Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಯಾಬಚ್ಚನ್ ಕ್ಷಮೆ ಒಲ್ಲೆ ಎಂದ ಎಂಎಸ್ ಎನ್
ಮುಂಬೈ, ಸೆ. 9 : ''ತಿಳಿದೋ ತಿಳಿಯದೆಯೋ ನಾನಾಡಿರುವ ಮಾತಿನಿಂದ ಮರಾಠಿ ಜನತೆಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ'' ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಮರಾಠಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ನಾನಾಡಿರುವ ಮಾತಿನಲ್ಲಿ ಇನ್ನೊಬ್ಬರ ಮನಸ್ಸು ನೋಯಿಸುವ ಹಾಗೂ ಭಾವನೆಗಳಿಗೆ ಧಕ್ಕೆ ತರುವ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು. ಕಳೆದ ವಾರ ಅಭಿಷೇಕ್ ಬಚ್ಚನ್ ನಟಿಸಿರುವ 'ದ್ರೋಣ' ಚಿತ್ರದ ಮುಹೂರ್ತ ಸಮಾರಂಭದಲ್ಲಿ ''ನಾವು ಮೂಲತಃ ಮಹಾರಾಷ್ಟ್ರದವರಲ್ಲ. ಹಾಗಾಗಿ ನಮ್ಮ ಮನೆಯಲ್ಲಿ ಮರಾಠಿ ಭಾಷೆಯಲ್ಲದೆ ಹಿಂದಿ ಮಾತನಾಡುತ್ತೇವೆ'' ಎಂದು ಜಯಾ ಬಚ್ಚನ್ ಹೇಳಿಕೆ ಕೊಟ್ಟು ಮರಾಠಿಗರಿಗೆ ನೋವುಂಟು ಮಾಡಿದ್ದರು. ಇದನ್ನು ವಿರೋಧಿಸಿದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಅಮಿತಾಭ್ ಸೇರಿದಂತೆ ಅವರ ಕುಟುಂಬ ಸದಸ್ಯರಾದ ಜಯಾ ಬಚ್ಚನ್, ಅಭಿಷೇಕ ಬಚ್ಚನ್ ಹಾಗೂ ಐಶ್ವರ್ಯ ರೈ ನಟಿಸಿರುವ ಯಾವುದೇ ಚಿತ್ರ ಹಾಗೂ ಜಾಹೀರಾತುಗಳ ಪ್ರದರ್ಶನವನ್ನು ಮಾಹಾರಾಷ್ಟ್ರದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಬೆದರಿಕೆ ಹಾಕಿದ್ದರು.
ಬದಲಾದ
ಜಯಾಬಚ್ಚನ್
ವರಸೆ
''ಮರಾಠಿ
ಭಾಷೆ
ಮತ್ತು
ಭಾಷಿಕರ
ಮೇಲೆ
ಅಪಾರ
ಅಭಿಮಾನ
ಹೊಂದಿದ್ದೇನೆ.ಅಷ್ಟೇ
ಅಲ್ಲ
ನನ್ನ
ಕುಟುಂಬ
ಎಲ್ಲ
ಸದಸ್ಯರು
ಮರಾಠಿಯನ್ನು
ಚೆನ್ನಾಗಿ
ಮಾತನಾಡುತ್ತಾರೆ.
ನನ್ನ
ಜೀವನದ
ಕೊನೆಯ
ಉಸಿರಿರುವವರೆಗೂ
ಮಾರಾಠಿ
ನೆಲದಲ್ಲೇ
ಜೀವನ
ನಡೆಸುತ್ತೇನೆ''
ಎಂದು
ಜಯಾಬಚ್ಚನ್
ತಮ್ಮ
ಡೈಲಾಗನ್ನು
ಕೊಂಚ
ಬದಲಾಯಿಸಿ
ಮರಾಠಿಗರ
ಕ್ಷಮೆ
ಯಾಚಿಸಿದ್ದಾರೆ.
ಆದರೆ
ಜಯಾ
ಬಚ್ಚನ್
ಈ
ರೀತಿ
ಕ್ಷಮೆಯಾಚಿಸಿರುವುದನ್ನು
ಎಂಎನ್ಎಸ್
ಸುತಾರಾಂ
ಒಪ್ಪುತ್ತಿಲ್ಲ.
ಕೆಲ
ಮರಾಠಿ
ಪತ್ರಿಕೆಗಳ
ಮೂಲಕ
ಬಹಿರಂಗವಾಗಿ
ಮರಾಠಿಗರ
ಕ್ಷಮೆ
ಕೇಳಬೇಕು
ಎಂದು
ಪಟ್ಟುಹಿಡಿದಿವೆ.
(ಏಜೆನ್ಸೀಸ್)