Don't Miss!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- News ರಜನಿಕಾಂತ್, ವಿಜಯ್ ಸೇತುಪಥಿ, ಧನುಷ್.. ಯಾರೆಲ್ಲಾ ವೋಟ್ ಹಾಕಿದ್ರು?
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Automobiles Elevate: ಶ್ರೀಸಾಮಾನ್ಯನ ಬಿಎಂಡಬ್ಲ್ಯೂ.. ಹೋಂಡಾ ಎಲಿವೇಟ್ ಖರೀದಿಸಬೇಕೇ? ಆನ್-ರೋಡ್ ಬೆಲೆ ಎಷ್ಟು, EMI ಏನು?
- Finance ಆಪ್ ಸ್ಟೋರ್ನಿಂದ ವಾಟ್ಸಾಪ್, ಥ್ರೆಡ್ ತೆಗೆದುಹಾಕಿದ ಆಪಲ್!
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
Hitler Kalyana: ಲೀಲಾಗೆ ಮನೆಯಲ್ಲಿ ಬೆಲೆಯೇ ಇಲ್ಲ: ನಂಬಿಕೆ ದ್ರೋಹಿ ಎಂದ ಎಜೆ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಗ್ಯಾರೇಜ್ನಲ್ಲಿದ್ದ ಅಂತರಾ ಮತ್ತು ಆತನ ಸಿಡಿಯನ್ನು ಲೀಲಾನೇ ಆಚೆ ತಂದಿದ್ದು ಎಂದು ತಿಳಿದ ಕಾರಣ ಎಲ್ಲರ ಮುಂದೆ ಅವಮಾನ ಮಾಡಿ ಇನ್ಮುಂದೆ ನೀನು ನನ್ನ ಹೆಂಡತಿಯೇ ಅಲ್ಲ ಎಂದು ತಾಳಿಯನ್ನು ಕಿತ್ತು ಹಾಕುತ್ತಾನೆ.
ಸೊಸೆಯಂದಿರುವ ಲೀಲಾಳಿಗೆ ಇಷ್ಟು ದಿನ ಮೆರೆಯುತ್ತಿದ್ದೆ. ಈಗ ನೀನು ಇಂಥಹ ತಪ್ಪು ಮಾಡಿ ಅದು ಹೇಗೆ ಇಲ್ಲಿರುತ್ತೀಯಾ ಎಂದೆಲ್ಲಾ ಹೀಯಾಳಿಸುತ್ತಾರೆ. ಅಜ್ಜಿಯೂ ಕೂಡ ಲೀಲಾಳಿಗೆ ಬೈಯುತ್ತಾರೆ.
Paaru: ಅಖಿಲಾಂಡೇಶ್ವರಿ ಧರ್ಮಾಧಿಕಾರಿ ಪಟ್ಟ ಏರಲು ಮಗನೇ ಅಡ್ಡಿ!
ಎಜೆ ಲೀಲಾ ಮಾಡಿದ ಕೆಲಸವನ್ನು ನೆನಪಿಸಿಕೊಂಡು ತುಂಬಾ ಬೇಸರ ಮಾಡಿಕೊಂಡಿರುತ್ತಾನೆ. ಲೀಲಾ ಹೀಗೆ ಮಾಡಿದಳಲ್ಲಾ ಎಂದು ಯೋಚಿಸುತ್ತಿರುತ್ತಾನೆ.
ಲೀಲಾ ಮೇಲೆ ಕೆಂಡ ಕಾರಿದ ದುರ್ಗಾ
ಲೀಲಾ ಬಳಿ ಬಂದ ದುರ್ಗಾ ತನ್ನ ಮನದಾಳದ ಮಾತುಗಳನ್ನು ಆಡುತ್ತಾಳೆ. ತಾನೇಕೆ ಲೀಲಾ ಜೊತೆಗೆ ಸ್ನೇಹದಿಂದ ಇದ್ದಿದ್ದು, ಲೀಲಾ ಈ ಮನೆಗೆ ಸೊಸೆಯಾಗಿ ಬಂದಿರುವುದು ತನಗೆ ಇಷ್ಟವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾಳೆ. ಲೀಲಾಗೆ ದುರ್ಗಾ ಮಾತುಗಳನ್ನು ಕೇಳಿ ಶಾಕ್ ಆಗುತ್ತದೆ. ಇನ್ನು ಎಜೆ ನಿನ್ನನ್ನು ಕತ್ತು ಹಿಡಿದು ಆಚೆಗೆ ದಬ್ಬಲಿಲ್ಲ. ನೀನು ಹೆಣ್ಣಾಗಿ ಹುಟ್ಟಿ ತಪ್ಪು ಮಾಡಿದ್ದೀಯಾ. ಆದರೆ ನಾನು ನಿನ್ನನ್ನ ಆಚೆಗೆ ಹಾಕುತ್ತೀನಿ. ಈ ಮನೆಯಲ್ಲಿ ನೀನು ಇರುವ ಪ್ರತಿಯೊಂದು ಕ್ಷಣವೂ ನರಕ ಅನುಭವಿಸುವಂತೆ ನಾನು ಮಾಡುತ್ತೀನಿ ಎಂದು ಹೇಳುತ್ತಾಳೆ. ಇಷ್ಟು ದಿನದ್ದು ಒಂದು ಲೆಕ್ಕ ಆದರೆ, ಇನ್ಮುಂದೆ ಕೊಡೋದು ಬೇರೆ ಲೆಕ್ಕಾ ಎಂದು ಹೇಳಿ ಹೋಗುತ್ತಾಳೆ.
ನಂಬಿಕೆ ದ್ರೋಹಿ ಎಂದು ಬೈದ ಎಜೆ
ಎಜೆ ಕಾಲಿಗೆ ಗಾಯವಾಗಿರುತ್ತದೆ. ಇದನ್ನು ನೋಡಿದ ಲೀಲಾ ಔಷಧಿಯನ್ನು ತಂದು ಹಚ್ಚುತ್ತಾಳೆ. ಎಜೆಗೆ ಕೋಪ ಬರುತ್ತದೆ. ನೀನ್ಯಾಕೆ ಬಂದೆ ಎಂದು ಕೂಗಾಡುತ್ತಾನೆ. ಆಗ ಲೀಲಾ ಗಾಯಕ್ಕೆ ಔಷಧಿ ಹಚ್ಚದಿದ್ದರೆ ತೊಂದರೆಯಾಗುತ್ತೆ ಎಂದು ಹೇಳಿದ್ದಕ್ಕೆ, ಎಜೆ ಈ ಗಾಯ ಬೇಗ ವಾಸಿಯಾಗುತ್ತೆ. ಆದರೆ ನೀನು ಮಾಡಿರುವ ಗಾಯ ಜೀವನ ಪೂರ್ತಿ ನನ್ನನ್ನು ಕಾಡುತ್ತೆ ಎಂದು ಬೈಯುತ್ತಾನೆ. ನಿನ್ನಂತಹ ನಂಬಿಕೆ ದ್ರೋಹಿಯಿಂದ ಅಮೃತ ಕುಡಿದರೂ ಅದು ವಿಷ ಆಗುತ್ತೆ, ಗೆಟ್ ಔಟ್ ಎಂದು ಹೇಳುತ್ತಾನೆ.
ಲೀಲಾಗೆ ಬೈದ ಅಜ್ಜಿ
ಇದೇ ವೇಳೆಗೆ ಅಜ್ಜಿ ಬಂದು, ನನ್ನ ಮಗನನ್ನ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ನನ್ನ ಮಗ ಸೇವೆ ಮಾಡುವುದಕ್ಕೆ ನಾನಿದ್ದೀನಿ. ಬೇರೆಯವರಿಂದ ಮಾಡಿಸುವ ದುರ್ಗತಿ, ದುಃಸ್ಥಿತಿ ನನಗೆ ಇನ್ನೂ ಬಂದಿಲ್ಲ ಎಂದು ಬೈಯುತ್ತಾಳೆ. ನಿನ್ನನ್ನ ಸೊಸೆಯಿಂದ ಒಪ್ಪಿಕೊಂಡು ಜೊತೆಗಿದ್ದೆ ಆದರೆ ಈಗ ನಿನ್ನ ಮುಖ ನೋಡುವುದಕ್ಕೆ ನನ್ನ ಕೈಯಲ್ಲಿ ಆಗುತ್ತಿಲ್ಲ. ಇದನ್ನೆಲ್ಲಾ ಅರ್ಥ ಮಾಡಿಕೊಂಡು ಹೊರಟು ಹೋಗು ಎಂದು ಹೇಳುತ್ತಾಳೆ. ಬಳಿಕ ಎಜೆ ಜೊತೆಗೆ ಅಜ್ಜಿ ಕಣ್ಣಿರು ಹಾಕುತ್ತಾ ಕುಳಿತುಕೊಂಡು ಸಮಾಧಾನ ಮಾಡುತ್ತಾರೆ. ಲೀಲಾನ ನಂಬಿದೆ, ಆದರೆ ಅವಳು ನಂಬಿಕೆ ದ್ರೋಹ ಮಾಡಿದಳು. ಇನ್ನು ನಾನು ಯಾರನ್ನೂ ನಂಬುವುದಿಲ್ಲ ಎಂದು ಹೇಳುತ್ತಾನೆ. ಅಜ್ಜಿ ಇದ್ಯಾವುದೂ ಶಾಶ್ವತ ಅಲ್ಲ. ಎಲ್ಲಾ ಸರಿ ಹೋಗುತ್ತೆ ಎಂದು ಸಮಾಧಾನ ಮಾಡುತ್ತಾಳೆ.
ಲೀಲಾ ಪರ ಇರುವ ವಿಶ್ವರೂಪ್
ಇನ್ನು ವಿಶ್ವರೂಪ್ ಈ ಮನೆಯಲ್ಲಿ ಯಾರಿಗೂ ಸತ್ಯ ಗಿತ್ತಿಲ್ಲ. ಸದ್ಯಕ್ಕೆ ಈ ಮನೆಯಲ್ಲಿ ನೀವು ಇರುವುದು ಬೇಡ. ತವರು ಮನೆಗೆ ಹೋಗಿ ಬಿಡಿ. ನಾನೇ ಹೇಳುತ್ತೀನಿ ಆಮೇಲೆ ಬನ್ನಿ ಎಂದು ಹೇಳುತ್ತಾನೆ. ಆದರೆ ಲೀಲಾ, ವಿಶ್ವರೂಪ್ ಮಾತನ್ನು ಕೇಳುವುದಿಲ್ಲ. ಇದೇ ವೇಳೆಗೆ ಸರಸ್ವತಿ ಮತ್ತು ಲಕ್ಷ್ಮೀ ಬಂದು ಲೀಲಾಗೆ ಚುಚ್ಚಿ ಮಾತನಾಡುತ್ತಾರೆ. ಎಜೆಗೆ ಊಟ ಬಡಿಸುವಾಗಲೂ ಲೀಲಾಗೆ ಸೊಸೆಯಂದಿರು ಮತ್ತು ಅಜ್ಜಿ ಬೈಯುತ್ತಾರೆ.