Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಿಗೆ ವಾಸಿಯಾಗದ 'ಕೂಲಿ' ಗಾಯ
ನಾನು ಮದ್ಯವ್ಯಸನಿಯಲ್ಲ ಆದರೂ, ಪಿತ್ತ ಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೇಳಿದ್ದಾರೆ. 28 ವರ್ಷಗಳ ಹಿಂದೆ, ಮನಮೋಹನ್ ದೇಸಾಯಿ ಅವರ ಕೂಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಹುತೇಕ ಪ್ರಾಣಕ್ಕೆ ಸಂಚಕಾರವಾಗಬಹುದಾಗಿದ್ದ ಪೆಟ್ಟು ತಿಂದು ಬದುಕುಳಿದ 67 ವರ್ಷದ ನಟ, ಸಾಮಾನ್ಯವಾಗಿ ಮದ್ಯಪಾನದ ಚಟ ಇರುವವರಲ್ಲಿ ಮಾತ್ರ ಕಾಣಬರುವ ಈ ಕಾಯಿಲೆ, ತುರ್ತುಸ್ಥಿತಿಯಲ್ಲಿ ನಡೆದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತ ಪಡೆದ ಕಾರಣ ಅಪರಿಚಿತ ದಾನಿಯ ಮೂಲಕ ತಮಗೆ ಬಂದಿರಬಹುದು ಎಂದು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
1982ರ ಆಗಸ್ಟ್ 2 ರಂದು ಸಹ ನಟ ಪುನೀತ್ ಇಸ್ಸಾರ್ ಜತೆ ಹೊಡೆದಾಟದ ಸನ್ನಿವೇಶವೊಂದರಲ್ಲಿ ಬಚ್ಚನ್ ರ ಕರುಳಿಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹಲವಾರು ತಿಂಗಳ ಕಾಲ ಅವರು ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು. ಯಾವುದೋ ಒಬ್ಬ ದಾನಿಯ ರಕ್ತದಲ್ಲಿ ಕಾಮಾಲೆ (ಆಸ್ಟ್ರೇಲಿಯನ್ ಅಂಟಿಜೆನ್ ಹೆಪಟೈಟಿಸ್) ಸೋಂಕು ಇದ್ದಿರಬಹುದು.
1982ರಲ್ಲಿ ಈ ಬಗೆಯ ಕಾಮಾಲೆ ಬಗ್ಗೆ ಯಾರಿಗೂ ಗೊತ್ತೂ ಇರಲಿಲ್ಲ. ಇದು ನನ್ನ ಶರೀರದಲ್ಲಿ ಪ್ರವೇಶಿಸಿ ವ್ರಣದಂತಾಗಿ ಪಿತ್ತಜನಕಾಂಗವನ್ನು ಹದಗೆಡಿಸಿದೆ. 8 ವರ್ಷಗಳ ಹಿಂದೆ ಎಂಆರ್ಐ ಸ್ಕ್ಯಾನಿಂಗ್ ಸಮಯದಲ್ಲಿ ನನ್ನ ಪಿತ್ತಜನಕಾಂಗದ ಶೇ. 25 ರಷ್ಟು ಭಾಗವನ್ನು ಅದು ನಾಶ ಪಡಿಸಿರು ವುದು ತಿಳಿದುಬಂದಿದೆ ಎಂದು ಅಮಿತಾಬ್ ಹೇಳಿಕೊಂಡಿದ್ದಾರೆ.