X
ಹೋಮ್ ಚಲನಚಿತ್ರಗಳ ಒಳನೋಟ

ಸೃಜನ್ ಲೋಕೇಶ್ ಅವರಿಂದ ಹನುಮಂತವರೆಗೆ: ಬಿಗ್‌ಬಾಸ್ ಮನೆಯಲ್ಲಿ ತಮ್ಮ ಸ್ವಭಾವದಿಂದಲೇ ವೀಕ್ಷಕರ ಹೃದಯ ಗೆದ್ದ ಸ್ಪರ್ಧಿಗಳಿವರು!

Author Sowmya Bairappa | Updated: Friday, January 24, 2025, 09:40 AM [IST]

ಸದ್ಯ ಬಿಗ್‌ಬಾಸ್‌ ಕನ್ನಡ ಸೀಸನ್ ೧೧ರ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದು ವಾರ ಬಾಕಿಯಿದೆ. ಜನವರಿ ೨೬ರಂದು ಫಿನಾಲೆ ನಡೆಯಲಿದೆ ಎನ್ನಲಾಗುತ್ತಿದೆ. ಪ್ರತಿ ಬಾರಿಯ ಬಿಗ್‌ಬಾಸ್‌ ಸೀಸನ್‌ನಲ್ಲೂ ಒಂದಷ್ಟು ವಿವಾದಗಳು ಹುಟ್ಟಿಕೊಳ್ಳುತ್ತವೆ. ಚಿಕ್ಕ-ಚಿಕ್ಕ ವಿಷಯಕ್ಕೆ ಸ್ಪರ್ಧಿಗಳ ನಡುವಿನ ಕಿತ್ತಾಟ ಹಾಗೂ ಕೂಗಾಟವನ್ನು ನಾವು ಗಮನಿಸಿದ್ದೇವೆ. ಅದರಲ್ಲಿ ಕೆಲವರು ಮಾತ್ರ ತಾಳ್ಮೆಯಿಂದಿದ್ದು ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸ್ಪರ್ಧಿಗಳು ಯಾರು ಮಾಹಿತಿ ಇಲ್ಲಿದೆ.


cover image
ಸೃಜನ್ ಲೋಕೇಶ್
1

ಸದ್ಯ ನಿರೂಪಕರಾಗಿ ಹಾಗೂ ತೀರ್ಪುಗಾರರಾಗಿ ಕಿರುತೆರೆಯಲ್ಲಿ ಛಾಫು ಮೂಡಿಸುತ್ತಿರುವ ಸೃಜನ್ ಲೋಕೇಶ್, ಎಷ್ಟೆಲ್ಲಾ ಕಾಮಿಡಿ ಮಾಡುತ್ತಾರೆ ಅಂತ ಕನ್ನಡ ಜನತೆಗೆ ಬಹಳ ಚೆನ್ನಾಗಿ ಗೊತ್ತು.ಚಬಿಗ್‌ಬಾಸ್ ಕನ್ನಡ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ಸೃಜನ್, ಎಲ್ಲಾ ಸ್ಪರ್ಧಿಗಳ ಜೊತೆ ತುಂಬಾ ಚೆನ್ನಾಗಿ ಬೆರೆಯುತ್ತಿದ್ದರು. ಜೊತೆಗೆ ಎಲ್ಲಾ ಟಾಸ್ಕ್‌ಗಳಲ್ಲೂ ಸಿಕ್ಕಾಪಟ್ಟೆ ಆಕ್ಷಿವ್ ಆಗಿರುತ್ತಿದ್ದರು. ಆಗಾಗ ಕಾಮಿಡಿ ಮಾಡುತ್ತಾ ಉಳಿದ ಸ್ಪರ್ಧಿಗಳನ್ನು ನಗಿಸುತ್ತಿದ್ದರು. ಇವರಿಗೇನೇ ಟ್ರೋಫಿ ಸಿಗಬೇಕು ಎಂಬುದು ಹಲವರ ಒತ್ತಾಯ ಕೂಡ ಆಗಿತ್ತು.  

ವಿಜಯ್ ರಾಘವೇಂದ್ರ
2

ಹಸನ್ಮುಖಿ ವಿಜಯ್ ರಾಘವೇಂದ್ರ ಕೂಡ ಬಿಗ್‌ಬಾಸ್ ಕನ್ನಡ ಸೀಸನ್ ಒಂದರಲ್ಲಿ ಭಾಗವಹಿಸಿದ್ದರು. ದೊಡ್ಮನೆಯ ಟಾಸ್ಕ್‌ಗಳಲ್ಲಿ ಸಕ್ರಿಯವಾಗಿದ್ದ ಇವರು, ಎಂದೂ ಕೂಡ ಅತಿಯಾಗಿ ಮಾತನಾಡಿಲ್ಲ. ಜೊತೆಗೆ ಯಾರ ಬಗ್ಗೆಯೂ ಕಾಮೆಂಟ್ ಮಾಡ್ತಿರಲಿಲ್ಲ. ಇವರು ಕೋಪ ಮಾಡಿಕೊಂಡಿದ್ದು ಬಹಳ ಕಡಿಮೆ. ಸೌಮ್ಯ ಸ್ವಭಾವದಿಂದಲೇ ಪ್ರೇಕ್ಷಕರ ಮನೆಗೆದ್ದಿದ್ದ ವಿಜಯ್ ರಾಘವೇಂದ್ರ, ಆ ಸೀಸನ್‌ನ ವಿನ್ನರ್ ಆಗಿದ್ದರು.  

ದೀಪಿಕಾ ದಾಸ್
3

ನಾಗಿಣಿ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಮನಗೆದ್ದಿದ್ದ ದೀಪಿಕಾ ದಾಸ್, ಬಿಗ್‌ಬಾಸ್ ಸೀಸನ್ 7ರಲ್ಲಿ ಭಾಗವಹಿಸಿದ್ದರು. ದೊಡ್ಮನೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಮಾತನಾಡುತ್ತಿದ್ದ ಇವರು, ಯಾರ ಬಗ್ಗೆಯೂ ಸುಖಾಸುಮ್ಮನೆ ಕಾಮೆಂಟ್ ಮಾಡುತ್ತಿರಲಿಲ್ಲ. ಅಡುಗೆವಇರಲಿ, ಡ್ಯಾನ್ಸ್ ಇರಲಿ ಹಾಗೂ ಟಾಸ್ಕ್ ಯಾವುದೇ ಇರಲಿ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದರು. ಜೊತೆಗೆ ಯಾವುದೇ ವಿವಾದ ಮಾಡಿಕೊಳ್ಳುತ್ತಿರಲಿಲ್ಲ. 

ಅರವಿಂದ್ ಕೆ.ಪಿ
4

ಬಿಗ್‌ಬಾಸ್‌ ಸೀಸನ್ 8ರಲ್ಲಿ ಭಾಗವಹಿಸಿದ್ದ ಬೈಕರ್ ಅರವಿಂದ್ ಕೆ.ಪಿ ಕನ್ನಡಿಗರ ಮನಗೆಲ್ಲವಲ್ಲಿ ಯಶಸ್ವಿಯಾಗಿದ್ದರು. ಪ್ರಶಾಂತ್ ಸಂಬರಗಿ ಸೇರಿ ಕೆಲ ಮಂದಿಯ ಹತ್ತಿರವಷ್ಟೇ ಜಗಳವಾಡಿದ್ದರು. ಅದರ ಹೊರತಾಗಿ ಅರವಿಂದ್ ಟಾಸ್ಕ್‌ಗಳಲ್ಲಿ ಭಾಗವಹಿಸುವುದು, ಬೇರೆಯವರನ್ನು ಕೇರ್ ಮಾಡುವುದು ಹಾಗೂ ವಿಧೇಯ ಗುಣವೇ ವೀಕ್ಷಕರ ಹೃದಯ ಗೆದ್ದಿತ್ತು. ಅವರು  ಬಿಗ್‌ಬಾಸ್‌ ಸೀಸನ್ ೮ರ ಟ್ರೋಫಿ ಗೆಲ್ಲಬೇಕು ಎಂಬುದು ಹಲವರ ಆಶಯವಾಗಿತ್ತು. 


ಅರುಣ್ ಸಾಗರ್
5

ಬಿಗ್‌ಬಾಸ್ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ಬಹುಮುಖ ಪ್ರತಿಭೆ ಅರುಣ್ ಸಾಗರ್ ದೊಡ್ಮನೆಯಲ್ಲಿ ಎಲ್ಲಾ ಸ್ಪರ್ಧಿಗಳ ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಒಂದು ನಿಮಿಷವೂ ಸುಮ್ಮನೆ ಕೂರದ ಇವರು, ಸಖತ್ ಆಕ್ಟಿವ್ ಆಗಿರುತ್ತಿದ್ದರು. ಬಿಗ್‌ಬಾಸ್ ಮನೆಯಲ್ಲಿ ಅವರ ಕ್ರಿಯೇಟಿವಿಟಿ ನೋಡಿದ್ದ ಹಲವರು, ಅವರಿಗೆ ಟ್ರೋಫಿ ಸಿಗಬೇಕಿತ್ತು ಎಂದುಕೊಂಡಿದ್ದರು. 

ಶೃತಿ
6

ಬಿಗ್‌ಬಾಸ್ ಕನ್ನಡ ಸೀಸನ್ 3ರಲ್ಲಿ ಭಾಗವಹಿಸಿದ್ದ ಹಿರಿಯ ನಟಿ ಶ್ರುತಿ ಎಲ್ಲರೊಂದಿಗೆ ಹೊಂದಿಕೊಂಡು ತುಂಬಾ ಚೆನ್ನಾಗಿದ್ದರು. ಅಡುಗೆ ಮನೆಯಿಂದ ಹಿಡಿದು ಎಲ್ಲಾ ಟಾಸ್ಕ್‌ಗಳಲ್ಲಿಯೂ ಮುಂದಾಳತ್ವ ವಹಿಸುತ್ತಿದ್ದರು. ಅವರು ಉಳಿದ ಸ್ಪರ್ಧಿಗಳ ಜೊತೆಗೆ ಕಿರಿಕ್ ಮಾಡಿಕೊಂಡಿದ್ದು ತುಂಬಾನೇ ಕಡಿಮೆ. ಅನೇಕರು ರಿಯಲ್ ಶ್ರುತಿಯವರನ್ನು ನೋಡಿ ಇಷ್ಟಪಟ್ಟಿದ್ದರು, ಜೊತೆಗೆ ಶ್ರುತಿ ಆ ಸೀಸಸ್‌ನ ಟ್ರೋಫಿ ಕೂಡ ಗೆದ್ದಿದ್ದರು.  


ವೈಷ್ಣವಿ ಗೌಡ
7

ಬಿಗ್‌ಬಾಸ್ ಮನೆಯಲ್ಲಿ ನಟಿ ವೈಷ್ಣವಿ ಗೌಡ ಅವರ ತಾಳ್ಮೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಯಾರಿಗಾದರೂ ಇಷ್ಟೆಲ್ಲಾ ತಾಳ್ಮೆ ಇರೋಕೆ ಸಾಧ್ಯನಾ? ಅನ್ನುವಷ್ಟರಮಟ್ಟಿಗಿದ್ದರು. ಯಾವ ವಿಚಾರಕ್ಕೂ ಅಷ್ಟಾಗಿ ಪ್ರತಿಕ್ರಿಯಿಸದ ವೈಷ್ಣವಿ, ಒಮ್ಮೆ ಮಾತ್ರ ಪ್ರಶಾಂತ್ ಸಂಬರಗಿ ಮೇಲೆ ಕೋಪಕೊಂಡಿದ್ದರು. ಟಾಸ್ಕ್‌ವೊಂದರಕ್ಕೆ ಪ್ರಶಾಂತ್ ನೂಕಿದ್ದಕ್ಕೆ ಸಿಟ್ಟಾಗಿ ಏರುಧ್ವನಿಯಲ್ಲಿ ಮಾತನಾಡಿದ್ದರು.


ಹನುಮಂತ ಲಮಾಣಿ
8

ಸದ್ಯ ನಡೆಯುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 11 ಮುಕ್ತಾಯದ ಹಂತಕ್ಕೆ ತಲುಪಿದೆ. ಈ ಸೀಸನ್‌ನಲ್ಲಿ ವೈಲ್ಡ್‌ಕಾರ್ಡ್ ಸ್ಪರ್ಧಿ ಹನುಮಂತು ಪ್ರೇಕ್ಷಕರ ಮನಗೆದ್ದಿದ್ದಾರೆ. ಯಾವುದೇ ರೀತಿಯ ಜಗಳವಾಡದೇ, ತಮ್ಮ ಮುಗ್ಧ ಸ್ವಭಾದಿಂದಾಗಿ ವೀಕ್ಷಕರಿಗೆ ಇಷ್ಟವಾಗಿದ್ದಾರೆ. ಹನುಮಂತ ಈ ಬಾರಿಯ ಟಾಪ್ 5 ಸ್ಪರ್ಧಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 

 


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+