪ್ರೇಕ್ಷಕರ ಮನೆಗೆದ್ದಿತ್ತು. ಚಿತ್ರದಲ್ಲಿ ಇಂದ್ರಜಿತ್ (ಅಂಬರೀಶ್) ಒಂದು ಉನ್ನತ ವ್ಯಕ್ತಿಗಳ ಕೈವಾಡವಿರುವ ಕೇಸನ್ನು ತನಿಖೆ ಮಾಡಲು ಹೋಗಿ, ಗೊತ್ತಿಲ್ಲದೇ ತಾನುಕೂಡ ಅವರ ಜಾಲಕ್ಕೆ ಬಲಿಯಾಗಿ ಜೈಲು ಸೇರುತ್ತಾನೆ. ನಂತರ ಹೇಗೆ ಅವರನ್ನು ಸೆದೆ ಬಡಿಯುತ್ತಾನೆ ಎಂಬ ಕಥೆ ಹೆಣೆಯಲಾಗಿತ್ತು. ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕು ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿತ್ತು. ಚಿತ್ರದ ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ ಗೀತೆ ಇನ್ನೂ ಕೂಡ ಹಸಿರಾಗಿದೆ. ಈ ಹಾಡನ್ನು ಮರೆಯಲು ಸಾಧ್ಯವೇ ಇಲ್ಲ. 

ಇನ್ಸ್‌ಪೆಕ್ಟರ್ ವಿಕ್ರಮ್ 1989

ಪೊಲೀಸ್ ಅಧಿಕಾರಿ ಎಂದರೆ ಕೇವಲ ಸೀರಿಯಸ್ ಆಗಿ ಇರಬೇಕು ಎನ್ನುವ ಸಿದ್ಧ ಸೂತ್ರವನ್ನು ಮುರಿದು ಒಬ್ಬ ಪೊಲೀಸ್ ಅಧಿಕಾರಿ ಅಜಾಗರೂಕನಾಗಿ ಹಾಸ್ಯ ಮಾಡುತ್ತಾ ಮತ್ತು ರೋಮಿಯೋ ಕೂಡ ಆಗಿ ತನ್ನ ಕರ್ತವ್ಯ ನಿರ್ವಹಿಸಬಲ್ಲ ಎಂಬುದನ್ನು ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರ ತೋರಿಸಿತು.  

ಶಾಂತಿ ಕ್ರಾಂತಿ

ಕ್ರೇಜಿಸ್ಟಾರ್ ರವಿಚಂದ್ರನ್ ಕಥೆ ಬರೆದು ನಿರ್ಮಾಣ ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿದ ಚತುರ್ಭಾಷಾ ಸಿನಿಮಾ ಶಾಂತಿ ಕ್ರಾಂತಿ. ಕನ್ನಡದಲ್ಲಿ ರವಿಚಂದ್ರನ್ ನಾಯಕನಾಗಿ, ತೆಲುಗಿನಲ್ಲಿ ನಾಗಾರ್ಜುನ ನಾಯಕನಾಗಿ, ಹಿಂದಿ ಮತ್ತು ತಮಿಳುವಿನಲ್ಲಿ ರಜಿನಿಕಾಂತ್ ನಾಯಕನಾಗಿ ನಟಿಸಿದರು. ತುಂಬಾ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ನೆಲ ಕಚ್ಚಿತು. ಆದರೆ, ಚಿತ್ರದ ತಾಂತ್ರಿಕತೆಗೆ ರವಿಚಂದ್ರನ್ ಪ್ರಶಸ್ತಿ ಪಡೆದಿದ್ದರು.

 

ನಿಷ್ಕರ್ಷ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಜಯಸಿಂಹ, ಪೊಲೀಸ್ ಮತ್ತು ದಾದಾ, ಕದಂಬ, ದಾದಾ ಮುಂತಾದ ಚಿತ್ರಗಳಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ, ನಿಷ್ಕರ್ಷ ಕನ್ನಡದ ಮೊದಲ ಕಮಾಂಡೋ ಆಪರೇಷನ್ ಉಳ್ಳ ಚಿತ್ರ. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಕಮಾಂಡೋ ಅಜಯ್ ಕುಮಾರ್ ಆಗಿ ಮನೋಘ್ನವಾಗಿ ನಟಿಸಿದ್ದರು. 

 

ಸರ್ಕಲ್ ಇನ್ಸ್‌ಪೆಕ್ಟರ್

ಡೈನಾಮಿಕ್ ಹೀರೋ ದೇವರಾಜ್ ಹಾಗೂ ಕನಸಿನ ರಾಣಿ ಮಾಲಾಶ್ರೀ ಅಭಿನಯದ ಸರ್ಕಲ್ ಇನ್ಸಪೆಕ್ಟರ್ ಸಿನಿಮಾದಲ್ಲಿ ಒಬ್ಬ ನಿಷ್ಠುರ ಮತ್ತು ಶಾರ್ಟ್ ಟೆಂಪರ್ ಪೊಲೀಸ್ ಅಧಿಕಾರಿ, ಕ್ರಿಮಿನಲ್‌ಗಳ ವಿರುದ್ಧ ಹೋರಾಡುವ ತನ್ನ ಭಿನ್ನ ರೀತಿಗಳಿಂದ ಸಚಿವರಿಂದ ಪದೇ ಪದೇ ನಿಂದನೆಗೆ ಒಳಗಾಗುತ್ತಿರುತ್ತಾನೆ. ನಂತರ ಬ್ಲ್ಯಾಕ್ ಟೈಗರ್ ಎಂಬ ಕ್ರಿಮಿನಲ್ ಅನ್ನು ಇವನು ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಚಿತ್ರದ ಕಥೆ. 

 

ನಟ ಅಂಬರೀಶ್ ಅವರಿಗೆ ರೆಬೆಲ್ ಸ್ಟಾರ್ ಇಮೇಜ್ ತಂದುಕೊಟ್ಟ ಸಿನಿಮಾ 'ಅಂತ'. ಈ ಚಿತ್ರದಲ್ಲಿ ರಾಜಕಾರಣಿಗಳು ಮತ್ತು ಸರ್ಕಾರದ ಬಗ್ಗೆ ತೋರಿಸಲಾಗಿತ್ತು. ವಿಶೇಷ ಕಥಾಹಂದರ ಹೊಂದಿದ್ದ ಅಂತ ಸಿನಿಮಾ ಸೂಪರ್ ಹಿಟ್ ಆಯಿತು. ಇನ್ಸ್‌ಪೆಕ್ಟರ್  ಸುಶೀಲ್ ಕುಮಾರ್ ಮತ್ತು ದರೋಡೆಕೋರ ಕನ್ವರ್ ಲಾಲ್ ಆಗಿ ದ್ವಿಪಾತ್ರದಲ್ಲಿ ಅಂಬರೀಶ್ ನಟಿಸಿದ್ದರು. ಈ ಸಿನಿಮಾದಲ್ಲಿ ಅಂಬರೀಶ್ ರಾಜಕಾರಣಿಗಳ ಭ್ರಷ್ಟತೆಯನ್ನು ಬಯಲಿಗೆಳೆಯಲು ದರೋಡೆಕೋರನಂತೆ ನಟಿಸಿದ್ದರು.  ಜೊತೆಗೆ ಪೊಲೀಸ್ ಅಧಿಕಾರಿಯೊಬ್ಬ ತನ್ನ ಪ್ರಾಣವನ್ನೆ ಪಣಕ್ಕಿಟ್ಟು ವೃತ್ತಿಜೀವನಕ್ಕೆ ಧಕ್ಕೆ ತರುವ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಹೇಗೆ ಮಟ್ಟ ಹಾಕುತ್ತಾನೆ ಎಂದು ತೋರಿಸಲಾಗಿತ್ತು.  ಈ ಸಿನಿಮಾದಲ್ಲಿ ಅವರ ಕನ್ವರ್ ಲಾಲ್ ಪಾತ್ರವಂತೂ ಮರೆಯಲು ಸಾಧ್ಯವೇ ಇಲ್ಲ. 'ಅಂತ' ಅಂಬರೀಶ್ ವೃತ್ತಿ ಬದುಕಿಗೆ ದೊಡ್ಡ ತಿರುವು ನೀಡಿತ್ತು.  

 

ಪೋಲಿಸ್ ಸ್ಟೋರಿ

ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಮೂಡಿಬಂದ ಪೊಲೀಸ್ ಸ್ಟೋರಿ ಚಿತ್ರದಲ್ಲಿ ಸಾಯಿಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಕನ್ನಡ ಮಾತ್ರವಲ್ಲದೇ ತೆಲಗು ಮತ್ತು ತಮಿಳು ಡಬ್ ವರ್ಷನ್‌ಗಳಲ್ಲಿ ಕೂಡ ಚಿತ್ರ ಅಪೂರ್ವ ಜಯಭೇರಿ ಬಾರಿಸಿತು. ಒಬ್ಬ ನಿಷ್ಠುರ ಮತ್ತು ಶಾರ್ಟ್ ಟೆಂಪರ್ ಪೊಲೀಸ್ ಅಧಿಕಾರಿ ಅಗ್ನಿ ಕ್ರಿಮಿನಲ್‌ಗಳ ವಿರುದ್ಧ ಹೋರಾಡುವ ಭಿನ್ನ ರೀತಿಗಳಿಂದ ಸಚಿವರಿಂದ ಪದೇ ಪದೇ ನಿಂದನೆಗೆ ಒಳಗಾಗುತ್ತಿರುತ್ತಾನೆ. ಬಳಿಕ ಬ್ಲ್ಯಾಕ್ ಟೈಗರ್ ಎಂಬ ಕ್ರಿಮಿನಲ್ ಅನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಚಿತ್ರದ ಕಥೆ. ಈ ಸಿನಿಮಾದಲ್ಲಿ ಸಾಯಿಕುಮಾರ್ ಅದ್ಭುತವಾಗಿ ನಟಿಸಿದ್ದು, ಸಿನಿಮಾ ಸೂಪರ್ ಹಿಟ್ ಆಗಿತ್ತು. ಚತ್ರದಲ್ಲಿ ಅವರ ಡೈಲಾಗ್‌ಗಳಂತೂ ಇಂದಿಗೂ ಕೂಢ ಪ್ರಸ್ತುತ.   

ಶಬ್ದವೇಧಿ

ವರನಟ ಡಾ.ರಾಜ್‌ಕುಮಾರ್ ಅವರ ವೃತ್ತಿಜೀವನದ ಕೊನೆಯ ಚಿತ್ರ ಶಬ್ದವೇಧಿ. ಒಡಹುಟ್ಟಿದವರು ಬಳಿಕ ಸುಮಾರು ಆರು ವರ್ಷಗಳ ನಂತರ ಡಾ.ರಾಜ್‌ಕುಮಾರ್ ಈ ಸಿನಿಮಾದಲ್ಲಿ ನಟಿಸಿದ್ದರು. ಅಣ್ಣಾವ್ರು ತಮ್ಮ ಕೊನೆಯ ಚಿತ್ರವಾದ ಶಬ್ಧವೇಧಿಯಲ್ಲಿ ಮಾದಕ ವಸ್ತುಗಳ ಜಾಲವನ್ನು ಭೇದಿಸುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಡ್ರಗ್ಸ್ ಮಾಫಿಯಾಗೆ ಯುವಜನತೆ ಬಲಿಯಾಗುತ್ತಿರುವ ಸಮಸ್ಯೆಯ ವಿರುದ್ಧ ಹೋರಾಡುವ ಪೊಲೀಸ್ ಅಧಿಕಾರಿಯ ಕಥೆ ಇದು. ಪೊಲೀಸ್ ಅಧಿಕಾರಿ ಡ್ರಗ್ಸ್ ಮಾಫಿಯಾವನ್ನೇ ಬುಡಸಮೇತ ಕಿತ್ತು ಹಾಕಬೇಕು ಅಂತ ಹೋರಾಡುತ್ತಿದ್ದರೆ, ಇತ್ತ ಮನೆಯಲ್ಲಿ ತನ್ನ ಮಗನೇ ಡ್ರಗ್ಸ್ ದಾಸನಾಗುತ್ತಾನೆ. ಎಸ್ ನಾರಾಯಣ್ ನಿರ್ದೇಶನದ ಈ ಚಿತ್ರ  'ಡ್ರಗ್ಸ್' ಕಾಲೇಜು ವಿದ್ಯಾರ್ಥಿಗಳನ್ನು ಹೇಗೆ ಹಾಳು ಮಾಡುತ್ತಿದೆ ಎಂಬುದನ್ನು ವಿಭಿನ್ನವಾಗಿ ತೋರಿಸುತ್ತದೆ.

 

ಅಗ್ನಿ ಐ.ಪಿ.ಎಸ್

ಆನಂದ್ ಪಿ ರಾಜು ನಿರ್ದೇಶನದಲ್ಲಿ ಮೂಡಿಬಂದ ಅಗ್ನಿ ಐಪಿಎಸ್ ಚಿತ್ರದಲ್ಲಿ ಸಾಯಿಕುಮಾರ್ ಸಾಯಿಕುಮಾರ್ 'ಅಗ್ನಿ' ಹೆಸರಿನ ಮುಂಗೋಪಿ ಮತ್ತು ನಿಷ್ಠುರ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದರು. ತನ್ನ ಸಹೋದ್ಯೋಗಿ ಮತ್ತು ಸ್ನೇಹಿತನನ್ನು ಕಳೆದುಕೊಂಡ ಅಗ್ನಿ ನಗರದ ದೊಡ್ಡ ರೌಡಿ ಕೊತ್ವಾಲ್ ಎಂಬುವವನನ್ನು ಹೇಗೆ ಮಟ್ಟ ಹಾಕುತ್ತಾನೆ ಎಂಬುದೇ ಚಿತ್ರದ ಕಥೆ. ಈ ಸಿನಿಮಾದ ಸಾಯಿಕುಮಾರ್ ಡೈಲಾಗ್‌ಗಳು ಸಿಕ್ಕಾಪಟ್ಟೆ ಹಿಟ್ ಆಗಿದ್ದವು. 

 

ಅಯ್ಯ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲ ಬಾರಿಗೆ ಖಾಕಿ ತೊಟ್ಟ ಚಿತ್ರ ಅಯ್ಯ. ಈ ಚಿತ್ರಕ್ಕೆ ರವಿಚಂದ್ರನ್ ಸಂಗೀತ ನೀಡಿದ್ದು, ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದರು. ಈ ಚಿತ್ರ ಅಭೂತಪೂರ್ವ ಪ್ರತಿಕ್ರಿಯೆ ಪಡೆದು ಶತದಿನೋತ್ಸವ ಆಚರಿಸಿತ್ತು. ಸಿನಿಮಾದಲ್ಲಿ ದರ್ಶನ್‌ಗೆ ರಕ್ಷಿತಾ ನಾಯಕಿಯಾಗಿ ಬಣ್ಣ ಹಚ್ಚಿದ್ದರು. 

 

ವೀರ ಮದಕರಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸಿದ್ದ 'ವೀರ ಮದಕರಿ'  ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಪೂರೈಸಿತ್ತು. ಸುದೀಪ್ ಅವರೇ ನಿರ್ದೇಶಿಸಿ, ನಟಿಸಿದ್ದ ಈ ಸಿನಿಮಾದ ತೆಲುಗಿನ ವಿಕ್ರಮಾರ್ಕುಡು ರಿಮೇಕ್. ಚಿತ್ರದಲ್ಲಿ ಸುದೀಪ್ 'ಮದಕರಿ ಮತ್ತು ಮುತ್ತತ್ತಿ ಸತ್ಯರಾಜು' ಎಂಬ ಎರಡು ಪಾತ್ರ ಮಾಡಿದ್ದರು. ಒಂದರಲ್ಲಿ  ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಒನ್ನೊಂದರಲ್ಲಿ ಕಳ್ಳನ ಪಾತ್ರ ಮಾಡಿದ್ದರು.  ಬಾಕ್ಸಾಫೀಸ್‌ನಲ್ಲೂ ಸಿನಿಮಾ ಸಖತ್ ಸದ್ದು ಮಾಡಿತ್ತು.  

 

ಕೆಂಪೇಗೌಡ

ತಮಿಳಿನ `ಸಿಂಗಂ' ಚಿತ್ರದ ರಿಮೇಕ್ ಆದ 'ಕೆಂಪೇಗೌಡ' ಸಿನಿಮಾದಲ್ಲಿ ಸುದೀಪ್ ಖಡಕ್ ಪೋಲಿಸ್ ಅಧಿಕಾರಿಯಾಗಿ ಮಿಂಚಿದ್ದರು. ಜೊತೆಗೆ ಈ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿದ್ದರು. 8 ಕೋಟಿ ಬಜಟ್‌ನಲ್ಲಿ ನಿರ್ಮಿಸಿದ್ದ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಸುಮಾರು 38 ಕೋಟಿ ಗಳಿಸಿ ಅದ್ಭುತ ಯಶಸ್ಸು ಕಂಡಿತ್ತು. ಈ ಚಿತ್ರದ ಮೂಲಕ ರವಿಶಂಕರ್ ಎಂಬ ನಟಭಯಂಕರ ಖಳನಾಯಕ ಕನ್ನಡಕ್ಕೆ ದೊರೆತರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+